ಸಂತ ಫಿಲೋಮಿನಾ ಕಾಲೇಜಿನ ಸುಧನ್ವ ಶ್ಯಾಮ್‌ಗೆ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ 2020-23ನೇ ಬ್ಯಾಚ್‌ ನ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಸುಧನ್ವ ಶ್ಯಾಮ್‌ ಉಡುಪಿಯ ಎಂ.ಜಿ.ಎಂ. ಕಾಲೇಜು ಸ್ಥಾಪಸಿದ ಪ್ರತಿಷ್ಠಿತ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ ಪಡೆದಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪದವಿ ಪರೀಕ್ಷೆಗಳಲ್ಲಿ ಗಣಿತ ವಿಷಯದಲ್ಲಿ ಶೇ.99.66 ಗಳಿಸಿದ್ದಕ್ಕಾಗಿ ಚಿನ್ನದ ಪದಕ ನೀಡಲಾಗಿದೆ. ಎಂಜಿಎಂ ಕಾಲೇಜಿನ ವಾರ್ಷಿಕೋತ್ಸವದಂದು ಸುಧನ್ವ ಶ್ಯಾಮ್‌ ರವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.

ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಸುಧನ್ವ ಶ್ಯಾಮ್ ರವರ ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.





























 
 

ಸುಧನ್ವ ಶ್ಯಾಮ್‌ ರವರು ತಮ್ಮ ಯಶಸ್ಸಿಗೆ ಕಾರಣಕರ್ತರಾದ ಕಾಲೇಜು ಪ್ರಾಂಶುಪಾಲರು, ಗಣಿತ ವಿಭಾಗದ ಪ್ರಾಧ್ಯಾಪಕರು ಹಾಗೂ ಕಾಲೇಜಿನ ಪ್ರಾಧ್ಯಾಪಕ ವೃಂದ, ಹಾಗೂ ಸಹಪಾಠಿ ಮಿತ್ರರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಇವರು ಬಲ್ನಾಡಿನ ಸುಬ್ರಹ್ಮಣ್ಯ ಕುಮಾರ್‌ ಹಾಗೂ ಸುಶೀಲಾ ದೇವಿ ದಂಪತಿ ಪುತ್ರ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top