ನಾಳೆ (ಫೆ.21) ಶ್ರೀ ಸತ್ಯಸಾಯಿ ಮಂದಿರದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಪುತ್ತೂರು : ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿ, ದ.ಕ.ಜಿಲ್ಲಾ ವೆನ್‍ಲಾಕ್‍ ಆಸ್ಪತ್ರೆ ಹಾಗೂ ಪುತ್ತೂರು ಸಹಕಾರಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಫೆ.21 ಮಂಗಳವಾರ ಬೆಳಗ್ಗೆ 9.30 ಕ್ಕೆ ಕೋರ್ಟ್ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಮಂದಿರದಲ್ಲಿ ನಡೆಯಲಿದೆ.

ಶಿಬಿರ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ರ ತನಕ ನಡೆಯಲಿದ್ದು, ಬೆಳಗ್ಗೆ 8.30 ರಿಂದ 11 ಗಂಟೆ ತನಕ ದಾಖಲಾತಿ ನಡೆಯಲಿದೆ. ಮೊದಲು ನೋಂದಾವಣೆ ಮಾಡಿದ 250 ಮಂದಿಗೆ ಮಾತ್ರ ಅವಕಾಶ. ಶಿಬಿರದಲ್ಲಿ ಲಭ್ಯ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುವುದು.

ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಮಂಗಳೂರಿನ ವೆನ್‍ಲಾಕ್‍ ಆಸ್ಪತ್ರೆಯಲ್ಲಿ ನಡೆಸಲಾಗುವುದು. ಶಸ್ತ್ರ ಚಿಕಿತ್ಸೆಗೆ ಬರುವವರು ಆಧಾರ್‍ ಮತ್ತು ರೇಷನ್‍ ಕಾರ್ಡ್ ನ ಪ್ರತಿಯೊಂದಿಗೆ ಓವ‍್ ಸಹಾಯರೊಂದಿಗೆ ಚಿಕಿತ್ಸೆಗೆ ಬರುವುದು. ಸಾರ್ವಜನಿಕರು ಶಿಬಿರದ ಪ್ರಯೊಜನ ಪಡೆದುಕೊಳ್ಳುವಂತೆ ಸಮಿತಿ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top