ಪುತ್ತೂರು: ಶ್ರೀ ಮಹಾಲಿಂಗೇಶ್ವರ ಸಭಾಭವನದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಎಸ್ ಎಂ ಟಿ ಶಾಖೆಯ ವಾರ್ಷಿಕ ಪೂಜಾ ಕಾರ್ಯಕ್ರಮ ಇಂದು ನಡೆಯಿತು.
ಪೂಜಾ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಹೋಮ ಮತ್ತು ಲಕ್ಷ್ಮೀ ಪೂಜೆ ಜರಗಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿ, ಸಂಘದ ಮಾತೃ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ರಾಮಕೃಷ್ಣ ಗೌಡ ಕೆ., ಜಿನ್ನಪ್ಪ ಗೌಡ ಮಳುವೇಲು, ಮಾಜಿ ನಿರ್ದೇಶಕರಾದ ಶಿವರಾಮ ಗೌಡ ಇದ್ಯಪೆ, ವಿಜಯ ಕೇಶವ ಗೌಡ, ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಬೆಳ್ಳಿಯಪ್ಪ ಗೌಡ, ಯುವ ಸಂಘದ ಅಧ್ಯಕ್ಷ ಅಮರನಾಥ್ ಬಪ್ಪಳಿಗೆ, ಎಸ್ ಎಂಟಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಸುರೇಶ್ ಗೌಡ ಕಲ್ಲಾರೆ, ಸೋಮಪ್ಪ ಗೌಡ ಬಡಾವು, ಸೀತಾರಾಮ ಗೌಡ ಪೆರಿಯತ್ತೋಡಿ, ಗೌರಿ ಬನ್ನೂರು, ಮೀನಾಕ್ಷಿ ಡಿ. ಗೌಡ, ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಧರ ಗೌಡ ಕಣಜಾಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಎಪಿಎಂಸಿ ರಸ್ತೆ ಶಾಖೆಯ ಸಲಹಾ ಸಮಿತಿಯ ವಿಶ್ವನಾಥ ಗೌಡ ಕೆ., ಲಿಂಗಪ್ಪ ಗೌಡ ತೆಂಕಿಲ, ದಯಾನಂದ ಕೆ.ಎಸ್., ಸಂಧ್ಯಾ ಶಶಿಧರ್, ಉಮೇಶ್ ಮಳುವೇಲು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಹರೀಶ್, ಕೊರಗಪ್ಪ ಗೌಡ ಹಾಗೂ ಸಿಬ್ಬಂದಿ ವರ್ಗ, ಒಕ್ಕೂಟದ ಸ್ವಸಸಹಾಯ ಸಂಘದ ಅಧ್ಯಕ್ಷರು, ಸಿಬ್ಬಂದಿಗಳು, ಕುಂಬ್ರ ಶಾಖಾ ಸಲಹಾ ಸಮಿತಿಯ ಶ್ರೀಧರ ಗೌಡ ಅಂಗಡಿಹಿತ್ಲು, ಆಲಂಕಾರು ಸಲಹಾ ಸಮಿತಿ ಸದಸ್ಯ ಚಕ್ರಪಾಣಿ, ಸ್ಥಾಪಕ ಪ್ರವರ್ತಕ ಗಣಪಣ್ಣ ಗೌಡ ಕೆಮ್ಮಿಂಜೆ, ಐಟಿಐ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸದಸ್ಯರು, ಗ್ರಾಹಕ ಮಿತ್ರರಾದ ಆನಂದ ಗೌಡ, ರಾಧಾಕೃಷ್ಣ ಗೌಡ ನೆಲ್ಲಿಕಟ್ಟೆ, ಎಸ್ ಎಂಸಿ ಶಾಖಾ ಮ್ಯಾನೇಜರ್ ನಿಶ್ಚಿತ ಯು.ಡಿ., ರಕ್ಷಿತ್ ಜಿ.ಎನ್., ದೇವರಾಜ್, ಯಶವಂತ, ಭವ್ಯಶ್ರೀ, ಎಪಿಎಂಸಿ ಶಾಖಾ ಮ್ಯಾನೇಜರ್ ತೇಜಸ್ವಿನಿ, ಅಮಿತ ಡಿ., ಯಕ್ಷಿತ್, ವಿಟ್ಲ ಶಾಖಾ ಸಿಬ್ಬಂದಿ ಪ್ರಕಾಶ್, ಎಪಿಎಂಸಿ ವ್ಯಾಲ್ಯೂ ಮೇಕರ್ ಶಿವರಾಮ ಗೌಡ ಉಪಸ್ಥಿತರಿದ್ದರು.
























