ಎನ್‍ಎಸ್‍ ಯುಐ ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ

ಪುತ್ತೂರು : ಬೆಂಗಳೂರಿನ ಶಿರೂರ್ ಪಾರ್ಕಿನಲ್ಲಿ ನಡೆದ ರಾಜ್ಯ ಎನ್ಎಸ್‍ಯುಐ ಕಾರ್ಯಕಾರಿಣಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಎನ್ಎಸ್ ಯುಐ  ಸಮಿತಿ ಉಪಾಧ್ಯಕ್ಷರಾದ ಫಾರೂಕ್ ಬಾಯಂಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ ಮಾಡಿದರು.

2014ರಿಂದ ನಗರ ಹಾಗೂ ತಾಲೂಕು ಮಟ್ಟದಲ್ಲಿ ಎನ್‍ಎಸ್ ಯುಐ ಸಂಘಟನೆಯಲ್ಲಿ ಸಕ್ರಿಯರಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿರುವ ಫಾರೂಕ್ ಅವರು ರಾಜ್ಯ ಮಟ್ಟದ ಇಂದಿರಾ ಕಾರ್ಯಗಾರ, ಪ್ರೇರಣಾ ಜಿಲ್ಲಾ ಕಾರ್ಯಾಗಾರ ಆಯೋಜಿಸುವ ಮೂಲಕ ಎನ್. ಎಸ್.ಯು.ಐಗೆ ಹೊಸ ಹುರುಪು ನೀಡಿದ್ದರು.ಇವರ ಉಸ್ತುವಾರಿಯಲ್ಲಿ ಬರುವ 6 ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಿದ ಸಾಧನೆಗಾಗಿ ಅವರಿಗೆ “ರಾಜ್ಯ ಉತ್ತಮ ಪದಾಧಿಕಾರಿ” ಪ್ರಶಸ್ತಿ ನೀಡಲಾಗಿದೆ. ಅವರು 2021ರಲ್ಲಿ ಎನ್ಎಸ್ ಯುಐ ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ರಾಜ್ಯ ಎನ್‍ಎಸ್‍ ಯುಐ ಅಧ್ಯಕ್ಷ ಕೀರ್ತಿ ಗಣೇಶ್, ರಾಷ್ಟ್ರೀಯ ಕಾರ್ಯದರ್ಶಿ ಎರಿಕ್ ಸ್ಟಿಫನ್ ಉಪಸ್ಥಿತರಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top