ಮಹಿಳೆಯನ್ನು ಕೊಂದು ಮೃತದೇಹವನ್ನು ಫ್ರಿಜ್‌ನಲ್ಲಿಟ್ಟು ಹಂತಕ ಎಸ್ಕೇಪ್‌

ಬೆಂಗಳೂರನ್ನು ಬೆಚ್ಚಿಬೀಳಿಸಿದ ಶ್ರದ್ಧಾ ವಾಕರ್‌ ಮಾದರಿ ಹತ್ಯೆ

ಬೆಂಗಳೂರು: ದಿಲ್ಲಿಯಲ್ಲಿ ಸಂಭವಿಸಿದ ಶ್ರದ್ಧಾ ವಾಕರ್‌ ಹತ್ಯೆ ಮಾದರಿಯ ಕೃತ್ಯವೊಂದು ಬೆಂಗಳೂರಿನಲ್ಲಿ ನಡೆದಿರುವುದು ಶನಿವಾರ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಶವವನ್ನು 28 ತುಂಡು ಮಾಡಿ ಫ್ರಿಜ್‌ನಲ್ಲಿಟ್ಟಿರುವ ಭಯಾನಕ ಘಟನೆ ವೈಯಾಲಿಕಾವಲ್‌ನ ಪೈಪ್‌ಲೈನ್‌ ರಸ್ತೆಯ ವೀರಣ್ಣ ಭವನದ ಬಳಿ ನಡೆದಿದೆ. ಮೃತ ಮಹಿಳೆಯ ತಾಯಿ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಜೊತೆ ನಿಕಟ ಸಂಪರ್ಕದಲ್ಲಿದ್ದ ಓರ್ವ ಯುವಕನ ಮೇಲೆ ಪೊಲೀಸರಿಗೆ ಅನುಮಾನವಿದೆ.

ಬಿಹಾರ ಮೂಲದ ಮಹಾಲಕ್ಷ್ಮಿ(29) ಕೊಲೆಯಾದ ಮಹಿಳೆ. ಈಕೆ ಮೊದಲು ಗಂಡ ಮತ್ತು 4 ವರ್ಷದ ಮಗುವಿನೊಂದಿಗೆ ನೆಲಮಂಗಲದಲ್ಲಿ ವಾಸವಾಗಿದ್ದರು. 6 ತಿಂಗಳ ಹಿಂದೆ ಗಂಡ-ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆ ಮಹಾಲಕ್ಷ್ಮಿಗಂಡನಿಂದ ದೂರವಾಗಿ 3 ತಿಂಗಳಿನಿಂದ ಒಬ್ಬಂಟಿಯಾಗಿ ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಕೆ ವಾಸವಿದ್ದ ಮನೆಯಿಂದ ಎರಡು ದಿನದಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದವರು ದೂರಿದ ಹಿನ್ನೆಲೆಯಲ್ಲಿ ತಾಯಿ ಸೀಮಾ ಅವರನ್ನು ಕರೆಸಿ ಬಾಗಿಲು ತೆರೆದು ನೋಡಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ.





























 
 

ಮಹಾಲಕ್ಷ್ಮಿಗಂಡ ಹೇಮಂತ್ ದಾಸ್ ಮತ್ತು ಮಗುವಿನೊಂದಿಗೆ ನೆಲಮಂಗಲ ನಗರದ ಲೋಹತ್ ನಗರದಲ್ಲಿ ವಾಸ ಮಾಡುತ್ತಿದ್ದರು. 2023ರ ಡಿಸೆಂಬರ್ 1ರಂದು ಗಂಡ-ಹೆಂಡತಿ ನಡುವೆ ಗಲಾಟೆ ನಡೆದು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸರು ಎನ್‌ಸಿ ದಾಖಲು ಮಾಡಿ ಇಬ್ಬರನ್ನೂ ಕರೆಸಿ ರಾಜಿ ಸಂಧಾನ ಮಾಡಿದ್ದರು. ನಂತರ ಇಬ್ಬರು ಒಟ್ಟಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹೇಮಂತ್ ದಾಸ್ ನೇಪಾಳ ಮೂಲದವರಾಗಿದ್ದು, ಪತ್ನಿ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಗಂಡನಿಗೆ ಅನುಮಾನವಿತ್ತು ಎನ್ನಲಾಗಿದೆ. ಪತ್ನಿಗೆ ಅನ್ಯ ಸಮುದಾಯದ ಯುವಕನ ಸಂಪರ್ಕ ಇದ್ದ ಬಗ್ಗೆ ಪತಿ ಹೇಮಂತ್ ದಾಸ್ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಬಳಿಕ ಮಹಾಲಕ್ಷ್ಮಿ ಗಂಡನನ್ನು ತೊರೆದು ಬೆಂಗಳೂರು ನಗರದಲ್ಲಿ ವಾಸವಿದ್ದರು. ಗಂಡ ಮತ್ತು ಆಕೆಯ ನಾಲ್ಕು ವರ್ಷದ ಮಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮೇಲಿನ ಮನೆಯವರಿಗೆ ಸಣ್ಣ ಪ್ರಮಾಣದಲ್ಲಿ ವಾಸನೆ ಬಂದಿದೆ. ಆದಾದ ಮೇಲೆ ಹೆಚ್ಚಾಗಿ ವಾಸನೆ ಬಗ್ಗೆ ಯಾರು ಗಮನ ಹರಿಸಿಲ್ಲ. ಅಕ್ಕಪಕ್ಕದ ಏರಿಯಾ ಸಹ ಸ್ವಲ್ಪಮಟ್ಟಿಗೆ ಗಲೀಜಾಗಿರುವ ಕಾರಣ ವಾಸನೆ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ. ಮೃತದೇಹ ಫ್ರಿಡ್ಜ್​ನಲ್ಲಿ ಇದ್ದ ಕಾರಣ ಹೆಚ್ಚು ವಾಸನೆ ಬಂದಿಲ್ಲ. ಪ್ರತಿ ನಿತ್ಯ ಬೈಕ್‌ನಲ್ಲಿ ಓರ್ವ ಮನೆಗೆ ಪಿಕಪ್‌, ಡ್ರಾಪ್‌ ಮಾಡುತ್ತಿದ್ದ. ಈತನ ಮೇಲೆ ಅನುಮಾನವಿದೆ. ಸೆಪ್ಟೆಂಬರ್ 2ರಂದು ಮಹಾಲಕ್ಷ್ಮೀ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. 19 ದಿನಗಳ ಹಿಂದೆಯೇ ಮಹಾಲಕ್ಷ್ಮೀಯನ್ನು ಕೊಲೆಗೈದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ತಲೆಯನ್ನು ಫ್ರಿಡ್ಜ್​ನ ತಳ ಭಾಗದಲ್ಲಿ, ಕೈ ಮತ್ತು ಕಾಲುಗಳನ್ನು ಮೇಲ್ಬಾಗದಲ್ಲಿ ಇಡಲಾಗಿತ್ತು. ಮುಖ ಹೊರಗೆ ಕಾಣಿಸದಂತೆ ತಿರುಗಿಸಿ ಇಡಲಾಗಿತ್ತು. ದೇಹವನ್ನು ತುಂಡು ಮಾಡಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top