ಬಲ್ನಾಡು ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಚಿನ್ನ, ಬೆಳ್ಳಿ ಆಭರಣ ಸಮರ್ಪಣೆಗೆ ಸಿದ್ಧತೆ | ಭಕ್ತರು ಸಹಕರಿಸುವಂತೆ ಮನವಿ

ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಭಕ್ತಾದಿಗಳಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣ ಸಮರ್ಪಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ನಡೆಯುವ ನೇಮೋತ್ಸವದಂದು ಶ್ರೀ ಉಳ್ಳಾಲ್ತಿ ಅಮ್ಮನವರ ನರ್ತನ ಸೇವೆಗೆ ಚಿನ್ನದ ಮಲ್ಲಿಗೆ ಮೊಗ್ಗಿನ ಸರ ಹಾಗೂ ಕಾಲಿಗೆ ರಜತ ಗಗ್ಗರ ಸಮರ್ಪಿಸಲು ಸಿದ್ಧತೆ ನಡೆಯುತ್ತಿದೆ.

2025ರ ಏಪ್ರಿಲ್ 28ರಂದು ಸಮರ್ಪಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಭಕ್ತಾದಿಗಳು ತಮ್ಮ ಇಚ್ಚೆಗೆ ಅನುಸಾರ ಬಂಗಾರ ಅಥವಾ ನಗದು ರೂಪದಲ್ಲಿ ಕೈ ಸಹಕರಿಸುವಂತೆ ಬಲ್ನಾಡು ಶ್ರೀ ಉಳ್ಳಾಲ್ತಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ದೇವಸ್ಥಾನದ ಪ್ರಕಟಣೆ ತಿಳಿಸಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top