ಮತ್ತೆ ಬೆನ್ನಟ್ಟಿದ ಕಾಡಾನೆ | ಸ್ವಲ್ಪದರಲ್ಲೇ ಮಹಿಳೆ ಬಚಾವ್ | ಕೊಣಾಜೆ ಗ್ರಾಮದ ಪುತ್ತಿಗೆಯಲ್ಲಿ ಘಟನೆ

ಕಡಬ: ಆನೆ ಅವಾಂತರಕ್ಕೆ ಇಬ್ಬರು ಬಲಿಯಾದ ಬೆನ್ನಲ್ಲೇ, ಮತ್ತೊಬ್ಬಾಕೆ ಮಹಿಳೆಯನ್ನು ಆನೆ ಬೆನ್ನಟ್ಟಿದ ಘಟನೆ ಫೆ. 21ರಂದು ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ.

ಕೊಣಾಜೆ ಗ್ರಾಮದ ಪುತ್ತಿಗೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯೋರ್ವರು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪಿಕಪಿನಲ್ಲಿ ತಮ್ಮ ಮನೆಗೆ ಆಗಮಿಸಿದ ಮಹಿಳೆ, ಪಿಕಪ್ ವಾಹನದಿಂದ ಇಳಿದುಕೊಂಡು ಹೋಗುತ್ತಿದ್ದಾಗ ಆನೆ ಬೆನ್ನಟ್ಟಿದೆ. ವಾಹನದಿಂದ ಇಳಿದ ಮಹಿಳೆ, ಬೊಬ್ಬೆ ಹಾಕುತ್ತಾ ಓಡಿ ತಪ್ಪಿಸಿಕೊಂಡಿದ್ದಾರೆ. ಇದರಿಂದಾಗಿ ತಕ್ಷಣ ಜನರು ಜಮಾಯಿಸಿ, ಆನೆಯನ್ನು ಬೆನ್ನಟ್ಟಿದ್ದಾರೆ ಎಂದು ತಿಳಿದುಬಂದಿದೆ.





























 
 

ಇಬ್ಬರನ್ನು ಬಲಿ ತೆಗೆದುಕೊಂಡ ರೆಂಜಿಲಾಡಿಯ ನೈಲ ಎಂಬಲ್ಲಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿದೆ ಪುತ್ತಿಗೆ. ಅಂದರೆ ಆಸುಪಾಸಿನ ಗ್ರಾಮಗಳಲ್ಲಿ ಆನೆ ಓಡಾಟ ನಡೆಸುತ್ತಿದೆ. ಸಂಜೆಯ ಹೊತ್ತಿಗೆ ಮಾರ್ಗಕ್ಕೆ ಇಳಿಯುವ ಆನೆಗಳು, ಮನೆಗಳಿರುವ ಪ್ರದೇಶಗಳಿಗೆ ದಾಳಿ ನಡೆಸುತ್ತವೆ. ಆಗ ಎದುರಾಗುವ ಜನರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಆದ್ದರಿಂದ ಜನರು ಗರ್ನಲ್ ಎಸೆದು ಆನೆಯನ್ನು ಬೆನ್ನಟ್ಟುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top