ದುರಹಂಕಾರದಿಂದ ಮಾತನಾಡಿದ ಆರ್. ಅಶೋಕ್ ಅವರನ್ನು ವಿಪಕ್ಷ ಸ್ಥಾನದಿಂದ ವಜಾಗೊಳಿಸಿ | ಬಜರಂಗದಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಆಗ್ರಹ

ಪುತ್ತೂರು: ರಾಷ್ಟ್ರದ ಕಾರ್ಯ, ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಿರುವ ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿಸಿದ್ದೇನೆ ಎಂದು ಹೇಳಿರುವ ಆರ್. ಅಶೋಕ್ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕೆಂದು ಬಿಜೆಪಿ ರಾಜ್ಯ ನಾಯಕರಿಗೆ ಬಜರಂಗದಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ದುರಹಂಕಾರದಿಂದ ಮಾತನಾಡುವ ಆರ್‍. ಅಶೋಕ್ ಅವರೇ, ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಕೋವಿಡ್ ಸಂದರ್ಭದಲ್ಲಿ ನೀವು ಆರಾಮದಿಂದ ಮಲಗಿದ್ದಾಗ ಸಮಾಜದ ಪ್ರತಿಯೊಂದು ಕಾರ್ಯ ಮಾಡಿದ ಬಜರಂಗದಳದ ಕಾರ್ಯಕರ್ತರನ್ನು ಹೇಗೆ ಮರೆತಿದ್ದೀರಿ?. ನೀವು ಆಕಾಶಕ್ಕೇರಿದ್ದು ಕಾರ್ಯಕರ್ತರು, ಸಂಘಟನೆಗಳ ಶ್ರಮದಿಂದಲೇ ಹೊರತು ನಿಮ್ಮ ಹಣದ ಮದದಿಂದ ಅಲ್ಲ ಎಂದಿದ್ದಾರೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿನಿಯಮದಡಿಯಲ್ಲಿ ಹಿಂದೂ ದೇವಾಲಯಗಳ ಸಾಮಾನ್ಯ ನೀತಿಯನ್ನು ಪರ್ಸಂಟೇಜ್ ಆಧಾರದಲ್ಲಿ ದೋಚುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರಕಾರ ಮಾಡಲು ಹೊರಟಿದೆ. ತಾಕತ್ ಇದ್ದರೆ ಇತರೇ ಮತಗಳ ಧಾರ್ಮಿಕ ಕೇಂದ್ರಗಳ ಹಣವನ್ನು ಇತರ ಯೋಜನೆಗಳಿಗೆ ವಿನಿಯೋಗಿಸಿ, ಆಗ ಒಪ್ಪಿಕೊಳ್ಳುತ್ತೇವೆ. ಇಲ್ಲವಾದಲ್ಲಿ ರಾಜ್ಯಾದ್ಯಂತ ಚಳುವಳಿಗಳನ್ನು ನಡೆಸಿ ನಮ್ಮ ಧಾರ್ಮಿಕ ಸಂಸ್ಥೆಗಳ ಹಣವನ್ನು ದುರುಪಯೋಗ ಮಾಡದಂತೆ ತಡೆದು ನಿಮ್ಮ ಸರಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.





























 
 

ಶಿಕ್ಷಕಿ ಪ್ರಭಾ ವಿರುದ್ಧ ಕೇಸು ದಾಖಲಿಸಿ:

ಮಂಗಳೂರಿನ ಜೆರೋಸಾ ಶಾಲೆಯ ಘಟನೆಯಲ್ಲಿ ಶಾಸಕರು ಹಾಗೂ ನಮ್ಮ ಸಂಘಟನೆಯ ಪ್ರಮುಖರ ವಿರುದ್ಧ ಕೇಸು ದಾಖಲಿಸಿದ್ದೀರಿ ಮತ್ತು ಅದನ್ನು ನಾವು ಸ್ವೀಕಾರ ಮಾಡುತ್ತೇವೆ. ಆದರೆ ಸರಕಾರ, ಆಡಳಿತ ಧರ್ಮದ ಅನುಸಾರವಾಗಿ, ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಪ್ರಚೋದನಾಕಾರಿ ಹೇಳಿಕೆ ಕೊಟ್ಟ ಶಿಕ್ಷಕಿ ಪ್ರಭಾ ಅವರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟವನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top