ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ? : ಅಶ್ವಿನ್ ಎಲ್. ಶೆಟ್ಟಿ | ಭಾಗ -6

ಭಾರತದಲ್ಲಿ ಒಂದು ಕಾಲದಲ್ಲಿದ್ದ ರಾಷ್ಟ್ರೀಯ ಕಲ್ಪನೆಯನ್ನು ನೆಹರೂವಿಯನ್ ಅಭಿವೃದ್ಧಿ ಮಾದರಿ ಎಂದು ಕರೆಯಲಾಗುತ್ತಿತ್ತು. ಇದು ಎರಡು ಅಂಶಗಳನ್ನು ಹೊಂದಿದೆ. ಮೊದಲನೆಯ ಅಂಶವೆಂದರೆ ಸಮಾಜವಾದ ಇದರಲ್ಲಿ ಎಲ್ಲಾ ಕೈಗಾರಿಕೆಗಳು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸರಕಾರವು ನಿಯಂತ್ರಿಸುತ್ತದೆ. ಎರಡನೆಯ ಅಂಶವೆಂದರೆ ನೆಹರೂವಿಯನ್ ಸೆಕ್ಯುಲರಿಸಂ ಎಂದರೆ ಹಿಂದುಗಳಲ್ಲಿ ಸುಧಾರಣೆಯಾಗಬೇಕು, ಹಿಂದುಗಳು ಆಧುನೀಕರಣಗೊಳ್ಳಬೇಕು, ಅಲ್ಪಸಂಖ್ಯಾತರು ಯಾವುದೇ ಉದ್ವೇಗಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ನೀವು ವಿಶ್ರಾಂತಿ ಪಡೆಯಿರಿ. ಇದಕ್ಕೆ ಪ್ರತಿಯಾಗಿ ಬಿಜೆಪಿಯು ಪರ್ಯಾಯ ತತ್ವವನ್ನು ನೀಡಿತು, ಅದುವೇ ಹಿಂದುತ್ವ ಕಲ್ಯಾಣ ರಾಜ್ಯ ಇದರ ಪ್ರಕಾರ ದೇಶದ ಎಲ್ಲರಲ್ಲೂ ಸುಧಾರಣೆಯಾಗಬೇಕು.

ಜನರ ಧರ್ಮ ಯಾವುದೇ ಇರಲಿ, ಅವರ ಸಂಸ್ಕೃತಿ ಸನಾತನ ಧರ್ಮ ಹಾಗಾಗಿ ನಾವು ಸನಾತನ ಸಂಸ್ಕೃತಿಯನ್ನು ಸ್ವೀಕರಿಸಬೇಕಾಗುತ್ತದೆ, ಈ ಸನಾತನ ನಾಗರಿಕತೆಯ ಆಧಾರದ ಮೇಲೆ ನಾವು ಇಡೀ ದೇಶದ ಜನರನ್ನು ಒಗ್ಗೂಡಿಸಿ, ಆರ್ಥಿಕ ಕಲ್ಯಾಣ ರಾಜ್ಯ ಮತ್ತು ಮುಕ್ತ ಮಾರುಕಟ್ಟೆ ಅಭಿವೃದ್ದಿಯನ್ನು ಬೆಂಬಲಿಸಬೇಕು.

ಈ ಆದರ್ಶ ತತ್ವವು ನೆಹರೂರವರ ಆಭಿವೃದ್ದಿ ಮಾದರಿಯ ಆದರ್ಶ ತತ್ವವನ್ನು ಎರಡು ಚುನಾವಣೆಯಲ್ಲಿ ಸೋಲಿಸಿದೆ. ಇದಕ್ಕೆ ಪ್ರತಿಯಾಗಿ ಪ್ರತಿ ಪಕ್ಷಗಳು ಹೊಸರಾಷ್ಟ್ರೀಯ ತಂತ್ರವನ್ನು ರೂಪಿಸಿದ್ದು ಅದನ್ನು ನಾವು ಜಾತಿತ್ವ ಎಂದು ಕರೆಯುತ್ತೇವೆ. ಹಿಂದುತ್ವದ ಗುರಿಯು ಭಾರತದ ಜನರನ್ನು ಜಾತಿ, ಪ್ರದೇಶ, ಭಾಷೆ ಹಾಗೂ ಧರ್ಮದ ಗಡಿಗಳಿಂದ ಬೇರ್ಪಡಿಸುವುದು ಮತ್ತು ಜನರನ್ನು ಹಿಂದುತ್ವದ ಅಂದರೆ ಸನಾತನ ಸಂಸ್ಕೃತಿ ಮತ್ತು ನಾಗರಿಕತೆಯ ಬಂಧದೊಂದಿಗೆ ಬಂಧಿಸುವುದು. ಜಾತಿಯೆಂದರೆ ಭಾರತವು ಜಾತಿ ರಾಷ್ಟ್ರವಾಗಿ ಕುಸಿಯುತ್ತದೆ. ಜಾತಿಯೆಂದರೆ ಭಾರತವನ್ನು ಅದರ ಧರ್ಮ, ಸಂಸ್ಕೃತಿ ಅಥವಾ ಪ್ರಜಾಪ್ರಭುತ್ವದಿಂದ ವ್ಯಾಖ್ಯಾನಿಸಲಾಗುವುದಿಲ್ಲ. ಆದರೆ ಅದರ ಜನರ ಜಾತಿಯಿಂದ ವ್ಯಾಖ್ಯಾನಿಸಲಾಗುತ್ತದೆ. ಭಾರತಮಾತೆಗಿಂತ ನಿಮ್ಮ ಜಾತಿ ದೊಡ್ಡದಾಗಿದ್ದರೆ, ನಿಮ್ಮ ಧರ್ಮ ನಿಮಗಿಂತ ದೊಡ್ಡದು. ಇದು ನಾಗರಿಕತೆಗಿಂತ ದೊಡ್ಡದು, ಇದು ನಿಮ್ಮ ದೇಶ ಪ್ರೇಮಕ್ಕಿಂತ ದೊಡ್ಡದು. ಸ್ನೇಹಿತರೆ, ಹೀಗಾದಾಗ ದೇಶವನ್ನು ವಿಭಜಿಸುವುದು ತುಂಬಾ ಸುಲಭವಾಗುತ್ತದೆ. ಇದು ಅತ್ಯಂತ ಕೆಟ್ಟ ಮತ್ತು ಅಪಾಯಕಾರಿ ರೀತಿಯ ಮತಬ್ಯಾಂಕ್ ರಾಜಕಾರಣವಾಗಿದ್ದು, ಡಾಟ್ ಅಲಯನ್ಸ್ ಇದನ್ನು ಮರಳಿ ತರಲು ಪ್ರಯತ್ನಿಸುತ್ತಿದೆ.





























 
 

ಮೂಲಭೂತವಾಗಿ ಇದು ಬ್ರಿಟಿಷರ ವಿಭಜನೆ ಮತ್ತು ಆಕ್ರಮಣಕಾರಿ ವಿಧಾನವಾಗಿದೆ. ವಿಪರ್ಯಾಸವೆಂದರೆ ಇದನ್ನು ನಾವು ಮತ್ತೆ ನೋಡುತ್ತಿದ್ದೇವೆ. ಅಲ್ಪಾವಧಿಯ, ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಇಂದು ಭಾರತವನ್ನು ದೀರ್ಘಾವಧಿಯಲ್ಲಿ ತುಂಡು ಮಾಡಲು ಸಿದ್ಧವಾಗಿದೆ. ಈ ಜಾತಿ ಸಮೀಕ್ಷೆಯ ಮೂಲಕ ದೀರ್ಘಾವಧಿಯಲ್ಲಿ ಆಗಬಹುದಾದ ಅಪಾಯವನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಹೇಳ ಬಯಸುತ್ತೇನೆ. ಹಾಗೆಯೇ ನೀವು ಸಹ ಇದನ್ನು ಒಪ್ಪುವಿರಾ ಎಂದು ನಾನು ನಿಮ್ಮನ್ನು ಕೇಳ ಬಯಸುತ್ತೇನೆ.

ಈ ರೀತಿ ನಾವು ಜಾತಿಯ ಮೇಲೆ ಹೆಚ್ಚು ಗಮನ ಹರಿಸಿ ಜನಸಂಖ್ಯೆಯಷ್ಟೆ ಹಕ್ಕುಗಳತ್ತ ಗಮನ ಹರಿಸಿದರೆ ಅಸಮಾನತೆಯು ಹೆಚ್ಚಾಗುತ್ತಾ ಹೋಗುತ್ತದೆ. ಈ ರೀತಿಯ ಜಾತಿ ವಿಭಜನೆಯ ವಿರುದ್ಧ ಹೋರಾಡಲು ನಾವು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು? ನಾವು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಏನು ಮಾಡಬಹುದು? ಎಂಬುದರ ಬಗ್ಗೆ ಯೋಚನೆ ಮಾಡಬೇಕಾಗಿದೆ.

ಅಶ್ವಿನ್ ಎಲ್ ಶೆಟ್ಟಿ, BE, ME, DPT, MBA, LLB

ಆಡಳಿತಾಧಿಕಾರಿಗಳು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಸವಣೂರು

(ಮುಗಿಯಿತು)

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top