ಬೈಕ್ ಅಪಘಾತಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ | ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ಹಸ್ತಾಂತರ

ಸವಣೂರು: ಬೈಕ್‍ ಅಪಘಾತದಿಂದ ಗಂಭೀರ ಗಾಯಗೊಂಡು ಎರಡು ಬಾಡಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ ಅವರಿಗೆ ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ನೀಡಲಾಯಿತು.

ಜಗದೀಶ್‍ ಅವರು ಬೈಕ್ ನಲ್ಲಿ ಚಲಾಯಿಸುತ್ತಿದ್ದ ವೇಳೆ ನಾಯಿಯೊಂದು ಅಡ್ಡ ಬಂದು ಬೈಕ್ ಮಗುಚಿದ ಪರಿಣಾಮ ಕಾಲಿಗೆ ಗಂಭೀರ ಗಾಯವಾಗಿತ್ತು.

ಈ ಸಂಧರ್ಭದಲ್ಲಿ ಸವಣೂರು ಶಕ್ತಿಕೇಂದ್ರದ ಅಧ್ಯಕ್ಷ ಚೇತನ್ ಕೊಡಿಬೈಲ್, ಸುಳ್ಯ ಮಂಡಲ ಎಸ್.ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸುಳ್ಯ ಮಂಡಲ ಸಮಿತಿಯ ಸದಸ್ಯ ತಾರಾನಾಥ ಕಾಯರ್ಗ, ಮೊಗರು ಬೂತ್ ಸಮಿತಿ ಅಧ್ಯಕ್ಷ ರಾಜೇಶ್ ಇಡ್ಯಾಡಿ, ಕಾರ್ಯದರ್ಶಿ ಹಿತೇಶ್ ಮೆದು, ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೊಡಿಬೈಲ್, ಕಾರ್ಯಕರ್ತರಾದ ದಯಾನಂದ ಮೆದು, ಶೋಧನ್ ಬೆಳಂದೂರು ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top