ಸುದ್ದಿ

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 16 ವಿದ್ಯಾರ್ಥಿಗಳು ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಬೈರಮೂಲೆ ಸುಬ್ಬಪ್ಪ ಪಾಟಾಳಿ ಮತ್ತು ವೇದಾವತಿ ಎ ದಂಪತಿಗಳ ಪುತ್ರ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಬಿ ಎಸ್ ಸುದರ್ಶನ್ ಐವತೋಕ್ಲು ಗ್ರಾಮದ ಕಮಿಲ […]

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ Read More »

ಅರ್ಪಣಾಭಾವದ ಜೀವಂತ ಪ್ರತಿರೂಪ ಕಾವು ಗಣಪಯ್ಯರಿಗೆ ಗೌರವಾರ್ಪಣೆ

ಕಾವು: ರಾಷ್ಟ್ರಸೇವೆಯ ಪವಿತ್ರ ಪಥದಲ್ಲಿ ತನ್ನ ಬದುಕಿನ ಬಹುಪಾಲನ್ನು ನಿಶ್ಶಬ್ದವಾಗಿ ಸಮರ್ಪಿಸಿಕೊಂಡ ಹಿರಿಯ ಶಾಖಾ ಪ್ರಮುಖ ಗಣಪಯ್ಯ ಕಾವು ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಗೌರವಾರ್ಪಣೆ ಸಲ್ಲಿಸಲಾಯಿತು. ಗಣಪಯ್ಯರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಶಾಲು ಹೊದಿಸಿ, ಹಾರ ಹಾಕಿ, ಗೌರವಧನ ಹಾಗೂ ಫಲವಸ್ತುಗಳನ್ನು ನೀಡಿ ಅವರನ್ನು ಸನ್ಮಾನಿಸ, ಮಾತನಾಡಿದ ಅವರು, ನಿತ್ಯ ಶಾಖೆಯ ಮೂಲಕ ರಾಷ್ಟ್ರಚಿಂತನೆಯನ್ನು ತಲೆಮಾರುಗಳಿಗೆ ಪಸರಿಸಿದ ಗಣಪಯ್ಯರಂತಹ ತ್ಯಾಗಮೂರ್ತಿಗಳು ಸಂಘದ ನಿಜವಾದ ಶಕ್ತಿಯಾಗಿದ್ದಾರೆ. ಅವರ

ಅರ್ಪಣಾಭಾವದ ಜೀವಂತ ಪ್ರತಿರೂಪ ಕಾವು ಗಣಪಯ್ಯರಿಗೆ ಗೌರವಾರ್ಪಣೆ Read More »

ನೀರಾನೆ ದಾಳಿಯಲ್ಲಿ ಗಾಯಗೊಂಡ ಯುವ ಪಶು ವೈದ್ಯೆ ಸಾವು

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಸಂಭವಿಸಿದ ದುರ್ಘಟನೆ ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ಪಶು ವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ಬೆಂಗಳೂರು ಮೂಲದ ಡಾ.ಸಮೀಕ್ಷಾ ರೆಡ್ಡಿ (27) ಎಂದು ಗುರುತಿಸಲಾಗಿದೆ. ಸಮೀಕ್ಷಾ ಸಫಾರಿಯಲ್ಲಿ ಪಶುವೈದ್ಯ ಅಧಿಕಾರಿಯಾಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ 10.30ರ ಸುಮಾರಿಗೆ ಅವರು ಸನ್ ಕಾನರ್ ಹಕ್ಕಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ಬಳಿಕ ರಾತ್ರಿ 11.45ರ ಸುಮಾರಿಗೆ ಗರ್ಭಿಣಿ

ನೀರಾನೆ ದಾಳಿಯಲ್ಲಿ ಗಾಯಗೊಂಡ ಯುವ ಪಶು ವೈದ್ಯೆ ಸಾವು Read More »

ಜೀವ ಭಯ: ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಕಳುಹಿಸಿಕೊಟ್ಟ ಪತಿ

ಲಕ್ನೋ: ಪ್ರಾಣ ಭಯಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಕಳುಹಿಸಿದ ಘಟನೆ ಉತ್ತರ ಪ್ರದೇಶದ ಬುಲಂಧ್‌ಶಹರ್‍‌ನಲ್ಲಿ ನಡೆದಿದೆ. ಕೂಲಿ ಕಾರ್ಮಿಕ ರಾಜ್‌ಕುಮಾರ್ ಎಂಬವರದ್ದು ಏಳು ವರ್ಷದ ದಾಂಪತ್ಯ. ಆರು ತಿಂಗಳ ಸಣ್ಣ ಮಗುವೂ ಅವರಿಗಿದೆ. ಈ ನಡುವೆ ಅವರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯ ಜೊತೆಗೆ ಸಂಬಂಧ ಶುರುವಾಗಿದೆ. ಪತಿ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದಾಗ ಪತ್ನಿ ಮತ್ತು ಆಕೆಯ ಪ್ರೇಮಿಯ ಆಕ್ಷೇಪಾರ್ಹ ಚಿತ್ರಗಳೂ ಕಂಡುಬಂದಿವೆ. ಜೊತೆಗೆ ಸಿಮೆಂಟ್, ನೀಲಿ ಡ್ರಮ್ ಎನ್ನುವ

ಜೀವ ಭಯ: ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಕಳುಹಿಸಿಕೊಟ್ಟ ಪತಿ Read More »

ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು ಒಂದು ತಿಂಗಳು ರದ್ದು

ತುರ್ತು ರೈಲು ಹಳಿ ಕಾಮಗಾರಿಗೆ ಹಲವು ರೈಲುಗಳ ಸಂಚಾರ ವ್ಯತ್ಯಯ ಮಂಗಳೂರು: ತುರ್ತು ಹಳಿ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವೆ ಕಾರ್ಯನಿರ್ವಹಿಸುವ ಪ್ರಯಾಣಿಕ ರೈಲು ಸೇವೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ಮಾರ್ಗವಾಗಿ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಒಟ್ಟು 35 ದಿನಗಳವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 56629 (ಮಂಗಳೂರು – ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್) ಮತ್ತು ರೈಲು ಸಂಖ್ಯೆ 56630 (ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಪ್ಯಾಸೆಂಜರ್)

ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು ಒಂದು ತಿಂಗಳು ರದ್ದು Read More »

ಮಹಾಲಿಂಗೇಶ್ವರ ದೇಗುಲದ ಸಮೀಪದಿಂದ ರೈಲ್ವೆ ರಸ್ತೆಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ನಿರ್ಮಾಣ: ಫಲಾನುಭವಿಗಳ ಜೊತೆ ಶಾಸಕರ ಸಭೆ

ಪುತ್ತೂರು: ಮುಖ್ಯ ರಸ್ತೆಯಿಂದ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲೆ ರೈಲ್ವೆ ರಸ್ತೆಗೆ ಸಂಪರ್ಕ ಕಲ್ಪಿಸುವ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಹಾಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳೀಯ ಫಲಾನುಭವಿಗಳ ಜೊತೆಗೆ ಸಭೆ ನಡೆಸಿದರು. ಈ ರಸ್ತೆಯು ಜನರ ಬಹು ಸಮಯದ ಬೇಡಿಕೆಯಾಗಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರ ಮೂಲಕ ಈ ರಸ್ತೆಯ ಕನಸು ನನಸಾಗುತ್ತಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ. ಈ ರಸ್ತೆ ನಿರ್ಮಾಣ

ಮಹಾಲಿಂಗೇಶ್ವರ ದೇಗುಲದ ಸಮೀಪದಿಂದ ರೈಲ್ವೆ ರಸ್ತೆಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ನಿರ್ಮಾಣ: ಫಲಾನುಭವಿಗಳ ಜೊತೆ ಶಾಸಕರ ಸಭೆ Read More »

ದಾಂಪತ್ಯ ಕಲಹ: ಪತ್ನಿಯನ್ನು ಕೊಲೆಗೈದು ‌ಪತಿ ಆತ್ಮಹತ್ಯೆಗೆ ಯತ್ನ

ಪುತ್ತೂರು: ಗಂಡ ಹೆಂಡಿರ ನಡುವಿನ ಜಗಳ ಕೊನೆಗೆ ದುರಂತ ಅಂತ್ಯ ಕಂಡ ಘಟನೆ ಅರಿಯಡ್ಕ ಗ್ರಾಮದ ಕಟ್ಟಾತ್ತಾರಿನ ಗೋಳ್ತಿಲ‌ದಲ್ಲಿ ನಡೆದಿದೆ. ದಂಪತಿ ನಡುವಿನ ಜಗಳದಲ್ಲಿ ಗಂಡ ಹೆಂಡತಿಯನ್ನು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿರುವ ಪತಿಯನ್ನು ‌ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪುತ್ತೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ‌ತಿಳಿದು ಬರಬೇಕಿದೆ.

ದಾಂಪತ್ಯ ಕಲಹ: ಪತ್ನಿಯನ್ನು ಕೊಲೆಗೈದು ‌ಪತಿ ಆತ್ಮಹತ್ಯೆಗೆ ಯತ್ನ Read More »

ರೀಲ್ಸ್‌ ಹುಚ್ಚಿನಿಂದ ಪ್ರಾಣವನ್ನೇ ಕಳೆದುಕೊಂಡ 15 ವರ್ಷದ ಬಾಲಕ

ಹುಬ್ಬಳ್ಳಿ: ರೀಲ್ಸ್ ಹುಚ್ಚಿನಿಂದ ಹದಿನೈದು ವರ್ಷದ ಹುಡುಗನೊಬ್ಬ ಪ್ರಾಣವನ್ನೇ ಕಳೆದುಕೊಂಡ ದುರಂತ ಘಟನೆ ನಡೆದಿದೆ. ಮೃತನನ್ನು ನಮೀಷ ಸಂಗಳದ ಎಂದು ಗುರುತಿಸಲಾಗಿದೆ. ಈತ ಮೈಸೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ. ಯುಗಾದಿ ರಜಾ ಹಿನ್ನೆಲೆ ಮನೆಗೆ ಬಂದಿದ್ದಾಗಿ ತಿಳಿದು ಬಂದಿದೆ. ಐಷಾರಾಮಿ ಕಾರು ಮತ್ತು ಬೈಕ್‌ಗಳಲ್ಲಿ ‌ತನ್ನ ಗೆಳೆಯರ ಜೊತೆಗೆ ಸ್ಟಂಟ್ ಮಾಡಲು ನಮೀಷ ಮುಂದಾಗಿದ್ದಾನೆ. ಈ ವೇಳೆ ಕಾರಿನ ನಿಯಂತ್ರಣ ತಪ್ಪಿ ನಮೀಷ ಚಲಾಯಿಸುತ್ತಿದ್ದ ಬೈಕ್‌ಗೆ ಗುದ್ದಿದೆ. ಸ್ಥಳದಲ್ಲೇ ನಮೀಷ ಮೃತಪಟ್ಟಿದ್ದಾನೆ. ಮೃತ ಬಾಲಕ ಬಿಜೆಪಿ ಮುಖಂಡ

ರೀಲ್ಸ್‌ ಹುಚ್ಚಿನಿಂದ ಪ್ರಾಣವನ್ನೇ ಕಳೆದುಕೊಂಡ 15 ವರ್ಷದ ಬಾಲಕ Read More »

ಶೀಲ ಶಂಕಿಸಿ ಭಾವಿಪತ್ನಿಯನ್ನು ಬರ್ಬರವಾಗಿ ಸಾಯಿಸಿದ ಯುವಕ

ಬೆಂಗಳೂರು: ತನ್ನನ್ನು ಮದುವೆಯಾಗಬೇಕಿದ್ದ ಯುವತಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ. ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್​​ನಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಈ ಕೃತ್ಯ ಎಸಗಿದ್ದಾನೆ. ಕೋಲಾರ ಮೂಲದ ಅಪ್ರಾಪ್ತೆ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಸೈಯದ್ ಆಕೆ ಜೊತೆ ಸುತ್ತಾಡಿಕೊಂಡಿದ್ದನು. ಈ ವಿಷಯ ತಿಳಿದು ಪೋಷಕರು ಇಬ್ಬರಿಗೂ 2025 ಜೂನ್‌ನಲ್ಲಿ ಎಂಗೇಜ್ಮೆಂಟ್ ಮಾಡಿದ್ದರು. ನಿಶ್ಚಿತಾರ್ಥವಾದ ನಂತರ ಸೈಯದ್‌ಗೆ ಭಾವಿಪತ್ನಿ ಮೇಲೆ

ಶೀಲ ಶಂಕಿಸಿ ಭಾವಿಪತ್ನಿಯನ್ನು ಬರ್ಬರವಾಗಿ ಸಾಯಿಸಿದ ಯುವಕ Read More »

ಬೆಳ್ತಂಗಡಿ : ಪ್ರಚೋದನಕಾರಿ ಪೋಸ್ಟ್‌ ಆರೋಪದಲ್ಲಿ ಸೆರೆಯಾಗಿದ್ದ ಯುವತಿಗೆ ಮಧ್ಯರಾತ್ರಿ ಜಾಮೀನು

ಸೋಷಿಯಲ್‌ ಮೀಡಿಯಾದಲ್ಲಿ ಕೋಮು ಪ್ರಚೋದನೆ ಪೋಸ್ಟ್‌ ಹಾಕಿದ ಆರೋಪದಲ್ಲಿ ಬಂಧನ ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಧಿತಳಾಗಿದ್ದ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಯುವತಿಗೆ ಮಧ್ಯಂತರ ಜಾಮೀನು ಲಭಿಸಿದ್ದು ಆಕೆ ಬಿಡುಗಡೆಯಾಗಿದ್ದಾಳೆ. ಜಾಮೀನು ಪಡೆದ ಬಳಿಕ ಆಕೆಯೊಂದಿಗಿನ ಫೊಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಶಾಸಕ ಹರೀಶ್ ಪೂಂಜ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕೀಯದ ವಿರುದ್ಧ ಗೆಲುವು ಲಭಿಸಿದೆ ಎಂದು ಬರೆದಿದ್ದಾರೆಶಾಸಕರ ಫೇಸ್‌ಬುಕ್ ಪೋಸ್ಟ್ ವೈರಲ್‌ ಆಗಿದೆ. ಭಯೋತ್ಪಾದನಾ ವಿರೋಧಿ ಹಿಂದೂ ಪರವಾದ ಪೋಸ್ಟ್

ಬೆಳ್ತಂಗಡಿ : ಪ್ರಚೋದನಕಾರಿ ಪೋಸ್ಟ್‌ ಆರೋಪದಲ್ಲಿ ಸೆರೆಯಾಗಿದ್ದ ಯುವತಿಗೆ ಮಧ್ಯರಾತ್ರಿ ಜಾಮೀನು Read More »

error: Content is protected !!
Scroll to Top