ಬಲಮುರಿ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ | ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ

ಪುತ್ತೂರು : ಬನ್ನೂರಿನ ಬಲಮುರಿ ಶ್ರೀ ವಿದ್ಯಾಗಣಪತಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಹಸಿರುವಾಣಿ ಮೆರವಣಿಗೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠದೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರಿಗೆ ಭಗವಾಧ್ವಜ ನೀಡಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ  ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತೆಂಗಿನ ಕಾಯಿ ಹೊಡೆದು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಪುರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್, ಮುರಳಿ ಕೃಷ್ಣಭಟ್ ಹಸಂತಡ್ಕ,ಜಯಾನಂದ ವಕೀಲರು, ಸುಬ್ರಹ್ಮಣ್ಯ ಭಟ್ ಮುದ್ರಾಜೆ, ರಾಮಚಂದ ಭಟ್ ಕೊಡಿಪಾಡಿ, ಪುಲ ಈಶ್ವರ ಭಟ್, ಸಂತೋಷ್ ಬೋಳಂತಾಯ, ಮುಗಳಿ ಈಶ್ವರ ಭಟ್, ವೆಂಕಟಕೃಷ್ಣ, ವೀಣಾಮನಿ ನಾರಾಯಣ್ ಭಟ್, ಹಾಗೂ ಮಾಣಿ, ಕಬಕ, ಬೆಟ್ಟಂಪಾಡಿ, ಪುತ್ತೂರು ವಲಯದವರು ಉಪಸ್ಥಿತರಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top