ಕಾಣಿಯೂರು : ಕುದ್ಮಾರು ನ. ಉ.ಹಿ.ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿಯ ಅಧ್ಯಕ್ಷರಾಗಿ ದೇವರಾಜ್ ನೂಜಿ, ಉಪಾಧ್ಯಕ್ಷರಾಗಿ ನವ್ಯಾ ಅನ್ಯಾಡಿ ಆಯ್ಕೆಯಾಗಿದ್ದಾರೆ.
ಕುದ್ಮಾರು ನ. ಉ.ಹಿ.ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿ ರಚನೆಯನ್ನು ಬೆಳಂದೂರು ಗ್ರಾಮ ಪಂಚಾಯತ್ ನಾಗರಿಕ ಸೌಲಭ್ಯ ಸಮಿತಿಯ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಭಾಸ್ಕರ ಪೂಜಾರಿ ಕೊಡಂಗೆಯವರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಲೋಹಿತಾಕ್ಷ ಕಡೆಂಜಿಕಟ್ಟ, ಪ್ರವೀಣ್ ಕೆರೆನಾರು, ಹಾಗೂ ಸವಣೂರು ಸಿ.ಆರ್.ಪಿ ಜಯಂತ್ ವೈಯವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ವೇಳೆ ಇಲಾಖಾ ನಿಯಮಾನುಸಾರ ಪ.ಜಾತಿ,ಪ ಪಂಗಡದಿಂದ ಲಲಿತಾ ಚಾಪಳ್ಳಿ, ವನಿತಾ, ಅಲ್ಪಸಂಖ್ಯಾತ ವರ್ಗದ ಪೋಷಕ ಪ್ರತಿನಿಧಿಗಳಾಗಿ ಮುಹಮ್ಮದ್ ಬಶೀರ್ ನೂಜೋಲ್ಡಡ್ಕ, ಅತಿಕಾ ಜನತಾಗೃಹ, ಮಹಮ್ಮದ್ ರಫೀಶ್ ರೂರ, ರಹಮತ್ ಜನತಾ ಗ್ರಹ, ಜಲೀಲ್ ಶೂರ, ಹಿಂದುಳಿದ ವರ್ಗದಿಂದ ರಮ್ಯಾ ಪಟ್ಟೆ, ದಿವ್ಯ ಕೆರೆನಾರು, ಗೀತಾ ರೊಯಕ್ಕುಡ, ಪೂರ್ಣಿಮಾ ಪಳ್ಳತ್ತಾರು, ದಾಮೋದರ ನಾಕಿರಣ, ಆನಂದ ಗೌಡ ಸೌತಮಾರು, ರಮೇಶ್ ನಡುಮನೆ, ಯೋಗೀಶ ಬರೆಪ್ಪಾಡಿ, ಗಣೇಶ ಕೊಯಕ್ಕುಡೆ ಆಯ್ಕೆಯಾಗಿದ್ದಾರೆ.
ನಾಮ ನಿರ್ದೇಶಿತ ಸದಸ್ಯರಾಗಿ ಗ್ರಾಮ ಪಂಚಾಯತ್ ಸದಸ್ಯೆ ತಾರಾ ಅನ್ಯಾಡಿ, ವಿದ್ಯಾರ್ಥಿ ಪ್ರತಿನಿಧಿ ಮಹಮ್ಮದ್ ತಾಜುದ್ದೀನ್, ಶಿಕ್ಷರ ಪ್ರತಿನಿಧಿ ವೀರಾ ಡಿ ಸೋಜ, ಪದನಿಮಿತ್ತ ಸದಸ್ಯರಾಗಿ ಶಾಲಾ ಮುಖ್ಯಗುರು ಕುಶಾಲಪ್ಪ ಬಿ, ಅಂಗನವಾಡಿ ಕಾರ್ಯಕರ್ತೆ ವಸಂತಿ, ಆರೋಗ್ಯ ಕಾರ್ಯಕರ್ತೆ ಸುಮತಿಯವರನ್ನು ಅಯ್ಕೆ ಮಾಡಲಾಯಿತು.