ವಿಚ್ಛೇದನ ಪಡೆದ ಮಗಳನ್ನು ಬ್ಯಾಂಡ್‌ ವಾದ್ಯದಲ್ಲಿ ಮನೆಗೆ ಕರೆತಂದ ತಂದೆ

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆ ವಿಡಿಯೋ ಲಖನೌ: ನಮ್ಮ ಸಮಾಜ ವಿಚ್ಛೇದನವನ್ನು ಇಂದಿಗೂ ಕಳಂಕ ಎಂಬಂತೆ ನೋಡುತ್ತದೆ. ಆದರೆ ಉತ್ತರ ಪ್ರದೇಶದ ಮೀರತ್‌ನಲ್ಲಿ ವಿಚ್ಛೇದನ ಪಡೆದ ಮಗಳನ್ನು ತಂದೆ ಬ್ಯಾಂಡ್ ವಾದ್ಯದ ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಣಿತ ಎಂಬ ಯುವತಿಗೆ ಕೋರ್ಟ್ ವಿಚ್ಛೇದನ ನೀಡಿತ್ತು. ನಿವೃತ್ತ ನ್ಯಾಯಾಧೀಶರಾದ ಅವರ ತಂದೆ ನ್ಯಾಯಾಲಯದ ಸಂಕೀರ್ಣದ ಹೊರಗೆ ಡ್ರಮ್ ನುಡಿಸಿ, ಸಿಹಿ ಹಂಚಿ ಈ ಕ್ಷಣವನ್ನು ಸಂಭ್ರಮಿಸಿದ್ದಾರೆ. ಸಂಬಂಧಿಕರು […]

ವಿಚ್ಛೇದನ ಪಡೆದ ಮಗಳನ್ನು ಬ್ಯಾಂಡ್‌ ವಾದ್ಯದಲ್ಲಿ ಮನೆಗೆ ಕರೆತಂದ ತಂದೆ Read More »

5 ಕೆಜಿ ಗ್ಯಾಸ್‌ ಸಿಲಿಂಡರ್‌ ಪೂರೈಕೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಗುರುತಿನ ಚೀಟಿ ತೋರಿಸಿದರೆ ಎಲ್ಲಿ ಬೇಕಾದರೂ ಖರೀದಿಸಬಹುದು ನವದೆಹಲಿ: ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ ಕೊರತೆ ಆತಂಕದಲ್ಲಿದ್ದ ಜನಕ್ಕೆ ಕೇಂದ್ರ ಸರ್ಕಾರ ಮತ್ತೆ ಅಭಯ ನೀಡಿದೆ. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ ಎಂದಿರುವ ಕೇಂದ್ರ ಸರ್ಕಾರ ಕೊರತೆ ನೀಗಿಸಲು 5 ಕೆಜಿ ಗ್ಯಾಸ್‌ ಸಿಲಿಂಡರ್‌ಗಳ ಪೂರೈಕೆಯನ್ನ ಹೆಚ್ಚಿಸಿದೆ. ಭಾರತದಲ್ಲಿ ಎಲ್‌ಪಿಜಿ ಕೊರತೆಯಿಲ್ಲ, ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. 5 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ಗಳು ಎಲ್ಲ ಏಜೆನ್ಸಿಗಳಲ್ಲೂ ಲಭ್ಯವಿದೆ. ಸೂಕ್ತ ಗುರುತಿನ ಚೀಟಿ

5 ಕೆಜಿ ಗ್ಯಾಸ್‌ ಸಿಲಿಂಡರ್‌ ಪೂರೈಕೆ ಹೆಚ್ಚಿಸಿದ ಕೇಂದ್ರ ಸರ್ಕಾರ Read More »

ಹುಬ್ಬಳ್ಳಿ ಲವ್‌ ಜಿಹಾದ್‌ ಪ್ರಕರಣ : ಇನ್ನಷ್ಟು ವಿಡಿಯೋಗಳು ಬಹಿರಂಗ

ಜಿಮ್‌ ಟ್ರೈನಿಂಗ್‌ ನೆಪದಲ್ಲಿ ಹರಡಿದ ಜಿಹಾದ್‌ನ ಕಬಂಧ ಬಾಹು ಬೆಂಗಳೂರು : ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ವಿಡಿಯೋ ಬಹಿರಂಗವಾಗುತ್ತಿದೆ. ಇದೀಗ ಮತ್ತೆರಡು ವಿಡಿಯೋಗಳನ್ನು ಯುವತಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್​​​​ ಮುಖಂಡನ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ. ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ದಾಖಲಾಗಿರುವ ಎರಡನೇ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯು ಮತ್ತೊಮ್ಮೆ ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳ ಸತ್ಯಾಸತ್ಯತೆಯನ್ನು ಅವರು ಬಿಚ್ಚಿಟ್ಟಿದ್ದಾರೆ.

ಹುಬ್ಬಳ್ಳಿ ಲವ್‌ ಜಿಹಾದ್‌ ಪ್ರಕರಣ : ಇನ್ನಷ್ಟು ವಿಡಿಯೋಗಳು ಬಹಿರಂಗ Read More »

ಶ್ವೇತಭವನದ ಬಳಿ ಮತ್ತೊಮ್ಮೆ ಗುಂಡಿನ ದಾಳಿ

ಟ್ರಂಪ್‌ ಇರುವಾಗಲೇ ದಾಳಿ ನಡೆಸಿ ತಪ್ಪಿಸಿಕೊಂಡ ಬಂದೂಕುಧಾರಿ ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಬಳಿ ಮತ್ತೊಮ್ಮೆ ಗುಂಡಿನ ಚಕಮಕಿ ನಡೆದಿದೆ. ಆ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಶ್ವೇತಭವನದೊಳಗೆ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ಬಳಿಕ ಭದ್ರತಾ ಸಂಸ್ಥೆಗಳನ್ನು ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ಭಾನುವಾರ ಮುಂಜಾನೆ ಶ್ವೇತಭವನದ ಎದುರಿನ ಲಫಯೆಟ್ಟೆ ಪಾರ್ಕ್ ಬಳಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂದೂಕುಧಾರಿ ತಲೆಮರೆಸಿಕೊಂಡಿದ್ದಾನೆ ಮತ್ತು ಪ್ರಸ್ತುತ ಆತನಿಗಾಗಿ

ಶ್ವೇತಭವನದ ಬಳಿ ಮತ್ತೊಮ್ಮೆ ಗುಂಡಿನ ದಾಳಿ Read More »

ಕಾಂಗ್ರೆಸ್‌ನೊಳಗಿನ ಭಿನ್ನಮತವನ್ನು ಬಯಲಿಗೆಳೆದ ಮಧ್ಯಪ್ರಾಚ್ಯ ಯುದ್ಧ

ಮೋದಿಗೆ ಹಿರಿಯ ನಾಯಕರ ಹೊಗಳಿಕೆ; ರಾಹುಲ್‌ ಗಾಂಧಿ ಟೀಕೆ ನವದೆಹಲಿ: ಆಪರೇಷನ್ ಸಿಂದೂರ ಬಳಿಕ ಇದೀಗ ಮಧ್ಯಪ್ರಾಚ್ಯ ಯುದ್ಧ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರು ಮತ್ತು ರಾಹುಲ್‌ ಗಾಂಧಿ ನಡುವಿನ ಭಿನ್ನಮತವನ್ನು ಬಯಲಿಗೆ ತಂದಿದೆ. ಇರಾನ್‌-ಇಸ್ರೇಲ್‌-ಅಮೆರಿಕ ಯುದ್ಧದ ಸಂದರ್ಭದಲ್ಲಿ ಮೋದಿ ಸರ್ಕಾರದ ರಾಜತಾಂತ್ರಿಕ ನಡೆ, ತೈಲ ನಿರ್ವಹಣೆಯನ್ನು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸಾಧ್ಯವಾದಷ್ಟು ಟೀಕಿಸಿದರೆ, ಶಶಿ ತರೂರ್‌ ಸೇರಿ ನಾಲ್ಕೈದು ಹಿರಿಯ ಕಾಂಗ್ರೆಸ್‌ ಮುಖಂಡರು ಕೇಂದ್ರವನ್ನು ತಾರೀಪು ಮಾಡುತ್ತಿದ್ದಾರೆ. ಮೋದಿ ಸರ್ಕಾರದಡಿ ಭಾರತದ ವಿದೇಶಾಂಗ ನೀತಿ

ಕಾಂಗ್ರೆಸ್‌ನೊಳಗಿನ ಭಿನ್ನಮತವನ್ನು ಬಯಲಿಗೆಳೆದ ಮಧ್ಯಪ್ರಾಚ್ಯ ಯುದ್ಧ Read More »

ಇರಾನ್‌ ಪರ್ವತದಲ್ಲಿ ಸಿಕ್ಕಿಬಿದ್ದಿದ್ದ ಅಮೆರಿಕದ ಪೈಲಟ್‌ ರಕ್ಷಣೆ

ಧ್ವಂಸಗೊಂಡಿದ್ದ ಎಫ್‌-15 ಈಗಲ್‌ ಸ್ಟ್ರೈಕ್‌ ಯುದ್ಧ ವಿಮಾನದ ಪೈಲಟ್‌ ಟೆಹ್ರಾನ್‌: ಇರಾನ್‌ನಲ್ಲಿ ಧ್ವಂಸಗೊಂಡಿದ್ದ ಎಫ್‌-15 ಈಗಲ್‌ ಸ್ಟ್ರೈಕ್‌ ಯುದ್ಧ ವಿಮಾನದ ಪೈಲಟ್‌ ಅನ್ನು ಶನಿವಾರ ರಾತ್ರಿ ನಡೆಸಿದ ಸಾಹಸಮಯ ಕಾರ್ಯಾಚರಣೆಯಲ್ಲಿ ಅಮೆರಿಕ ರಕ್ಷಣೆ ಮಾಡಿದೆ. ಇರಾನ್‌ ನೈರುತ್ಯ ಪ್ರಾಂತ್ಯದಲ್ಲಿ ‘ಸಾವು-ಬದುಕು’ ಮಿಷನ್‌ ಹೆಸರಿನಡಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾರ್ಯಾಚರಣೆಗೆ ಇಳಿದ ಅಮೆರಿಕದ ಹತ್ತಾರು ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಸರಕು ಸಾಗಣೆ ವಿಮಾನಗಳು, ನೂರಾರು ಯೋಧರ ಮೂಲಕ ಪೈಲಟ್‌ ಅನ್ನು ರಕ್ಷಿಸಲಾಗಿದೆ. ಶನಿವಾರ ರಾತ್ರಿ ಶತ್ರು ಪ್ರದೇಶದೊಳಗೆ ನುಗ್ಗಿದ

ಇರಾನ್‌ ಪರ್ವತದಲ್ಲಿ ಸಿಕ್ಕಿಬಿದ್ದಿದ್ದ ಅಮೆರಿಕದ ಪೈಲಟ್‌ ರಕ್ಷಣೆ Read More »

ಅಕ್ರಮ ವಲಸಿಗರ ದೋಣಿ ಮುಳುಗಡೆ : 71 ಮಂದಿ ನಾಪತ್ತೆ

ಲಿಬಿಯಾದಿಂದ ಅಕ್ರಮವಾಗಿ ಯುರೋಪ್‌ಗೆ ಹೋಗಲು ಯತ್ನಿಸಿದಾಗ ದುರಂತ ರೋಮ್ : ಸಮುದ್ರ ಮಾರ್ಗದ ಮೂಲಕ ಯುರೋಪ್ ತಲುಪಲು ಯತ್ನಿಸುತ್ತಿದ್ದ 100ಕ್ಕೂ ಅಧಿಕ ಅಕ್ರಮ ವಲಸಿಗರ ದೋಣಿ ಮುಳುಗಿದ ದುರಂತ ಘಟನೆ ಇಟಲಿ ಕರಾವಳಿಯಲ್ಲಿ ಸಂಭವಿಸಿದೆ. ದುರಂತದಲ್ಲಿ 71 ವಲಸಿಗರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕ ಎದುರಾಗಿದೆ. ಲಿಬಿಯಾದಿಂದ ಯುರೋಪ್‌ಗೆ ಹೊರಟಿದ್ದ ಈ ಬೋಟ್‌ನಲ್ಲಿ ಒಟ್ಟು 105 ಜನರಿದ್ದರು ಎಂದು ಬದುಕುಳಿದವರು ತಿಳಿಸಿದ್ದಾರೆ. ಈಸ್ಟರ್ ರಜಾದಿನಗಳ ಸಂದರ್ಭದಲ್ಲಿ ಈ ಪ್ರಯಾಣವನ್ನು ಮಾಡಲಾಗಿತ್ತು. ಮೆಡಿಟರೇನಿಯನ್ ಸಮುದ್ರದ ಭೀಕರ ಅಲೆಗಳು

ಅಕ್ರಮ ವಲಸಿಗರ ದೋಣಿ ಮುಳುಗಡೆ : 71 ಮಂದಿ ನಾಪತ್ತೆ Read More »

ನಾಲ್ಕು ದಿನಗಳಿಂದ ಕಾಡಿನಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ

ಟ್ರೆಕ್ಕಿಂಗ್‌ಗೆ ಹೋಗಿ ದಾರಿ ತಪ್ಪಿ ಕಾಡಿನ ಪಾಳು ಬಂಗಲೆಯಲ್ಲಿದ್ದ ಕೇರಳದ ಯುವತಿ ಮಡಿಕೇರಿ: ತಡಿಯಂಡಮೋಳ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಎಂಬಾಕೆ ನಾಲ್ಕು ದಿನಗಳ ಸತತ ಹುಡುಕಾಟದ ಬಳಿಕ ಕೊ‌ನೆಗೂ ಪತ್ತೆ ಆಗಿದ್ದಾರೆ. ಆ ಮೂಲಕ ನಾಲ್ಕು ದಿನಗಳ‌ ಕಾರ್ಯಾಚರಣೆ ಯಶಸ್ವಿ ಆಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ರಸ್ತೆ ಅರಿವಾಗದೆ ಪಾಳುಬಿದ್ದ ಬಂಗಲೆಯೊಂದರಲ್ಲಿ ಶರಣ್ಯ ಉಳಿದುಕೊಂಡಿದ್ದರು. ಸ್ಥಳೀಯ ಕುಡಿಯ ಯುವಕರು ಅವರನ್ನು ರಕ್ಷಿಸಿ ಕಾಡಿನಿಂದ

ನಾಲ್ಕು ದಿನಗಳಿಂದ ಕಾಡಿನಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ Read More »

ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ಮೆಸ್ಕಾಂ ಅಧಿಕಾರಿಗಳ ಮುಂಜಾಗೃತಾ ಕ್ರಮ

ಪುತ್ತೂರು : ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ದೇವರ ಪೇಟೆ ಸವಾರಿ ಸೇರಿದಂತೆ ಜನಸಂಖ್ಯೆ ಹೆಚ್ಚಾಗಿರುವ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಮಂಜಾಗ್ರತ ಕ್ರಮವಾಗಿ ವಿದ್ಯುತ್ ಸುರಕ್ಷಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಏಪ್ರಿಲ್ 10 ರಿಂದ ಆರಂಭವಾಗುವ ದೇವರಪೇಟೆ ಸವಾರಿಯ ಸಂದರ್ಭ ಯಾವುದೇ ಅನಾಹುತ ಸಂಭವಿಸದಂತೆ ಎಚ್ ಟಿ ಹಾಗೂ ಎಲ್‌ಟಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದ ಹಾಗೂ ತಂತಿಗಳಿಗೆ ವಾಲಿ ನಿಂತಿದ್ದ ಮರದ ಕೊಂಬೆಗಳು ಮತ್ತು ಗೆಲ್ಲುಗಳನ್ನು ಕಡಿಯಲಾಯಿತು. ವಿದ್ಯುತ್ ತಂತಿಗಳ ಸಂಪರ್ಕದಿಂದ ಉಂಟಾಗಬಹುದಾದ ಅಪಾಯಗಳನ್ನು ತಡೆಗಟ್ಟುವ

ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ಮೆಸ್ಕಾಂ ಅಧಿಕಾರಿಗಳ ಮುಂಜಾಗೃತಾ ಕ್ರಮ Read More »

ಚುನಾವಣೆಗೆ ಸ್ಪರ್ಧಿಸದಿರುವುದು ನನ್ನದೇ ನಿರ್ಧಾರ : ಅಣ್ಣಾಮಲೈ ಸ್ಪಷ್ಟನೆ

ಟಿಕೆಟ್‌ ನಿರಾಕರಣೆ ಬರೀ ಗುಲ್ಲು ಎಂದ ಮಾಜಿ ಅಧ್ಯಕ್ಷ ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದೆ ಎಂದು ಗುಲ್ಲೆಬ್ಬಿಸಿರುವ ಕುರಿತು ಸ್ಪಷ್ಟೀಕರಣ ನೀಡಿರುವ ತಮಿಳುನಾಡು ಬಿಜೆಪಿ ಘಟಕದ ಮಾಜಿ ಮುಖ್ಯಸ್ಥ ಅಣ್ಣಾಮಲೈಸ್ಪರ್ಧಿಸದಿರುವುದು ನನ್ನದೇ ನಿರ್ಧಾರ ಎಂದಿದ್ದಾರೆ. ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಾನು ನಿರ್ಧರಿಸಿದ್ದೇನೆ. ಪಕ್ಷದ ಕೋರ್ ಕಮಿಟಿಗೆ ಈ ನಿರ್ಧಾರವನ್ನ ಮುಂಚಿತವಾಗಿ ತಿಳಿಸಿದ್ದೇನೆ. ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಲಿಖಿತವಾಗಿ ಕೊಟ್ಟಿದ್ದೇನೆ. ಇದಿಷ್ಟಕ್ಕೇ ನನಗೆ ಟಿಕೆಟ್‌

ಚುನಾವಣೆಗೆ ಸ್ಪರ್ಧಿಸದಿರುವುದು ನನ್ನದೇ ನಿರ್ಧಾರ : ಅಣ್ಣಾಮಲೈ ಸ್ಪಷ್ಟನೆ Read More »

error: Content is protected !!
Scroll to Top