ಐವನ್‌ ಡಿಸೋಜ ಮತಾಂಧ ಮನಸ್ಥಿತಿಯುಳ್ಳವರು : ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು : ರಾಜ್ಯಪಾಲರನ್ನು ರಾಷ್ಟ್ರಪತಿಯವರು ಹಿಂದಕ್ಕೆ ಕರೆಸಿಕೊಳ್ಳಬೇಕು ಇಲ್ಲದಿದ್ದರೆ ಬಾಂಗ್ಲಾ ರೀತಿಯಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕಾಂಗ್ರೆಸ್ ನಾಯಕ ಐವನ್ ಡಿ.ಸೋಜ ಹೇಳಿರುವುದು ಆ ದೇಶದ ಮತಾಂಧ ಮೂಲಭೂತವಾದಿಗಳ ಮನಸ್ಥಿತಿಯೇ ಇವರಿಗೂ ಇರುವುದೆಂದೂ ತೋರಿಸುತ್ತದೆ . ಸಂವಿಧಾನ,ಪ್ರಜಾಪ್ರಭುತ್ವವನ್ನು ಉಳಿಸುವವರು ನಾವೇ ಎಂದು ಹೇಳುವ ಕಾಂಗ್ರೇಸಿಗರ ಈ ರೀತಿಯ ವರ್ತನೆಯನ್ನು ಈ ರಾಜ್ಯದ ಜನರು ಸಹಿಸುವುದಿಲ್ಲ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ ತಿಳಿಸಿದರು.

ಕ್ರಿಶ್ಚಿಯನ್ ಕೋಟಾದಿಂದ ಜನಪ್ರತಿನಿಧಿ ಮತ್ತು ನಾಯಕನಾಗಿರುವ ಐವನ್ ರವರು ಬಾಂಗ್ಲಾದೇಶದಲ್ಲಿ ಕ್ರಿಶ್ಚಿಯನ್ ಸಮಾಜ ಕೂಡಾ ಬೀದಿಪಾಲಾಗಿರುವುದನ್ನು ಗಮನಿಸುವುದು ಒಳ್ಳೆಯದು.

 ಬಾಂಗ್ಲಾ ಮತಾಂಧರ ರೀತಿ ವರ್ತಿಸಿ ರಾಜಭವನಕ್ಕೆ ಮುತ್ತಿಗೆ ಹಾಕಿದರೆ ದೇಶಭಕ್ತ ಭಾರತೀಯರಾಗಿ ನಾವು ಕೂಡ ನಿಮ್ಮನ್ನು ತಡೆಯುತ್ತೇವೆ ಎಂದು ಸಾಜ ರಾಧಕೃಷ್ಣ ಆಳ್ವಾ ಸವಾಲು ಹಾಕಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top