ನಾಳೆ ಪುತ್ತೂರಿನಲ್ಲಿಯೂ ವೈದ್ಯಕೀಯ ಸೇವೆಗಳು ಭಾಗಶಃ ಬಂದ್ | ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‍ ಘೋಷಣೆ

ಪುತ್ತೂರು: ಕೋಲ್ಕತ್ತಾದ ಆರ್ ಜಿ ಆರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ ಹಾಗೂ ಈ ಘಟನೆಯ ಬಗೆಗಿನ ಸಾಕ್ಷಿ ನಾಶದ ದುರುದ್ದೇಶ ಇಟ್ಟುಕೊಂಡು ಆಸ್ಪತ್ರೆಯ ಮೇಲೆ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ನಡೆಸಿದ ಧಾಳಿಯನ್ನು ಖಂಡಿಸಿ ಆ.17 ನಾಳೆ  ಬೆಳಗ್ಗೆ 6:00 ಗಂಟೆಯಿಂದ ಆ.18ರ ಬೆಳಗ್ಗೆ 6:00ರ ವರೆಗೆ ರಾಷ್ಟ್ರವ್ಯಾಪ್ತಿ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಘ ರಾಷ್ಟೀಯ ಶಾಖೆ ಘೋಷಿಸಿದೆ.

ಅದರಂತೆ ಪುತ್ತೂರಿನಲ್ಲಿಯೂ ವೈದ್ಯಕೀಯ ಸೇವೆಗಳು ಭಾಗಶ : ಬಂದ್ ಆಗಲಿದೆ ಎಂದು ಐ ಎಂ ಎ ಪುತ್ತೂರು ಘಟಕದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪುತ್ತೂರು ತಾಲೂಕಿನಲ್ಲಿ ಇರುವ ಆಧುನಿಕ ವೈದ್ಯ ಪದ್ದತಿಯ ಸೇವೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳುಮತ್ತು ಕ್ಲಿನಿಕ್ ಗಳಲ್ಲಿ ಎಲ್ಲಾ ತುರ್ತು ಹಾಗೂ ಗಂಭೀರವಲ್ಲದ ಸಾಮಾನ್ಯ ವೈದ್ಯಕೀಯ ಸೇವೆಗಳು ಲಭ್ಯವಿರುವುದಿಲ್ಲ. ಉಳಿದಂತೆ ಕೇವಲ ತುರ್ತು ವೈದ್ಯಕೀಯ ಸೇವೆಗಳು ಮಾತ್ರ ಈ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ಸಾರ್ವಜನಿಕರು ವೈದ್ಯರ ಈ ನೋವಿನ ಮತ್ತು ಹತಾಶೆಯ ಭಾಗವಾಗಿ ನಡೆಸುತ್ತಿರುವ ಭಾಗಶ : ವೈದ್ಯಕೀಯ, ಅಸಹಕಾರಕ್ಕೆ (ಬಂದ್ ಗೆ )ಸಹಕರಿಸಬೇಕು ಮತ್ತು ವೈದ್ಯರ ಈ ಹೋರಾಟಕ್ಕೆ ಸಹಾನುಬೂತಿಯ ಬೆಂಬಲವನ್ನು ನೀಡಬೇಕು. ಅಮಾನುಷವಾಗಿ ಅತ್ಯಾಚಾರಗೊಂಡು ಹತ್ಯೆಯಾದ ಕರ್ತವ್ಯ ನಿರತ ಮಹಿಳಾ ವೈದ್ಯೆಯ ಆತ್ಮಕ್ಕೆ ನ್ಯಾಯ ದೊರಕಿಸಿ ಕೊಡಲು ಸಹಕರಿಸಬೇಕು ಎಂದು ಐಎಂಎ ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು, ಕಾರ್ಯದರ್ಶಿ  ಡಾ.ಗಣೇಶಪ್ರಸಾದ್ ಮುದ್ರಜೆ ಐ.ಮ್.ಎ.-ಪುತ್ತೂರು ಘಟಕದ ಪರವಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top