ಫೆ.15 : ನೂಜಿಬಾಳ್ತಿಲ ಕಾರಣಿಕ ಕ್ಷೇತ್ರ ಬದಿಬಾಗಿಲು ಶ್ರೀ ಹುಲಿಚಾಮುಂಡಿ, ಪರಿವಾರ ದೈವಗಳ ನೇಮೋತ್ಸವ

ಪುತ್ತೂರು : ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಾರಣಿಕ ಕ್ಷೇತ್ರ ಬದಿಬಾಗಿಲು ಶ್ರೀ ಹುಲಿಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಹುಲಿ ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಫೆ.15 ಬುಧವಾರ ಸಂಜೆ ನಡೆಯಲಿದೆ.

ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 8 ಕ್ಕೆ ಗಣಪತಿ ಹವನ, ಸಂಜೆ 5 ರಿಂದ ಭಜನಾ ಕಾರ್ಯಕ್ರಮ, 6 ಕ್ಕೆ ಭಂಡಾರ ಹಿಡಿಯುವುದು, ರಾತ್ರಿ 8 ರಿಂದ ಕಾಡೆತ್ತಿ ಪಂಜುರ್ಲಿ ದೈವದ ನೇಮೋತ್ಸವ, 8.30 ರಿಂದ ಅನ್ನಸಂತರ್ಪಣೆ ಜರಗಲಿದೆ.

ರಾತ್ರಿ 10 ರಿಂದ ಹುಲಿ ಚಾಮುಂಡಿ ದೈವದ ನೇಮೋತ್ಸವ, ಬಳಿಕ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top