ದ.ಕ.ಜಿಲ್ಲಾ ಬಿಜೆಪಿ ನೂತನ ಉಪಾಧ್ಯಕ್ಷ ಪ್ರಸನ್ನ ಮಾರ್ತ ಬಿಜೆಪಿ ಕಚೇರಿಗೆ ಭೇಟಿ

ಪುತ್ತೂರು: ದಕ್ಷಿಣಕನ್ನಡ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಸನ್ನ ಮಾರ್ತರವರು ಪ್ರಥಮ ಬಾರಿಗೆ ಪುತ್ತೂರು ಬಿಜೆಪಿ ಕಛೇರಿಗೆ ಭೇಟಿ ನೀಡಿದರು.

ಅವರಿಗೆ ಮಂಡಲದ ವತಿಯಿಂದ ಗ್ರಾಮಾಂತರ ಮತ್ತು ನಗರ ಮಂಡಲ ಮಾಜಿ ಅಧ್ಯಕ್ಷರುಗಳಾದ ಸಾಜ ರಾಧಕೃಷ್ಣ ಆಳ್ವಾ, ಪಿ.ಜಗನ್ನೀವಾಸ ರಾವ್ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಆತ್ಮೀಯವಾಗಿ ಸ್ವಾಗತಿಸಿ ಶುಭ ಹಾರೈಸಿದರು.

ಈ ವೇಳೆ ಮಾತಾನಾಡಿದ ಪ್ರಸನ್ನ ಮಾರ್ತರವರು, ನಿಮ್ಮೆಲ್ಲರ ಸಹಕಾರದಿಂದ ಹಿಂದುತ್ವದ ಆಧಾರದಲ್ಲಿ ಪಾರ್ಟಿಯನ್ನು ಪುತ್ತೂರಿನಲ್ಲಿ ಬಲಪಡಿಸಲು ಒಗ್ಗಟ್ಟಾಗಿ ಕೆಲಸ ಮಾಡುವ ಎಂದು ಹೇಳಿದರು.





























 
 

ಈ ಸಂದರ್ಭದಲ್ಲಿ  ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲದ ನಿಯೋಜಿತ ಅಧ್ಯಕ್ಷರುಗಳಾದ ಶಿವಕುಮಾರ್ ಮತ್ತು ದಯಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಉಪಾಧ್ಯಕ್ಷರಾಗಿ ನಿಯೋಜಿತರಾಗಿರುವ ಹರಿಪ್ರಸಾದ್ ಯಾದವ್,ಯುವರಾಜ್ ಪೆರಿಯತ್ತೋಡಿ, ಪ್ರಧಾನಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಜಯಶ್ರೀ ಶೆಟ್ಟಿ, ನಿಯೋಜಿತ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಕಾರ್ಯದರ್ಶಿಯಾಗಿ ನಿಯೋಜಿತರಾಗಿರುವ ಪುನೀತ್ ಮಾಡತ್ತಾರು, ನಗರಸಭಾ ಸದಸ್ಯಸ್ಯೆ ಶಶಿಕಲಾ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುರೇಶ್ ಆಳ್ವಾ, ಯುವಮೋರ್ಚ ನಗರ ಅಧ್ಯಕ್ಷ ನಿತೇಶ್ ಗೋವರ್ಧನ್ ನಗರ, ನಗರ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ರೈತಮೋರ್ಚ ಅಧ್ಯಕ್ಷ ಸುರೇಶ್ ಕಣ್ಣರಾಯ, ಮಹಾಬಲ ರೈ,ಶರತ್ ಚಂದ್ರ ಬೈಪಡಿತ್ತಾಯ, ಜಯರಾಮ ವರ್ಮ, ಮಹಾಲಿಂಗ ಪಾಟಾಳಿ, ಜಿಲ್ಲಾ ರೈತಮೋರ್ಚದ ಕಿಶೋರ್ ಬೇರಿಕೆ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top