ಮುಡಿಪು ಪಿ.ಎಂ.ಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಿಟಿಸಿ ಜನರಲ್ ಬಾಡಿ ಸಭೆ, ಓಣಂ ಆಚರಣೆ | ಸಮಾರಂಭ ಉದ್ಘಾಟಿಸಿದ ಸಂಸದ ಕ್ಯಾ.ಬ್ರಿಜೇಶ್‍ ಚೌಟ

ಮುಡಿಪು: ದ.ಕ.ಜಿಲ್ಲೆಯ ಮುಡಿಪು ಪಿ.ಎಂ.ಶ್ರೀ ಜವಹಾರ್ ನವೋದಯ ವಿದ್ಯಾಲಯದಲ್ಲಿ ಪಿಟಿಸಿ ಜನರಲ್ ಬಾಡಿ ಸಭೆ ಹಾಗೂ ಓಣಂ ಆಚರಣೆ ಇಂದು ವಿದ್ಯಾಲಯದ ಸಭಾಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ಪಾಲ್ಗೊಂಡು ಸಮಾರಂಭದ ಉದ್ಘಾಟಿಸಿ ಶುಭ ಹಾರೈಸಿದರು.

ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಿ.ರಾಜೇಶ್‍ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ, ಸಹಿತ ವಿವಿಧ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.





























 
 

ಸಮಾರಂಭದಲ್ಲಿ ವಿವಿಧ ಚಟುವಟಿಕೆಗಳ ಕುರಿತು ಮಾಲಾ ಎ.ಸೊನ್ನಾದ್, ವಿಗ್ಯಾನ್ ಜ್ಯೋತಿ ಕಾರ್ಯಕ್ರಮದ ಕುರಿತು ನಿಖಿಲ್ ಕುಮಾರ್ ಎಂ., ಹಿಂದಿ ಪಕ್ವಾಡ್ ಕುರಿತು ಪ್ರಿಯಾಂಕ ದೇವಿ, ಪಿಟಿಸಿ ಕುರಿತು ಪಿಟಿಸಿ ಸದಸ್ಯ ಕೃಷ್ಣ ಕುಮಾರ್  ಮಾಹಿತಿ ನೀಡಿದರು.

ಎಸ್‍.ಎ.ರೆಹಮಾನ್ ಸ್ವಾಗತಿಸಿದರು. ಟಿಜಿಟಿ ಸದಸ್ಯ ಜೋಸ್ ವಿ.ಪಿ. ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top