ಜಿಂದಾಲ್‌ಗೆ 3 ಸಾವಿರ ಎಕರೆ ಭೂಮಿ ಮಾರಾಟ : ಪರಮೇಶ್ವರ್‌ ಸಮರ್ಥನೆ

ಅಂದು ವಿರೋಧಿಸಿದ್ದ ಡೀಲನ್ನು ಇಂದು ತಾನೇ ಅನುಮೋದಿಸಿದ ಕಾಂಗ್ರೆಸ್‌

ಬೆಂಗಳೂರು: ಬಳ್ಳಾರಿ ಬಳಿ ಜೆಎಸ್​ಡಬ್​ಲ್ಯೂ (ಜಿಂದಾಲ್​) ಸ್ಟೀಲ್​ ಕಂಪನಿಗೆ 3,667.31 ಎಕರೆ ಜಮೀನು ಮಾರಾಟ ಮಾಡಲು ಸರಕಾರ ನಿರ್ಧರಿಸಿದೆ. ಜೆಎಸ್‌ಡಬ್‌ಲ್ಯೂ ಸ್ಟೀಲ್ ಲಿಮಿಟೆಡ್ (ಜಿಂದಾಲ್) ಕಂಪನಿಗೆ 2006-07ರಲ್ಲೇ ಗುತ್ತಿಗೆ ಮತ್ತು ಮಾರಾಟದ ಆಧಾರದಲ್ಲಿ ಮಂಜೂರು ಮಾಡಿದ್ದ 3,667.31 ಎಕರೆ ಜಮೀನನ್ನು ಜಿಂದಾಲ್ ಕಂಪೆನಿಗೆ ಶುದ್ಧಕ್ರಯ ಅಂದರೆ ಮಾರಾಟ ಮಾಡಿಕೊಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.


ವಿಶೇಷವೆಂದರೆ ಇದು ಹಿಂದಿನ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ನಡೆದಿದ್ದ ಡೀಲ್‌. ಆಗ ವಿರೋಧ ಪಕ್ಷದಲ್ಲಿದ್ದ ಕಂಗ್ರೆಸ್‌ ಇದನ್ನು ದೊಡ್ಡಮಟ್ಟದಲ್ಲಿ ವಿರೋಧಿಸಿ ಬಿಜೆಪಿ ಮೇಲೆ ನಾನಾ ರೀತಿಯ ಆರೋಪಗಳನ್ನು ಮಾಡಿತ್ತು. ಈಗ ತಾನು ಅಧಿಕಾರಕ್ಕೆ ಬಂದಾಗ ಆ ಡೀಲ್‌ಗೆ ಮರುಜೀವ ಕೊಟ್ಟು, ಮಾರಾಟಕ್ಕೆ ಸಂಪುಟದ ಅನುಮೋದನೆಯನ್ನೂ ಪಡೆದುಕೊಂಡಿದೆ.





























 
 


ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್‌ ಹಿಂದಿನ ಬಿಜೆಪಿ ಸರ್ಕಾರ ಮಾರಾಟ ಮಾಡಲು ಮುಂದಾದಾಗ ನಾವು ವಿರೋಧ ಮಾಡಿದ್ದು ನಿಜ. ಜಾಗ ಮಾರಾಟ ಮಾಡುವುದಕ್ಕಿಂತ ಮುನ್ನ ಜಿಂದಾಲ್​ ಕಂಪನಿಗೆ ಕೆಲವು ಪ್ರಶ್ನೆಗಳನ್ನು ನಾವು ಕೇಳಿದ್ದೆವು. ಅದಕ್ಕೆ ಕಂಪನಿ ಸಮರ್ಪಕವಾಗಿ ಉತ್ತರ ನೀಡಿದೆ. ನ್ಯಾಯಾಲಯ ಕೂಡ ಆದೇಶ ಮಾಡಿದೆ. ಹೀಗಾಗಿ ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ದಿ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಇನ್ವೆಸ್ಟ್ ಕರ್ನಾಟಕ ಮಾಡುತ್ತೇವೆ. ಪ್ರಪಂಚದಾದ್ಯಂತ ಇರುವ ಉದ್ಯಮಿಗಳು ಇದರಲ್ಲಿ ಭಾಗಿಯಾಗುತ್ತಾರೆ. ಇಲ್ಲಿ ಕಂಪನಿ ಆರಂಭಿಸಲು ಅವರಿಗೆ ನೀರು, ಜಾಗ, ವಿದ್ಯುತ್ ಹೀಗೆ ಒಂದಿಷ್ಟು ವಿನಾಯಿತಿ ಇರುತ್ತದೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಉಚಿತವಾಗಿ ಭೂಮಿ ಕೊಡುತ್ತಾರೆ. ಹೀಗಾಗಿ ಉದ್ದಿಮೆದಾರರು ನಮ್ಮಲ್ಲಿ ಕಂಪನಿ ಹೂಡಿಕೆ ಮಾಡಲು ಕೆಲವು ವಿನಾಯಿತಿ ನೀಡಬೇಕಾಗುತ್ತದೆ. ಈ ಹಿಂದೆ ಹಿಂದೆ ಒಂದಿಷ್ಟು ಘಟನೆ ನಡೆದಾಗ ಕಂಪನಿಗಳು ರಾಜ್ಯ ಬಿಟ್ಟು ಹೋಗುತ್ತೇವೆ ಅಂದವು. ಹೀಗಾಗಿ ವಿನಾಯಿತಿ ನೀಡಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top