ಪದ್ಮರಾಜ್ ಬಿ.ಸಿ. ಚಾರ್ವಾಕ ಅವರಿಗೆ ಸಂಗೀತ ಕಲಾನಿಧಿ ರಾಜ್ಯ ಪ್ರಶಸ್ತಿ | ಸುಳ್ಯದಲ್ಲಿ ನಡೆದ ಹಾಡೊಂದು ನಾ ಹಾಡುವೆನು-2023 ಕಾರ್ಯಕ್ರಮದಲ್ಲಿ ಪ್ರದಾನ

ಪುತ್ತೂರು : ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ನಡೆಸಿದ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು-2023 ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಪದ್ಮರಾಜ್ ಬಿ.ಸಿ. ಚಾರ್ವಾಕ ಅವರಿಗೆ 2023ನೇ ಸಾಲಿನ “ಸಂಗೀತ ಕಲಾನಿಧಿ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ವಾಷ್ಕರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ, ಸಂಘಟಕ, ಸಾಹಿತಿ ಮತ್ತು ಚಿತ್ರ ನಿರ್ದೇಶಕ ಎಚ್.ಭೀಮರಾವ್ ವಾಷ್ಠರ್ ಪ್ರಶಸ್ತಿ ನೀಡಿ ಗೌರವಿಸಿದರು.

ಪದ್ಮರಾಜ್ ಅವರು ಸಂಗೀತ, ಫಿಲಂ ನಿರ್ದೇಶಕರಾಗಿ, ಕಾರ್ಯಕ್ರಮ ನಿರೂಪಕರಾಗಿ, ಸಾಹಿತಿ ಗಾಯಕರಾಗಿ ಹಾಗೂ ಹೊಸ ಕಿರುಚಿತ್ರ “ಕಲಹ”ದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಶ್ರೀರಾಗ್ ಮ್ಯೂಸಿಕ್ಸ್ ಪುತ್ತೂರು, ಮಂಗಳೂರು ತಂಡದ ನಿರ್ದೇಶಕರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಗಾಯಕರಾದ ನವೀನ್‍ ಪುತ್ತೂರು, ಚಂದ್ರಶೇಖರ್ ಹೆಗ್ಡೆ, ವಸಂತ್ ಬಾರಡ್ಕ, ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಮತ್ತಿತರರು ಉಪಸ್ಥಿತರಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top