ದೇಶ

ಲಸಿಕೆ ಭಯ: ರೇಬಿಸ್‌ಗೆ ಬಲಿಯಾಯ್ತ ಮುಗ್ಧ ಮಗುವಿನ ಜೀವ

ಮುಂಬೈ: ಚುಚ್ಚುಮದ್ದಿನ ಭಯಕ್ಕೆ ರೇಬಿಸ್ ಲಸಿಕೆಯನ್ನು ಪಡೆಯದೇ 9 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮಹಾರಾಷ್ಟ್ರದ ಮುಂಬೈ‌ನಲ್ಲಿ ನಡೆದಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಕಶಿಷ್ ಸಹಾನಿ ಎಂಬ ಬಾಲಕಿಯೇ ‌ಮೃತ ದುರ್ದೈವಿ. ಕಶಿಷ್ ಸುಮಾರು ಆರು ತಿಂಗಳ ಹಿಂದೆ ತನ್ನ ತಾತನ ಜೊತೆ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಯೊಂದು ಆಕೆಯನ್ನು ಪರಚಿತ್ತು. ತಕ್ಷಣವೇ ಮನೆಯವರು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಇಂಜೆಕ್ಷನ್ ಭಯ ಹೊಂದಿದ್ದ ಅವಳು ಲಸಿಕೆ ಪಡೆಯದಿರಲು ಹಠ ಮಾಡಿದ್ದಳು. ಗಾಯ ಚಿಕ್ಕದಾಗಿದ್ದು, […]

ಲಸಿಕೆ ಭಯ: ರೇಬಿಸ್‌ಗೆ ಬಲಿಯಾಯ್ತ ಮುಗ್ಧ ಮಗುವಿನ ಜೀವ Read More »

ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ಇಲ್ಲ : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಯಾವುದೇ ಧರ್ಮಕ್ಕೆ ಮತಾಂತರವಾದರೂ ಎಸ್‌ಸಿ ಸ್ಥಾನಮಾನ ನಷ್ಟ ನವದೆಹಲಿ: ಬೇರೆ ಧರ್ಮಕ್ಕೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿಯ (ಎಸ್‌ಸಿ) ಸ್ಥಾನಮಾನ ಅನ್ವಯವಾಗುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿದೆ. ಹಿಂದೂ, ಸಿಖ್‌ ಅಥವಾ ಬೌದ್ಧ ಧರ್ಮದವರು ಎಸ್‌ಸಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಆದರೆ ಕ್ರೈಸ್ತ ಸೇರಿದಂತೆ ಬೇರೆ ಯಾವುದೇ ಧರ್ಮಕ್ಕೆ ಮತಾಂತರವಾದರೆ ಅವರು ಎಸ್‌ಸಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಭಾರಿ ಮಹತ್ವದ ತೀರ್ಪಿನಲ್ಲಿ ಹೇಳಲಾಗಿದೆ. ನ್ಯಾ. ಪಿ.ಕೆ.ಮಿಶ್ರಾ ಮತ್ತು ನ್ಯಾ.ಎನ್‌.ವಿ.ಅಂಜಾರಿಯ ಅವರನ್ನೊಳಗೊಂಡ ನ್ಯಾಯಪೀಠ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ

ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ಇಲ್ಲ : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು Read More »

ಹರ್ಮುಜ್ ಜಲಸಂಧಿಯು ಈಗ ಹಡಗುಗಳ ಸಂಚಾರಕ್ಕೆ ಮುಕ್ತ ಎಂದ ಇರಾನ್

ನವದೆಹಲಿ: ಇರಾನಿನ ಶತ್ರು ರಾಷ್ಟ್ರಗಳನ್ನು ಹೊರತು ಪಡಿಸಿ, ಇತರ ರಾಷ್ಟ್ರಗಳಿಗೆ ಹರ್ಮುಜ್ ಜಲಸಂಧಿಯಲ್ಲಿ ಮುಕ್ತವಾಗಿ ಸಂಚರಿಸಲು ಇರಾನ್ ಅವಕಾಶ ನೀಡಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಈ ವಿಷಯಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಂತಹ ಒಂದು ನಿರ್ಣಯಕ್ಕೆ ಇರಾನ್ ಬಂದಿದೆ. ಇರಾನಿನ ಶತ್ರು ರಾಷ್ಟ್ರಗಳ ಹಡಗುಗಳನ್ನು ಹೊರತುಪಡಿಸಿದಂತೆ ಇತರ ರಾಷ್ಟ್ರಗಳ ಹಡಗುಗಳಿಗೆ ಹರ್ಮುಜ್ ಜಲಸಂಧಿ ಮುಕ್ತವಾಗಿದೆ. ಮುಂದಿನ ನಲವತ್ತೆಂಟು ಗಂಟೆಗಳ ಒಳಗಾಗಿ ಹರ್ಮುಜ್ ಹಡಗುಗಳ ಸಂಚಾರಕ್ಕೆ ಮುಕ್ತವಾಗದೇ ಹೋದಲ್ಲಿ ಇರಾನಿನ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಸ್ಪೋಟ ಮಾಡುವ ಬೆದರಿಕೆಯನ್ನು

ಹರ್ಮುಜ್ ಜಲಸಂಧಿಯು ಈಗ ಹಡಗುಗಳ ಸಂಚಾರಕ್ಕೆ ಮುಕ್ತ ಎಂದ ಇರಾನ್ Read More »

ಮಂಗಳೂರಿಗೆ ಆಗಮಿಸಿದ 86 ಸಾವಿರ ಮೆಟ್ರಿಕ್‌ ಟನ್‌ ತೈಲ ತುಂಬಿರುವ ಹಡಗು

ಚೀನಾಕ್ಕೆಂದು ಹೊರಟಿದ್ದ ಬೃಹತ್‌ ತೈಲ ಟ್ಯಾಂಕರ್‌ ಭಾರತಕ್ಕೆ ಯು ಟರ್ನ್‌ ಮಂಗಳೂರು: ಚೀನಾಕ್ಕೆ ಹೊರಟಿದ್ದ ರಷ್ಯಾದ ತೈಲ ತುಂಬಿದ ಟ್ಯಾಂಕರ್ ಹಡಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮಹತ್ವದ ಬೆಳವಣಿಗೆಯಿಂದ ಯುಟರ್ನ್ ಹೊಡೆದು ಶನಿವಾರ ಮಂಗಳೂರಿಗೆ ಆಗಮಿಸಿದೆ. ರಷ್ಯಾದ ಅಕ್ವಾ ಟೈಟಾನ್‌ ಹಡಗು ಸುಮಾರು 86 ಸಾವಿರ ಮೆಟ್ರಿಕ್ ಟನ್ ತೈಲ ಹೊತ್ತು ಮಂಗಳೂರಿಗೆ ಆಗಮಿಸಿದೆ. ಚೀನಾಕ್ಕೆ ಹೊರಟ ಈ ಹಡಗಿಗೆ ಜನವರಿಯಲ್ಲಿ ತೈಲ ತುಂಬಲಾಗಿದ್ದು, ಮಾರ್ಚ್ ಮಧ್ಯದಲ್ಲಿ ಆಗ್ನೇಯ ಏಷ್ಯಾದಲ್ಲಿ ಸಂಚರಿಸುತ್ತಿತ್ತು. ಈ ಸಂದರ್ಭ ಚೀನಾದ ರಿಝಾವೊ

ಮಂಗಳೂರಿಗೆ ಆಗಮಿಸಿದ 86 ಸಾವಿರ ಮೆಟ್ರಿಕ್‌ ಟನ್‌ ತೈಲ ತುಂಬಿರುವ ಹಡಗು Read More »

ದೇಶದಲ್ಲಿ ಡಿಜಿಟಲ್ ಅರೆಸ್ಟ್ ‌ವಂಚನೆ ತಡೆಯಲು ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ವಂಚನೆಗೆ ಬಳಕೆ ಮಾಡುವ ಮೊಬೈಲ್ ಡಿವೈಸ್ ಐಡಿ‌ಗಳನ್ನು ‌ಶಾಶ್ವತವಾಗಿ ಬ್ಲಾಕ್ ಮಾಡುವಂತೆ ವಾಟ್ಸಾಪ್ ‌ಸಂಸ್ಥೆಗೆ ಸೂಚನೆ ನೀಡಲಾಗಿದೆ. ವಂಚಕರು ಬಳಸುವ ಸಾಧನವನ್ನು ಗುರುತಿಸಿದ ತಕ್ಷಣ ಅದರ ಡಿವೈಸ್ ಐಡಿಯನ್ನು ನಿರ್ಬಂಧಿಸುವುದರಿಂದ, ಅದೇ ಫೋನ್ ಮೂಲಕ ಮತ್ತೆ ಖಾತೆ ತೆರೆಯುವ ಅವಕಾಶ ಕಡಿಮೆಯಾಗಲಿದೆ. ಜೊತೆಗೆ, ಅಳಿಸಲಾದ ಖಾತೆಗಳ ಮಾಹಿತಿಯನ್ನು ಕನಿಷ್ಠ 180 ದಿನಗಳವರೆಗೆ ಉಳಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ,

ದೇಶದಲ್ಲಿ ಡಿಜಿಟಲ್ ಅರೆಸ್ಟ್ ‌ವಂಚನೆ ತಡೆಯಲು ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ Read More »

ಡಾ. ರಾಜ್ ನಟನೆಯ ಚಿತ್ರದ ಹಾಡಿನ ಲಿಂಕ್ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಪ್ರಸಿದ್ಧ ಚಲನಚಿತ್ರ ನಟ, ಕರುನಾಡ ಅಣ್ಣಾವ್ರು ವರನಟ ಡಾ‌. ರಾಜ್‌ಕುಮಾರ್ ಅವರ ಅಭಿಮಾನಿಗಳ ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ಮೂಡಿಸಿದ್ದಾರೆ. ಪ್ರಧಾನಿ ಮೋದಿ ಅವರು ರಾಜ್‌ಕುಮಾರ್ ಅವರ ಹಾಡೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ರಾಜ್ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ. ರಾಜ್‌ಕುಮಾರ್ ಅಭಿನಯದ ಶ್ರೀ ಕೃಷ್ಣದೇವರಾಯ ಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿರುವ ಅವರು ‘ದೇವಿಯ ಮೇಲಿನ ನಂಬಿಕೆ ಭಕ್ತರಿಗೆ ಹೊಸ ಶಕ್ತಿ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಡಾ. ರಾಜ್ ನಟನೆಯ ಚಿತ್ರದ ಹಾಡಿನ ಲಿಂಕ್ ಹಂಚಿಕೊಂಡ ಪ್ರಧಾನಿ ಮೋದಿ Read More »

ವರ್ಕ್‌ ಫ್ರಂ ಹೋಂ, ವಾಹನಗಳ ವೇಗಕ್ಕೆ ಕಡಿವಾಣ : ಇಂಧನ ಉಳಿಸಲು ಸಲಹೆ

ಜಾಗತಿಕ ಇಂಧನ ಕೊರತೆ ಹಿನ್ನೆಲೆಯಲ್ಲಿ ಐಇಎಯಿಂದ ದೇಶಗಳಿಗೆ ಸಲಹೆ ನವದೆಹಲಿ : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕವಾಗಿ ತೀವ್ರ ಇಂಧನ ಕೊರತೆ ತಲೆದೋರಿರುವ ಹಿನ್ನೆಲೆಯಲ್ಲಿ ಇಂಧನ ಬಳಕೆ ಮೇಲೆ ಮಿತಿ ಹೇರಲು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಕೆಲವೊಂದು ಸಲಹೆಗಳನ್ನು ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೋವಿಡ್ ಸಂದರ್ಭದ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿದರೆ ಇಂಧನ ಬಳಕೆಯಲ್ಲಿ ಮಿಯವ್ಯಯ ಸಾಧಿಸಬಹುದು ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಶಿಫಾರಸು ಮಾಡಿದೆ. ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಬಿಕ್ಕಟ್ಟಿನ

ವರ್ಕ್‌ ಫ್ರಂ ಹೋಂ, ವಾಹನಗಳ ವೇಗಕ್ಕೆ ಕಡಿವಾಣ : ಇಂಧನ ಉಳಿಸಲು ಸಲಹೆ Read More »

ಬಿಸಿಸಿಯಲ್ಲೂ ಇದೆ ವರ್ಣಭೇದ ನೀತಿ : ಶಿವರಾಮಕೃಷ್ಣನ್‌ ಆರೋಪ

ಕಾಮೆಂಟರಿ ಪ್ಯಾನೆಲ್‌ಗೆ ನಿವೃತ್ತಿ ಘೋಷಿಸಿದ ಮಾಜಿ ಕ್ರಿಕೆಟಿಗ ನವದೆಹಲಿ: ಬಿಸಿಸಿಐಯಲ್ಲೂ ವರ್ಣಭೇದ ನೀತಿ ಇದೆ ಎಂದು ಆರೋಪಿಸಿ ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಶುಕ್ರವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾಮೆಂಟರಿ ಪ್ಯಾನೆಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಶಿವರಾಮಕೃಷ್ಣನ್ ತಮ್ಮ ನಿರ್ಧಾರದ ಹಿಂದೆ ಅವಕಾಶಗಳ ಕೊರತೆಯನ್ನು ಉಲ್ಲೇಖಿಸಿ ಬಿಸಿಸಿಐ ಮೇಲೆ ವರ್ಣಭೇದ ಆರೋಪ ಮಾಡಿದ್ದಾರೆ. ಪಂದ್ಯದ ವೇಳೆ ಟಾಸ್ ಪ್ರಕ್ರಿಯೆ ಅಥವಾ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ನನಗೆ ಅವಕಾಶ ನೀಡುತ್ತಿರಲಿಲ್ಲ. ಇದರ ಹಿಂದೆ

ಬಿಸಿಸಿಯಲ್ಲೂ ಇದೆ ವರ್ಣಭೇದ ನೀತಿ : ಶಿವರಾಮಕೃಷ್ಣನ್‌ ಆರೋಪ Read More »

ಜಗತ್ತಿಗೆ ಸಂಘರ್ಷವಲ್ಲ ಸಾಮರಸ್ಯ ಬೇಕು: ಡಾ‌ ಮೋಹನ್ ಭಾಗವತ್

ನಾಗಪುರ: ಜಾಗತಿಕ ಸಂಘರ್ಷಗಳಿಗೆ ಮಾನವ ಸ್ವಾರ್ಥ ಹಿತಾಸಕ್ತಿ, ಪರರ ಮೇಲೆ ಹಿಡಿತ ಸಾಧಿಸಲು ಬಯಸುವ ಆಸೆಯೇ ಪ್ರಮುಖ ಕಾರಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಏಕತೆ, ಧರ್ಮದ ಪಾಲನೆ ಮತ್ತು ಶಿಸ್ತು ಇದ್ದಲ್ಲಿ ಮಾತ್ರ ಶಾಂತಿ ನೆಲೆಸಬಹುದು. ಕಳೆದ 2,000 ವರ್ಷಗಳಿಂದ ಜಗತ್ತು ಸಂಘರ್ಷಗಳನ್ನು ಪರಿಹರಿಸಲು ಹತ್ತು ಹಲವು ಸಿದ್ಧಾಂತಗಳ ಪ್ರಯೋಗ ನಡೆಸಿದೆ. ಆದರೆ, ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರ ಹಾಗೂ ಮೇಲು-ಕೀಳು ಎಂಬ ಭಾವನೆಗಳು ಇನ್ನೂ ಜೀವಂತವಾಗಿವೆ.

ಜಗತ್ತಿಗೆ ಸಂಘರ್ಷವಲ್ಲ ಸಾಮರಸ್ಯ ಬೇಕು: ಡಾ‌ ಮೋಹನ್ ಭಾಗವತ್ Read More »

ಕೇರಳದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಿದ್ದ ಆರೋಪಿ ಅಂದರ್

ಕೊಚ್ಚಿ: ವಂದೇ ಭಾರತ್ ರೈಲಿಗೆ ‌ಕೇರಳ ಅಲುವಾ ಎಂಬಲ್ಲಿ ಕಲ್ಲು ತೂರಿದ್ದ ಯುವಕನನ್ನು ರೈಲ್ವೆ ಸಂರಕ್ಷಣಾ ದಳ ವಶಕ್ಕೆ ಪಡೆದಿದೆ. ಬಂಧಿತನನ್ನು ಪಾರಕ್ಕಡವು ನಿವಾಸಿ ಸುಜಿತ್ ಸುರೇಶ್(19) ಎಂದು ಗುರುತಿಸಲಾಗಿದೆ. ತಿರುವನಂತಪುರಂ ಮತ್ತು ಮಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲಿನ ಮೇಲೆ ಮಾ. 7 ರಂದು ಕಲ್ಲು ತೂರಿದ ಘಟನೆ ನಡೆದಿತ್ತು. ಇದರಿಂದ ರೈಲಿನ ಕಿಟಕಿ ಗಾಜುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿತ್ತು. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿ, ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರು

ಕೇರಳದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಿದ್ದ ಆರೋಪಿ ಅಂದರ್ Read More »

error: Content is protected !!
Scroll to Top