ರೋಟರಿ ಯುವದಿಂದ ನಿರ್ಗತಿಕ ವೃದ್ಧರೊಬ್ಬರ ರಕ್ಷಣೆ | ದೀಪಶ್ರೀ ವೃದ್ಧಾಶ್ರಮಕ್ಕೆ ಸೇರ್ಪಡೆ

ಪುತ್ತೂರು: ಪುತ್ತೂರಿನ ಎಪಿಎಂಸಿ  ಪ್ರಾಂಗಣದ ಬಸ್ಸು ತಂಗುದಾಣದಲ್ಲಿ ಕಳೆದ ಹಲವಾರು ದಿನಗಳಿಂದ ಬೀಡು ಬಿಟ್ಟಿದ್ದ  ಸುಮಾರು 70 ವರ್ಷ ವಯೋಮಾನದ   ವೆಂಕಪ್ಪ ಶೆಟ್ಟಿ ಅವರನ್ನು ಜಿಡೆಕಲ್ಲಿನ ದೀಪಶ್ರೀ ವೃದ್ಧರ ಹಾಗೂ ನಿರ್ಗತಿಕರ  ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ಲೋಕೇಶ್ ಗೌಡ ಅವರು ರೋಟರಿ ಕ್ಲಬ್ ಪುತ್ತೂರು ಯುವದ  ಪೂರ್ವಾಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರನ್ನು ಸಂಪರ್ಕಿಸಿ ಪುನರ್ವಸತಿ ಕಲ್ಪಿಸಲು ಕೋರಿದ ಮೇರೆಗೆ ಪುತ್ತೂರು ಉಮೇಶ್ ನಾಯಕ್ ಅವರು  ಪೋಲಿಸ್ ಇಲಾಖೆಯ ಸಹಕಾರದಿಂದ ಈ ವೃದ್ಧರನ್ನು ರಕ್ಷಿಸಿ  ಜಿಡೆಕಲ್ಲಿನಲ್ಲಿರುವ ದೀಪಶ್ರೀ ವೃದ್ಧರ ಹಾಗೂ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಆಶ್ರಯ ನೀಡಿದ್ದಾರೆ.

ಪೋಲಿಸ್ ವಿಚಾರಣೆಯ ವೇಳೆ  ವೆಂಕಪ್ಪ ಶೆಟ್ಟಿ ಪುಣಚ ನಿವಾಸಿ ಎಂದು ತಿಳಿದು ಬಂದಿದ್ದು, ಅವರ ಪತ್ನಿಯು ಮೃತ ಪಟ್ಟಿದ್ದಾರೆ. ಅವರು ಪುಷ್ಪ ಹಾಗೂ ಭವಾನಿ ಎಂಬ ಇಬ್ಬರು  ಮಕ್ಕಳನ್ನು ಹೊಂದಿದ್ದಾರೆ. ಇಬ್ಬರಿಗೂ ವಿವಾಹವಾಗಿದೆ ಎಂದು ತಿಳಿದುಬಂದಿದೆ. ಪುಣಚ ಗ್ರಾಮಸ್ಥರಲ್ಲಿ ವಿಚಾರಿಸಿದಾಗ ವೃದ್ಧ  ಸ್ವಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಹಲವಾರು ವರ್ಷಗಳಿಂದ ಮನೆಯವರ ಸಂಪರ್ಕ ದಿಂದ ದೂರವಾಗಿದ್ದಾರೆ ಎಂದು ತಿಳಿದು ಬಂದಿದೆ. ಎಪಿಎಂಸಿ ಮಾರುಕಟ್ಟೆಯ ಸ್ಥಳೀಯ ನಿವಾಸಿಯೊಬ್ಬರ  ಪ್ರಕಾರ ಈ ವೃದ್ಧರು ಕಳೆದ ಐದು ವರ್ಷಗಳಿಂದ  ಪ್ರತಿ ಮಳೆಗಾಲದಲ್ಲೂ ಇದೇ ಬಸ್ಸು ತಂಗುದಾಣದಲ್ಲಿ ವಾಸವಾಗಿರುತ್ತಾರೆ ಎಂದು ತಿಳಿದುಬಂದಿದೆ.





























 
 

ಕಾರ್ಯಾಚರಣೆ ವೇಳೆ ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ  ಕೃಷ್ಣಪ್ಪ, ಹನುಮಂತ, ಶಿವಪ್ರಸಾದ್ ತುರ್ತಾಗಿ ಸ್ಪಂದಿಸಿ  ಸಹಕರಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top