ಸುದ್ದಿ

ಜನರಿಗೆ ಕರೆಂಟ್‌ ಶಾಕ್‌ : ವಿದ್ಯುತ್‌ ದರ ಯೂನಿಟ್‌ಗೆ 56 ಪೈಸೆ ಹೆಚ್ಚಳ

ಮುಂದಿನ ತಿಂಗಳಿಂದ ಗೃಹ ಬಳಕೆದಾರರಿಗೆ ವಿದ್ಯುತ್‌ ಬರೆ ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ರಾಜ್ಯದ ಜನರಿಗೆ ಶಾಕ್ ಕೊಟ್ಟಿದೆ. ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿದೆ. ನೂತನ ದರ ಮೇ ತಿಂಗಳಿನಿಂದ ಅನ್ವಯ ಆಗಲಿದೆ. 2024-25 ಆರ್ಥಿಕ ವರ್ಷದಲ್ಲಿ 34,084 ಕೋಟಿ ಕೆಇಆರ್‌ಸಿ ಆದಾಯ ನಿರೀಕ್ಷೆ ಮಾಡಿತ್ತು. ಆದರೆ 32,019 ಕೋಟಿಯಷ್ಟೇ ಆದಾಯ ಬಂದಿದೆ. ಹೀಗಾಗಿ 2,068 ಕೋಟಿ ಕೊರತೆಯನ್ನು ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ. […]

ಜನರಿಗೆ ಕರೆಂಟ್‌ ಶಾಕ್‌ : ವಿದ್ಯುತ್‌ ದರ ಯೂನಿಟ್‌ಗೆ 56 ಪೈಸೆ ಹೆಚ್ಚಳ Read More »

ವ್ಯಾನ್‌ ಪ್ರಪಾತಕ್ಕೆ ಉರುಳಿ ಬಿದ್ದು 9 ಮಂದಿ ಸಾವು

ಪ್ರಸಿದ್ಧ ಪ್ರವಾಸಿ ತಾಣ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಸಂಭವಿಸಿದ ದುರಂತ ಕೊಯಮತ್ತೂರು : ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಪ್ರವಾಸಿಗರು ಪ್ರಯಾಣಿಸುತ್ತಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಹತ್ತಾರು ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಗು ಎಂಬಲ್ಲಿನ ಸರ್ಕಾರಿ ಎಲ್‌ಪಿ ಶಾಲೆಯ ಐವರು ಶಿಕ್ಷಕಿಯರು ಸೇರಿದ್ದಾರೆ. ಮೃತರನ್ನು ಅಜಿತಾ (54), ರಮ್ಲಾ

ವ್ಯಾನ್‌ ಪ್ರಪಾತಕ್ಕೆ ಉರುಳಿ ಬಿದ್ದು 9 ಮಂದಿ ಸಾವು Read More »

ಚಾರಣಿಗರಿಗೆ ಹೊಸ ರೂಲ್ಸ್: ಅಪಾಯ ತಪ್ಪಿಸೋದಕ್ಕೆ ‌ಸರ್ಕಾರದ ಹೊಸ ಮಾರ್ಗಸೂಚಿ ಏನು ಗೊತ್ತಾ?

ಬೆಂಗಳೂರು: ರಾಜ್ಯದ ಚಾರಣಕ್ಕೆ ಸೂಕ್ತ ಪ್ರದೇಶಗಳಲ್ಲಿ ಚಾರಣಿಗರಿಗೆ ಅಪಾಯ ಎದುರಾಗುವ ಪರಿಸ್ಥಿತಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ, ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಈಗ 44 ಚಾರಣ ಪ್ರದೇಶ ಗಳಿದ್ದು, ಇದರಲ್ಲಿ ಶರಣ್ಯಾ ಎಂಬ ಯುವತಿ ಕಾಣೆಯಾದ ಕೊಡಗಿನ ತಡಿಯಾಂಡಮೋಳ್ ಮತ್ತು ಕೇರಳದ ಬಾಲಕಿ ಮೃತಪಟ್ಟ ಚಿಕ್ಕಮಗಳೂರಿನ ಚಾರಣ ಪ್ರದೇಶಗಳೂ ‌ಸೇರಿವೆ. ಇಲ್ಲಿ ನಡೆದ ಎಲ್ಲಾ ಅಪಘಾತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಚಾರಣಿಗರ ಸುರಕ್ಷತಾ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವುದಾಗಿದೆ. ಮಾರ್ಗಸೂಚಿಯಲ್ಲೇನಿದೆ?: ಚಾರಣ

ಚಾರಣಿಗರಿಗೆ ಹೊಸ ರೂಲ್ಸ್: ಅಪಾಯ ತಪ್ಪಿಸೋದಕ್ಕೆ ‌ಸರ್ಕಾರದ ಹೊಸ ಮಾರ್ಗಸೂಚಿ ಏನು ಗೊತ್ತಾ? Read More »

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಯಕ್ಷ ಕಲಾವಿರಿಂದ ಪೊಲೀಸರಿಗೆ ದೂರು

ಮಂಗಳೂರು: ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಮಹಿಳಾ ಠಾಣೆಯಲ್ಲಿ ಮತ್ತೆರಡು ಪ್ರಕರಣಗಳು ದಾಖಲಾಗಿವೆ. ಕಲಾವಿದ ಸುಂದರ್ ರೈ ಮಂದಾರ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೊಡಪದವು ಅವರ ತಾಯಿಯ ಹೆಸರಿನಲ್ಲಿ ತಿಮರೋಡಿ ‌ವಿರುದ್ಧ ದೂರು ದಾಖಲಾಗಿರುವುದಾಗಿದೆ. ಕಳೆದ ಆರು ತಿಂಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ‘ಬುರುಡೆ ಗ್ಯಾಂಗ್’ ಹೆಸರಿನ ಹಾಸ್ಯ ಕಾರ್ಯಕ್ರಮದಲ್ಲಿ ಹೆಸರು ಹೇಳದೆಯೇ ತನ್ನನ್ನು ವಿಡಂಬನೆ ಮಾಡಿರುವುದಾಗಿ ಆರೋಪಿಸಿ ಕಲಾವಿದ ಪ್ರಜ್ವಲ್ ಗುರುವಾಯನಕೆರೆ‌ಗೆ ಫೋನ್ ಮೂಲಕ ತಿಮರೋಡಿ

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಯಕ್ಷ ಕಲಾವಿರಿಂದ ಪೊಲೀಸರಿಗೆ ದೂರು Read More »

ಕೊಣಾಜೆ : ಜಾತ್ರೆಗೆಂದು ಹೋದ ಬಾಲಕಿ ನಾಪತ್ತೆ

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಅಡ್ಕದ 16 ವರ್ಷದ ಬಾಲಕಿಯೊಬ್ಬಳು ಏಪ್ರಿಲ್ 12 =ರಿಂದ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಾಗಿದೆ. ನಾಪತ್ತೆಯಾದ ಬಾಲಕಿಯನ್ನು ಜಗದೀಶ್ ಪೂಜಾರಿ ಮತ್ತು ಗುಲಾಬಿ ದಂಪತಿಯ ಪುತ್ರಿ ಚೈತನ್ಯ ಎಂದು ಗುರುತಿಸಲಾಗಿದೆ. ಹರೇಕಳದ ರಾಮಕೃಷ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಈಕೆ, ಇತ್ತೀಚೆಗಷ್ಟೇ ಪರೀಕ್ಷೆ ಮುಗಿಸಿ ಮನೆಯಲ್ಲಿದ್ದಳು. ಬಾಲಕಿಯ ತಾಯಿ ಗುಲಾಬಿ ನೀಡಿದ ದೂರಿನ ಪ್ರಕಾರ, ಏಪ್ರಿಲ್ 12ರಂದು ಬೆಳಗ್ಗೆ ಸುಮಾರು 7.30ಕ್ಕೆ ಸ್ನೇಹಿತರೊಂದಿಗೆ ಪೊಳಲಿ ದೇವಸ್ಥಾನಕ್ಕೆ ಹೋಗುವುದಾಗಿ ತಂದೆಗೆ

ಕೊಣಾಜೆ : ಜಾತ್ರೆಗೆಂದು ಹೋದ ಬಾಲಕಿ ನಾಪತ್ತೆ Read More »

ಮುಖಕ್ಕೆ ಬಟ್ಟೆ ಕಟ್ಟಿ, ಮಾರಕಾಸ್ತ್ರ ‌ಹಿಡಿದು ಅನುಮಾನಾಸ್ಪದ ತಿರುಗಾಟ: ಇಬ್ಬರ ಬಂಧನ

ಕಾರ್ಕಳ: ಮಾರಕಾಸ್ತ್ರಗಳನ್ನು ಹಿಡಿದು, ಮುಖಕ್ಕೆ ಬಟ್ಟೆ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ. ಬಂಧಿತರನ್ನು ಕೊಪ್ಪಳದ ಗಂಗಾವತಿಯ ಹನುಮಪ್ಪ ಮತ್ತು ಕನಕಗಿರಿಯ ‌ಮರಿಯಪ್ಪ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ನಗರ ಪೊಲೀಸರು ಗಸ್ತಿನಲ್ಲಿದ್ದ ಸಮಯದಲ್ಲಿ ಕಾರ್ಕಳದ ಬಸ್ಸು ನಿಲ್ದಾಣ ಸಮೀಪದ ಹೂವಿನ ಅಂಗಡಿಯ ಎದುರಿನ ಗೂಡಂಗಡಿ ಹಿಂಭಾಗದಲ್ಲಿ ಆರೋಪಿಗಳು ಮುಖ ಮುಚ್ಚಿಕೊಂಡು, ಕೈಯಲ್ಲಿ ಚಾಕು ಹಿಡಿದು ನಿಂತಿದ್ದರು‌. ಪೊಲೀಸರನ್ನು ಕಂಡೊಡನೆ ಪರಾರಿಯಾಗಲು ಪ್ರಯತ್ನ ನಡೆಸಿದ್ದಾರೆ. ಪೊಲೀಸರ ಪ್ರಶ್ನೆಗೂ ಇವರು ಸಮರ್ಪಕ ಉತ್ತರ

ಮುಖಕ್ಕೆ ಬಟ್ಟೆ ಕಟ್ಟಿ, ಮಾರಕಾಸ್ತ್ರ ‌ಹಿಡಿದು ಅನುಮಾನಾಸ್ಪದ ತಿರುಗಾಟ: ಇಬ್ಬರ ಬಂಧನ Read More »

ಧಾರ್ಮಿಕ ಕೇಂದ್ರಗಳು ಎಲ್ಲರನ್ನು ಏಕ ಸೂತ್ರದಲ್ಲಿ ಬಂಧಿಸುತ್ತದೆ: ಎಡನೀರು ಶ್ರೀ

ಉಪ್ಪಿನಂಗಡಿ: ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಯಜ್ಞ ಯಾಗಾದಿಗಳು ಆ ಕ್ಷೇತ್ರಕ್ಕೆ ಮಾತ್ರ ಸಂಬಂಧಪಡದೆ ಲೋಕ ಕಲ್ಯಾಣದ ದೃಷ್ಟಿಯಿಂದ ನಡೆಯುತ್ತದೆ. ಎಲ್ಲಾ ಭೇದ ಭಾವವನ್ನು ಮರೆತು ನಾವು ಮಾಡುವ ಪ್ರಾರ್ಥನೆಯಿಂದ ಸಮಾಜಕ್ಕೆ ಭಗವದನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ಆಶೀರ್ವಚನದಲ್ಲಿ ತಿಳಿಸಿದರು. ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಶ್ರೀ ಮಹಾವಿಷ್ಣುಯಾಗ ಸಂದರ್ಭದಲ್ಲಿ ದೇವಸ್ಥಾನದ ಹೊರಾಂಗಣಕ್ಕೆ ಶಾಶ್ವತ ಮೇಲ್ಚಾವಣಿ ಅಳವಡಿಸುವ ಕಾರ್ಯಕ್ಕೆ ಅವರು ಚಾಲನೆಯನ್ನು ನೀಡಿದರು. ಬಾರ್ಯ ಶ್ರೀ ಪಾಂಡುರಂಗ ಭಜನಾ ಮಂದಿರದ

ಧಾರ್ಮಿಕ ಕೇಂದ್ರಗಳು ಎಲ್ಲರನ್ನು ಏಕ ಸೂತ್ರದಲ್ಲಿ ಬಂಧಿಸುತ್ತದೆ: ಎಡನೀರು ಶ್ರೀ Read More »

ಜಿ. ಎಲ್. ಆಚಾರ್ಯ ಜುವೆಲ್ಲರ್ಸ್‌ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಎಪ್ರಿಲ್ 20ರವರೆಗೆ ಗ್ರಾಹಕರಿಗೆ ಆಕರ್ಷಕ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಆಫರ್ ಸಂಸ್ಥೆಯ ಎಲ್ಲಾ ಮಳಿಗೆಗಳಾದ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ಲಭ್ಯವಿರಲಿದೆ. ಗ್ರಾಹಕರು ಖರೀದಿಸುವ ಚಿನ್ನಾಭರಣಗಳ VA ಶುಲ್ಕದ ಮೇಲೆ ರೂ.500/-ರವರೆಗೆ ರಿಯಾಯಿತಿ, ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿಗೆ ರೂ.6000/- ರಿಯಾಯಿತಿ ಹಾಗೂ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ರೂ.7000/- ರವರೆಗೆ ರಿಯಾಯಿತಿ ನೀಡಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ಹಾಗೂ

ಜಿ. ಎಲ್. ಆಚಾರ್ಯ ಜುವೆಲ್ಲರ್ಸ್‌ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ Read More »

ವೈನ್‌ಶಾಪ್‌ನಲ್ಲಿ ಗಲಾಟೆ: ತಡೆಯಲು ಹೋದ ಯುವಕನಿಗೆ ಚಾಕು ಇರಿತ

ಶಿವಮೊಗ್ಗ: ವೈನ್‌ಶಾಪ್‌ನಲ್ಲಿ ಗಲಾಟೆ ಮಾಡುತ್ತಿದ್ದವರನ್ನು ತಡೆಯಲು ಹೋದ ಯುವಕನ ಮೇಲೆ ದುಷ್ಟರು ‌ಚೂರಿ ಇರಿದು ಗಾಯಗೊಳಿಸಿದ ಘಟನೆ ಹೊನ್ನಾಳಿ ರಸ್ತೆಯಲ್ಲಿ ನಡೆದಿದೆ. ರಾಗಿಗುಡ್ಡದ ‌ಸುನಿಲ್(27) ಎಂಬಾತನೇ ಚೂರಿ ಇರಿತಕ್ಕೆ ಒಳಗಾದ ಯುವಕ. ಸುನಿಲ್ ಮತ್ತು ಸ್ನೇಹಿತರು ವೈನ್ ಶಾಪ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿ ಓರ್ವ ಅಪರಿಚಿತ ವ್ಯಕ್ತಿ ಸುನಿಲ್‌ನ ಸ್ನೇಹಿತರ ಜೊತೆಗೆ ಯಾವುದೋ ವಿಚಾರಕ್ಕೆ ಗಲಾಟೆ ಆರಂಭಿಸಿದ್ದ. ಪರಿಸ್ಥಿತಿ ತಿಳಿಗೊಳಿಸುವ ಉದ್ದೇಶದಿಂದ ಸುನಿಲ್ ಗಲಾಟೆ ಬಿಡಿಸಲು ಹೋಗಿದ್ದಾನೆ. ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಸುನಿಲ್ ಮೇಲೆ

ವೈನ್‌ಶಾಪ್‌ನಲ್ಲಿ ಗಲಾಟೆ: ತಡೆಯಲು ಹೋದ ಯುವಕನಿಗೆ ಚಾಕು ಇರಿತ Read More »

ಕುರಿ ತೊಳೆಯಲು ಹೋದ ಸಹೋದರರು ಕೆರೆಗೆ ಬಿದ್ದು ಮೃತ್ಯು

ಹಾಸನ: ಇಬ್ಬರು ಸಹೋದರರು ಕುರಿಯನ್ನು ತೊಳೆಯುವುದಕ್ಕಾಗಿ ಕೆರೆಗೆ ಇಳಿದಿದ್ದು, ಮುಳುಗಿ ಸಾವನ್ನಪ್ಪಿದ ಘಟನೆ ಅರಸೀಕೆರೆಯ ಜಾವಗಲ್‌ನಲ್ಲಿ ನಡೆದಿದೆ. ಮೃತ ಬಾಲಕರನ್ನು ಯಾಸಿನ್(13) ಮತ್ತು ಇಮ್ರಾನ್(15) ಎಂದು ಗುರುತಿಸಲಾಗಿದೆ. ಎಂಟು ಮತ್ತು ಹತ್ತನೇ ತರಗತಿಯಲ್ಲಿ ಈ ಇಬ್ಬರು ಬಾಲಕರು ಕಲಿಯುತ್ತಿದ್ದರು. ಬೇಸಿಗೆ ರಜೆಯಾದ್ದರಿಂದ ಇವರಿಬ್ಬರೂ ತಮ್ಮ ಕುರಿಗಳನ್ನು ತೊಳೆಯಲು ಜಾವಗಲ್ ದೊಡ್ಡಕೆರೆಗೆ ತೆರಳಿದ್ದರು. ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ಆಳವಾದ ಭಾಗಕ್ಕೆ ಬಿದ್ದು ಮೃತ ಪಟ್ಟಿದ್ದಾರೆ. ಒಬ್ಬರನ್ನೊಬ್ಬರು ರಕ್ಷಿಸುವ ಪ್ರಯತ್ನ ಮಾಡಿದ ಅವರು ಕೊನೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿದೆ.

ಕುರಿ ತೊಳೆಯಲು ಹೋದ ಸಹೋದರರು ಕೆರೆಗೆ ಬಿದ್ದು ಮೃತ್ಯು Read More »

error: Content is protected !!
Scroll to Top