ಗುಡ್ಡದ ಮೇಲಿಂದ ಹಾರಿ ಯುವಕ ಆತ್ಮಹತ್ಯೆ

ಯಲ್ಲಾಪುರ: ಜೇನುಕಲ್ಲು ಗುಡ್ಡದ ಮೇಲಿಂದ ಹಾರಿ ಧಾರವಾಡದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತನನ್ನು ಹೊಸಯಲ್ಲಾಪುರದ ನಿವಾಸಿ ಶ್ರೀನಿಧಿ ಕಡಕೋಳ(23) ಎಂದು ಗುರುತಿಸಲಾಗಿದೆ. ಶ್ರೀನಿಧಿ ಅವರು ತಾವು ಸ್ಕೂಟಿಯಲ್ಲಿ ಗೋಕರ್ಣಕ್ಕೆ ಹೋಗುವುದಾಗಿ ಹೇಳಿ ಬಂದಿದ್ದರು. ಈ ಸಂಬಂಧ ಮೃತರ ತಂದೆ ಕೃಷ್ಣ ಕಡಕೋಳ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಮ್ಮ ಮಗ ಯಾವುದೋ ವಿಚಾರವನ್ನು ಗಂಭೀರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ. ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಲ್ಲಿ ನಮಗೆ ಯಾವ ಸಂಶಯ ಸಹ ಇಲ್ಲ ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ […]

ಗುಡ್ಡದ ಮೇಲಿಂದ ಹಾರಿ ಯುವಕ ಆತ್ಮಹತ್ಯೆ Read More »

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ: ಆರೋಪಿಗಳು ಅಂದರ್

ಬೆಂಗಳೂರು: ಕಾಲು ತಾಗಿತು ಎಂಬ ವಿಷಯಕ್ಕೆ ಆರಂಭವಾದ ಕಲಹ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವನಹಳ್ಳಿಯಲ್ಲಿ ‌ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಶಿಕುಮಾರ್ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಮಂಜುನಾಥ ಮತ್ತು ಭಾಗ್ಯರಾಜ್ ಎಂದು ಗುರುತಿಸಲಾಗಿದೆ. ಶಿವನಹಳ್ಳಿಯ ಹೊಟೇಲ್ ಒಂದರಲ್ಲಿ ಶಶಿಕುಮಾರ್ ತಿಂಡಿ ತಿನ್ನುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಮಂಜುನಾಥನ ಕಾಲನ್ನು ಶಶಿಕುಮಾರ್ ತುಳಿದಿದ್ದಾರೆ. ಈ ಕ್ಷುಲ್ಲಕ ವಿಷಯಕ್ಕೆ ಜಗಳ ಆರಂಭವಾಗಿದೆ. ಇದೇ ಸಮಯದಲ್ಲಿ ಮಂಜುನಾಥ ತನ್ನ ಸಹೋದರ ಭಾಗ್ಯರಾಜ್‌ನನ್ನು ‌ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಜಗಳ ತಾರಕಕ್ಕೇರಿ ಭಾಗ್ಯ ರಾಜ್ ಶಶಿಕುಮಾರ್

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ: ಆರೋಪಿಗಳು ಅಂದರ್ Read More »

ಫೋನ್ ರಿಪೇರಿ ಮಾಡಿಸಿ ಕೊಡಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವತಿ

ಕಾಸರಗೋಡು: ಮೊಬೈಲ್ ಡಿಸ್ಪ್ಲೇ ರಿಪೇರಿ ಮಾಡಿಸಿಕೊಟ್ಟಿಲ್ಲ ‌ಎನ್ನುವ ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕಳತ್ತೂರಿನ ಕಿದೂರು ಎಂಬಲ್ಲಿ ‌ನಡೆದಿದೆ. ಮೃತಳನ್ನು ಎಂ.ಡಿ.‌ ಪೂಜಾ(17) ಎಂದು ಗುರುತಿಸಲಾಗಿದೆ. ಪೂಜಾ ಮಂಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದಳು. ಅನಾರೋಗ್ಯದ ಕಾರಣಕ್ಕೆ ಆಕೆಯ ಶಿಕ್ಷಣ ಅರ್ಧಕ್ಕೆ ನಿಂತಿತ್ತು. ಅದನ್ನು ಮುಂದಿನ ವರ್ಷದಿಂದ ಮತ್ತೆ ಮುಂದುವರೆಸುವ ಸಿದ್ಧತೆಯಲ್ಲಿದ್ದಳು. ಕೆಲ ದಿನಗಳ ಹಿಂದೆ ಪೂಜಾಳ ಫೋನ್ ಡಿಸ್ಪ್ಲೇ ಹಾಳಾಗಿದ್ದು, ಅದನ್ನು ರಿಪೇರಿ ಮಾಡಿಸಿ ಕೊಡುವಂತೆ ಮನೆಯವರಲ್ಲಿ ಹೇಳುತ್ತಿದ್ದಳು. ಇಲ್ಲವಾದಲ್ಲಿ

ಫೋನ್ ರಿಪೇರಿ ಮಾಡಿಸಿ ಕೊಡಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವತಿ Read More »

ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ಧ ಕೇಸ್‌

ನೇತ್ರಾವತಿ ನದಿ ತೀರದಲ್ಲಿ ಕಂಡುಬಂದಿದ್ದ ರಾಶಿ ರಾಶಿ ಆಧಾರ್‌ ಕಾರ್ಡ್‌ ಬಂಟ್ವಾಳ : ಎರಡು ದಿನಗಳ ಹಿಂದೆ ಫರಂಗಿಪೇಟೆ ಸಮೀಪ ನೇತ್ರಾವತಿ ನದಿ ದಡದಲ್ಲಿ ಆಧಾರ್‌ ಕಾರ್ಡ್‌ ರಾಶಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಫರಂಗಿಪೇಟೆ ಅಂಚೆ ಇಲಾಖೆ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿ ದಡದಲ್ಲಿ ಮಾ.3ರಂದು ಸಮಯ ಸಂಜೆ ಸ್ಥಳೀಯ ನಿವಾಸಿಗಳ 2013ರಿಂದ 2023ರವರೇಗಿನ ಅಂದಾಜು 500 ಮೂಲ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆಯ ಪೋಸ್ಟ್

ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ಧ ಕೇಸ್‌ Read More »

ನಾಯಿ ಮೂತ್ರ ವಿಸರ್ಜಿಸಿದ್ದಕ್ಕೆ ಗಲಾಟೆ: ದೂರು ದಾಖಲು

ಬೆಂಗಳೂರು: ನಾಯಿ ಮೂತ್ರ ವಿಸರ್ಜನೆ ಮಾಡಿದ ವಿಷಯಕ್ಕೆ ಹಿರಿಯ ನಾಗರಿಕರು ಮತ್ತು ಕಿರಿಯರ ನಡುವೆ ನೂಕಾಟ ತಳ್ಳಾಟ ನಡೆದ ಘಟನೆ ವರ್ತೂರಿನ ಬ್ರಿಗೇಡ್ ಯುಟೋಪಿಯಾ ಅಪಾರ್ಟ್‌ಮೆಂಟ್‌ನಲ್ಲಿ ‌ನಡೆದಿದೆ. ಅಪಾರ್ಟ್‌ಮೆಂಟಿನಲ್ಲಿ ಹಿರಿಯರಿಗೆಂದೇ ‌ಮೀಸಲಾದ ಪ್ರದೇಶದಲ್ಲಿ ತರುಣ್ ಅರೋರಾ ಎಂಬ ಯುವಕ ನಾಯಿಯನ್ನು ವಾಕಿಂಗ್‌ಗೆ ಕರೆ ತಂದಿದ್ದಾನೆ. ಈ ವೇಳೆ ನಾಯಿ ಮೂತ್ರ ವಿಸರ್ಜನೆ ಮಾಡಿದೆ. ಇದನ್ನು ನೋಡಿದ ಹಿರಿಯರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಹಿರಿಯರು ಮತ್ತು ತರುಣ್ ನಡುವೆ ನೂಕಾಟ, ತಳ್ಳಾಟ, ಹೊಡೆದಾಟ ‌ನಡೆದಿದೆ. ಈ

ನಾಯಿ ಮೂತ್ರ ವಿಸರ್ಜಿಸಿದ್ದಕ್ಕೆ ಗಲಾಟೆ: ದೂರು ದಾಖಲು Read More »

ಮಸೀದಿ ಗೋಡೆ ಮೇಲೆ ‘ಜೈ ಶ್ರೀರಾಮ್’ ಎಂದು ಮಗನ ಕೈಯಲ್ಲೇ ಬರೆಸಿದ ತಂದೆ

ಬಾಗಲಕೋಟೆ: ತನ್ನ ಮಗನ ಕೈಯಿಂದ ಮುಸ್ಲಿಂ ತಂದೆಯೊಬ್ಬ ಸೆಕ್ಟರ್ 44 ಮಸೀದಿಯ ಗೋಡೆಯ ಮೇಲೆಯೇ ‘ಜೈ ಶ್ರೀರಾಮ್’ ಎಂದು ಬರೆಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಶಿವಾಜಿ ಮೆರವಣಿಗೆಯ ಸಮಯದಲ್ಲಿ ನಡೆದ ಕಲ್ಲು ತೂರಾಟ ಘಟನೆಯ ಕಾವು ಕಡಿಮೆಯಾಗುವ ಮೊದಲೇ ಮತ್ತೊಂದು ವಿವಾದಾತ್ಮಕ ಘಟನೆ ನಡೆದಿದ್ದು, ನಗರ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನುವುದು ಸತ್ಯ. ಮಗನ ಕೈಯಿಂದ ಗೋಡೆ ಮೇಲೆ ಬರೆಯಿಸಿ ಬಳಿಕ ಅಲ್ಲಿಂದ ಆಟೋ ಹತ್ತಿ ತೆರಳಿದ್ದಾರೆ. ಈ

ಮಸೀದಿ ಗೋಡೆ ಮೇಲೆ ‘ಜೈ ಶ್ರೀರಾಮ್’ ಎಂದು ಮಗನ ಕೈಯಲ್ಲೇ ಬರೆಸಿದ ತಂದೆ Read More »

ವ್ಯಕ್ತಿ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

ಪುತ್ತೂರು: ಕಾರು ತಾಗಿದ ‌ಕಾರಣವನ್ನಿಟ್ಟುಕೊಂಡು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಶ್ರೀನಿವಾಸ ಭಟ್ ಎಂದು ಗುರುತಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ವ್ಯಕ್ತಿ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು Read More »

ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಭಟ್ಕಳ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ವೈಯಕ್ತಿಕ ಕಾರಣಗಳ ಬೇಸರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಗದ್ದೆಯಲ್ಲಿ ನಡೆದಿದೆ. ಮೃತನನ್ನು ‌ಕೌಶಿಕ್ ಸುಬ್ರಾಯ ನಾಯ್ಕ ಎಂದು ಗುರುತಿಸಲಾಗಿದೆ. ಕೌಶಿಕ್ ಓದಿನಲ್ಲಿ ಪ್ರತಿಭಾವಂತನಾಗಿದ್ದು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ. ಆದರೆ ಶುಕ್ರವಾರ ಭೌತಶಾಸ್ತ್ರ ಪರೀಕ್ಷೆ ಬರೆಯಬೇಕಾಗಿದ್ದ ಹುಡುಗ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವೈಯಕ್ತಿಕ ಕಾರಣಗಳಿಂದ ಬೇಸತ್ತು ಆತ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ

ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು Read More »

ಕೊಚ್ಚಿಯಲ್ಲಿ ಲಂಗರು ಹಾಕಿದ ಇರಾನ್‌ನ ಸಮರ ನೌಕೆ

ಕೊಚ್ಚಿ ಬಂದರಿನಲ್ಲಿ ಕೆಲವು ದಿನಗಳಿಂದ ನಿಂತಿರುವ ಯುದ್ಧನೌಕೆ ನವದೆಹಲಿ: ಇರಾನಿನ ಯುದ್ಧ ನೌಕೆಯನ್ನು ಅಮೆರಿಕ ಮುಳುಗಿಸಿದ ಬೆನ್ನಲ್ಲೇ ಭಾರತ ಇರಾನಿನ ಇನ್ನೊಂದು ಹಡಗನ್ನು ಕೊಚ್ಚಿಯಲ್ಲಿ ತುರ್ತಾಗಿ ನಿಲ್ಲಿಸಲು ಅನುಮತಿ ನೀಡಿದ ವಿಚಾರ ಬೆಳಕಿಗೆ ಬಂದಿದೆ. ಇರಾನ್ ಯುದ್ಧನೌಕೆ IRIS ದೇನಾವನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಮುಳುಗಿಸುವ ಕೆಲವು ದಿನಗಳ ಮೊದಲು IRIS Lavan ಭಾರತದಲ್ಲಿ ನಿಲ್ಲಿಸಲು ಅನುಮತಿ ಕೇಳಿತು. ಇರಾನಿನ ವಿನಂತಿಯನ್ನು ಸ್ವೀಕರಿಸಿದ ಭಾರತ ಕೊಚ್ಚಿಯಲ್ಲಿ ನಿಲ್ಲಿಸಲು ಅನುಮತಿ ನೀಡಿದೆ. ಹಡಗಿನಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿದ್ದರಿಂದ

ಕೊಚ್ಚಿಯಲ್ಲಿ ಲಂಗರು ಹಾಕಿದ ಇರಾನ್‌ನ ಸಮರ ನೌಕೆ Read More »

ಸೈಕಲ್‌ನಿಂದ ಬಿದ್ದು ಬಾಲಕ ಸಾವು

ವಿಟ್ಲ: ಬಾಲಕ ಸೈಕಲ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ವಿಟ್ಲ ಸಮೀಪ ಕೊಳ್ನಾಡು ಎಂಬಲ್ಲಿ ಸಂಭವಿಸಿದೆ. ಕೊಳ್ನಾಡು ಗ್ರಾಮದ ತಾಳಿತ್ತನೂಜಿ ದೇವಸ್ಯ ನಿವಾಸಿ ಅಸ್ಮ ಎಂಬವರ ಪುತ್ರ ಆಸಿಫ್‌ (12) ಸೈಕಲ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಬಾಲಕ. ಮದರಸವೊಂದರಲ್ಲಿ ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮನೆಗೆ ಸೈಕಲ್‌ನಲ್ಲಿ ಹಿಂತಿರುಗುವ ವೇಳೆ ರಸ್ತೆಯ ತಿರುವಿನಲ್ಲಿ ಸೈಕಲ್‌ ನಿಯಂತ್ರಣ ತಪ್ಪಿ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಆಸೀಪ್‌ನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲವೆಂದು ಸ್ಥಳೀಯರು

ಸೈಕಲ್‌ನಿಂದ ಬಿದ್ದು ಬಾಲಕ ಸಾವು Read More »

error: Content is protected !!
Scroll to Top