ಎಸ್.ಸಿ.ಐ. ಪುತ್ತೂರು ವತಿಯಿಂದ ನೋಟ್ ಪುಸ್ತಕ, ಲೇಖನಿ ವಿತರಣೆ

ಪುತ್ತೂರು: ಸಂಟ್ಯಾರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ  ಸೀನಿಯರ್ ಚೇಂಬರ್  ಇಂಟರ್  ನ್ಯಾಷನಲ್ ಪುತ್ತೂರು ಲೀಜನ್ ಹಾಗೂ ಸ್ಪಂದನ ಟ್ರಸ್ಟ್ ವತಿಯಿಂದ ಸುಮಾರು ₹10000 /- ಮೌಲ್ಯದ ಪೆನ್ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಸೀನಿಯರ್ ಚೇಂಬರ್ ಇಂಟರ್  ನ್ಯಾಷನಲ್ ಪುತ್ತೂರು ಅಧ್ಯಕ್ಷೆ ಮಲ್ಲಿಕಾ ಜೆ ಆರ್. ರೈ, ಕಾರ್ಯದರ್ಶಿ ರೋಹಿಣಿ ಆಚಾರ್ಯ, ಕೋಶಾಧಿಕಾರಿ ಸುಮಂಗಲ ಶಣೈ, ಶಾರದಾ ಪ್ರಭು ಹಾಗೂ ಸದಸ್ಯರು, ಸ್ಪಂದನ ಟ್ರಸ್ಟ್ ನ ಅಧ್ಯಕ್ಷೆ ಸುಮಿತ್ರ, ಕೋಶಾಧಿಕಾರಿ ಕಾವ್ಯ, ಸದಸ್ಯ ಅವಿನಾಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ  ಬಾಬು ಮರಿಕೆ, ನಿಕಟಪೂರ್ವ ಅಧ್ಯಕ್ಷರು, ಶಾಲಾ ಶಿಕ್ಷಕರು, ಮಕ್ಕಳ ಉಪಸ್ಥಿತಿಯಲ್ಲಿ ನೋಟ್ ಪುಸ್ತಕಗಳ ವಿತರಣೆ ನಡೆಯಿತು.

ಸೀನಿಯರ್ ಚೇಂಬರ್ ಇಂಟರ್  ನ್ಯಾಷನಲ್ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಅವರ ಪ್ರಾಯೋಜಕತ್ವದಲ್ಲಿ ಎಲ್ಲಾ ಮಕ್ಕಳಿಗೂ ಲೇಖನಿ ವಿತರಿಸಲಾಯಿತು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top