ಆ.25 : ಬೀರ್ನಹಿತ್ಲುವಿನಲ್ಲಿ ‘ಕೆಸರ್ಡ್ ಒಂಜಿ ದಿನ’ ವಿವಿಧ ಗ್ರಾಮೀಣ ಕ್ರೀಡಾಕೂಟ | ಗ್ರಾಮ ದೈವಸ್ಥಾನ ಪುಳುವಾರು, ದಾರಂದಕುಕ್ಕು ವೀರ ಮಾರುತಿ ಫ್ರೆಂಡ್ಸ್ ಜಂಟಿ ಆಶ್ರಯ

ಪುತ್ತೂರು: ಗ್ರಾಮ ದೈವಸ್ಥಾನ ಪುಳುವಾರು ಹಾಗೂ ದಾರಂದಕುಕ್ಕು ವೀರ ಮಾರುತಿ ಫ್ರೆಂಡ್ಸ್ ಜಂಟಿ ಆಶ್ರಯದಲ್ಲಿ “ಕೆಸರ್ಡ್ ಒಂಜಿ ದಿನ” ವಿವಿಧ ಗ್ರಾಮೀಣ ಕ್ರೀಡಾಕೂಟ ಆ.25 ಭಾನುವಾರ ಬೀರ್ನಹಿತ್ತಲುನಲ್ಲಿ ನಡೆಯಲಿದೆ.

ಬೆಳಿಗ್ಗೆ 8.30 ಕ್ಕೆ ಪುಳುವಾರು ಗ್ರಾಮ ದೈವಸ್ಥಾನದ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ರೈ ಕುಂಬುರ್ಗಗುತ್ತು ಸಮಾರಂಭ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪಾಳ್ಗೊಳ್ಳಲಿದ್ದಾರೆ.

ಅತಿಥಿಗಳಾಗಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪ್ರಗತಿಪರ ಕೃಷಿಕ ಅಜಿತ್ ಕುಮಾರ್ ರೈ ಕಾಯರ್ತಾಡಿ, ಗ್ರಾಮ ದೈವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ರಘುನಾಥ ರೈ ಏಕ, ಕೊಲ್ಯ ಫಾರ್ಮ್‍ ನ ಪ್ರಕಾಶ್ಚಂದ್ರ ರೈ ಕುಂಬುರ್ಗಗುತ್ತು, ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ಬೀರಿಗ, ಬನ್ನೂರು ಗ್ರಾಮ ಪಂಚಾಯಿತಿ ಪಿಡಿಒ ಚಿತ್ರಾವತಿ, ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಎವಿಜಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ವಿ.ನಾರಾಯಣ, , ಬೀರ್ನಹಿತ್ಲು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ, ಬನ್ನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಜಯ ಏಕ, ತಿಮ್ಮಪ್ಪ ಮೂಡಾಯೂರು, ರಾಘವೇಂದ್ರ ಅಂದ್ರಟ್ಟ ಭಾಗವಹಿಸಲಿದ್ದಾರೆ.





























 
 

ಕಾರ್ಯಕ್ರಮಕ್ಕೆ ಬನ್ನೂರು ಗ್ರಾಮ ಪಂಚಾಯಿತಿ, ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲ, ಬೀರ್ನಹಿತ್ಲು ಅಶ್ವ ಫ್ರೆಂಡ್ಸ್, ಫ್ರೆಂಡ್ಸ್ ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಒಕ್ಕೂಟ ಹಾಗೂ ಬೀರಿಗ ಸ್ವಸಹಾಯ ಸಂಘಗಳ ಒಕ್ಕೂಟ ಸಹಕರಿಸಲಿವೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top