ಹಿಂದೂ ಸಂಘಟನೆಯ ಮುಖಂಡ ಅರ್ಜುನ್ ಮಾಡೂರಿಗೆ ಅನ್ಯಕೋಮಿನ ವ್ಯಕ್ತಿಯಿಂದ ಹಲ್ಲೆ | ಠಾಣೆಗೆ ಆಗಮಿಸಿದ ಬಿಜೆಪಿ ಹಾಗೂ ಸಂಘಪರಿವಾರದ ಪ್ರಮುಖರು

ಪುತ್ತೂರು: ಹಿಂದೂ ಸಂಘಟನೆಯ ಮುಖಂಡರೋರ್ವರಿಗೆ ಕೇರಳದ ಅನ್ಯಮತಿಯ ವ್ಯಕ್ತಿಯೋರ್ವ ಠಾಣೆಯೊಳಗಡೆಯೇ ಹಲ್ಲೆ ನಡೆಸಿದ ಘಟನೆ ಉಳ್ಳಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಎಸ್.ಕೆ.ಬಿ ಟೈಗರ್ಸ್ ಪ್ರಮುಖರಾದ ಶರತ್ ರ ಕಾರು ಹಾಗೂ ಕೇರಳದ ಮಂಜೇಶ್ವರದ ವ್ಯಕ್ತಿ ಕಾರು ನಡುವೆ ಅಪಘಾತ ಸಂಭವಿಸಿ ನಂತರ ಉಳ್ಳಾಲ ಠಾಣೆಯಲ್ಲಿ ಮಾತುಕತೆ ಸಂಧರ್ಭ ಉಳ್ಳಾಲ ಬಜರಂಗದಳದ ಮುಖಂಡರೋರಾದ ಅರ್ಜುನ್ ಮಾಡೂರುರವರಿಗೆ ಕೇರಳದ ಅನ್ಯಮತಿಯ ವ್ಯಕ್ತಿಯೋರ್ವ ಠಾಣೆಯೊಳಗಡೆಯೇ ಹಲ್ಲೆ ನಡೆಸಿದ ಘಟನೆ  ತಡರಾತ್ರಿ ನಡೆದಿತ್ತು.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ  ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಸಂಘಪರಿವಾರದ ಮುಖಂಡರಾದ  ಗೋಪಾಲ್ ಕುತ್ತಾರ್, ಪುನೀತ್ ಅತ್ತಾವರ ಠಾಣಾಧಿಕಾರಿಯವರಲ್ಲಿ ಮಾತುಕತೆ ನಡೆಸಿದರು.





































 
 

ಪುತ್ತೂರು ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ,

ಮಂಗಳೂರು ಮಂಡಲ ಯುವಮೋರ್ಚಾ ಉಪಾಧ್ಯಕ್ಷ ಸೂರಜ್ ಸಾಗರ್ ಕುಂಪಲ , ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವೀಶಂಕರ್ , ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಕಾಪಿಕಾಡ್ ಸಹಿತ ನೂರಾರು ಕಾರ್ಯಕರ್ತರು ಮಧ್ಯರಾತ್ರಿ ಠಾಣೆಯಲ್ಲಿ ಸೇರಿ ಘಟನೆಯನ್ನು ತೀವ್ರ ಖಂಡಿಸಿದರು.

ಹಲ್ಲೆ ನಡೆಸಿದ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top