ಅಡಿಕೆ ಖರೀದಿಯಲ್ಲಿ ಸವಣೂರು ಸಿ.ಎ.ಬ್ಯಾಂಕ್‍ನ ಮಾಸ್ ಸಂಸ್ಥೆ ಪ್ರಥಮ | ಗೌರವಾರ್ಪಣೆ

ಮಂಗಳೂರು: ಅಡಿಕೆ ಖರೀದಿಯಲ್ಲಿ, ಉಭಯ ಜಿಲ್ಲೆಗಳಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿ ಪ್ರಥಮ ಸ್ಥಾನವನ್ನು ಪಡೆದಿರುವ ಸವಣೂರು ಸಿ ಎ ಬ್ಯಾಂಕ್ ಮಾಸ್ ಶಾಖೆಯನ್ನು ಮಂಗಳೂರು ಬೈಕಂಪಾಡಿಯಲ್ಲಿ ಜರುಗಿದ ಮಾಸ್ ಸಂಸ್ಥೆಯ ಮಹಾಸಭೆಯಲ್ಲಿ ಅಭಿನಂದಿಸಲಾಯಿತು.

ಸವಣೂರು ಸಿ ಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ, ಮಾಸ್ ಶಾಖೆಯ ಮುಖ್ಯಸ್ಥ ಯತೀಶ್ ಅವರಿಗೆ ಗೌರವಾರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಮಾಸ್ ಸಂಸ್ಥೆಯ ಅಧ್ಯಕ್ಷ ಸವಣೂರು ಸೀತಾರಾಮ ರೈ ನಿರ್ದೇಶಕರು ಸಹಿತಿ ಮತ್ತಿತರರು ಉಪಸ್ಥಿತರಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top