ಮೇ 25 : ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮದ ಸಮಾರೋಪ ಸಮಾರಂಭ | ಮೇಳೈಸಲಿದೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು

ಕಡಬ: ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮದ ಸಮಾರೋಪ ಸಮಾರಂಭ ಮೇ 25 ಶನಿವಾರ ಮಧ್ಯಾಹ್ನ 2 ರಿಂದ ಕಡಬ ತಾಲೂಕಿನ ಕೊಯಿಲದ ಕಲಾಯಿಗುತ್ತುವಿನಲ್ಲಿ ನಡೆಯಲಿದೆ.

ಮಧ್ಯಾಹ್ನ ಗಂಟೆ 2 ರಿಂದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ತಂಡದಿಂದ ಕುಣಿತ ಭಜನೆ, ಮಧ್ಯಾಹ್ನ 2.30 ರಿಂದ ಮಂಗಳೂರು ಶ್ರೀ ಶಬರಿ ಸಿಂಗಾರಿ ಮೇಳದಿಂದ ಚೆಂಡೆ ವಾದನ, ಮಧ್ಯಾಹ್ನ 3 ರಿಂದ ಶೃತಿ ಗಾಯನ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ, ಸರಿಗಮಪ ಖ್ಯಾತಿಯ ಕುಮಾರಿ ಪ್ರಜ್ಞ ಮರಾಠೆ ಮತ್ತು ಸಮನ್ವಿ ರೈ ಪುತ್ತೂರು ಅವರಿಂದ ಸುಮಧುರ ಗಾಯನ ಹಾಗೂ ತುಳು ಕನ್ನಡ ಚಿತ್ರರಂಗದ ಖ್ಯಾತ ತಾರೆಯರ ಸಮಾಗಮ ನಡೆಯಲಿದೆ. ದೇಶ ವಿದೇಶಗಳ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ ಪ್ರತಿಭಾನ್ವಿತ ನೃತ್ಯ ನಿರ್ದೇಶಕ ಯಶ್ವಿನ್ ದೇವಾಡಿಗ ನಿರ್ದೇಶನದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಸಂಜೆ 4 ರಿಂದ ವಿಶೇಷ ಶೈಲಿಯ ಉಪಾಹಾರ ನಡೆಯಲಿದ್ದು ಬಳಿಕ ರಿಚರ್ಡ್ ಲೂಯಿಸ್ ಬೆಂಗಳೂರು, ಮಿಮಿಕ್ರಿ ಗೋಪಿ ಅಸಾದುಲ್ಲಾ ಬೇಗ್, ಕಿರ್ಲೋಸ್ಕರ್ ಸತ್ಯ, ಮೈಸೂರು ಆನಂದ್ ಮತ್ತು ತಂಡದಿಂದ ಹಾಸ್ಯ ರಸಸಂಜೆ ನಡೆಯಲಿದೆ. ಸಂಜೆ 6 ರಿಂದ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.30 ರಿಂದ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.





























 
 

ರಾತ್ರಿ 8 ರಿಂದ ಸ್ನೇಹಕೂಟ ಸಹಭೋಜನದ ಬಳಿಕ ಸಂಗೀತ ರಸಮಂಜರಿ ಕಾರ್ಯಕ್ರಮ ಮುಂದುವರಿಯುವುದು. ರಾತ್ರಿ 10 ರಿಂದ ತೆಂಕುತಿಟ್ಟು ಪ್ರಸಿದ್ಧ ಹಾಸ್ಯ ಕಲಾವಿದರ ಕೂಡುವಿಕೆಯಿಂದ ಕಾಲಮಿತಿ ‘ಯಕ್ಷ ರಸಸಂಜೆ’ ತುಳು ಯಕ್ಷ ತೆಲಿಕೆ ನಡೆಯಲಿದೆ ಎಂದು ಸಂಸ್ಥೆಯ ಮಾಲಕರಾದ ಕೇಶವ ಅಮೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top