ದೇಶ

ಜೀವ ಭಯ: ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಕಳುಹಿಸಿಕೊಟ್ಟ ಪತಿ

ಲಕ್ನೋ: ಪ್ರಾಣ ಭಯಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಕಳುಹಿಸಿದ ಘಟನೆ ಉತ್ತರ ಪ್ರದೇಶದ ಬುಲಂಧ್‌ಶಹರ್‍‌ನಲ್ಲಿ ನಡೆದಿದೆ. ಕೂಲಿ ಕಾರ್ಮಿಕ ರಾಜ್‌ಕುಮಾರ್ ಎಂಬವರದ್ದು ಏಳು ವರ್ಷದ ದಾಂಪತ್ಯ. ಆರು ತಿಂಗಳ ಸಣ್ಣ ಮಗುವೂ ಅವರಿಗಿದೆ. ಈ ನಡುವೆ ಅವರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯ ಜೊತೆಗೆ ಸಂಬಂಧ ಶುರುವಾಗಿದೆ. ಪತಿ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದಾಗ ಪತ್ನಿ ಮತ್ತು ಆಕೆಯ ಪ್ರೇಮಿಯ ಆಕ್ಷೇಪಾರ್ಹ ಚಿತ್ರಗಳೂ ಕಂಡುಬಂದಿವೆ. ಜೊತೆಗೆ ಸಿಮೆಂಟ್, ನೀಲಿ ಡ್ರಮ್ ಎನ್ನುವ […]

ಜೀವ ಭಯ: ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಕಳುಹಿಸಿಕೊಟ್ಟ ಪತಿ Read More »

ಅಸಭ್ಯ ಹಾಡಿಗೆ ಕುಣಿದ ನಟಿ ನೋರಾ ಫತೇಹಿ ವಿರುದ್ಧ ಫತ್ವಾ

ಬಿರುಗಾಳಿ ಎಬ್ಬಿಸಿರುವ ಕೆಡಿ ಚಿತ್ರದ ಅಸಭ್ಯ ಹಾಡು ಲಖನೌ: ಕೆಡಿ ಸಿನಿಮಾದ ವಿವಾದಿತ `ಸರ್ಸೆ ಸೆರಗ ಸರ್ಸೆ’ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಬಾಲಿವುಡ್‌ ನಟಿ ನೋರಾ ಫತೇಹಿ ವಿರುದ್ಧ ಇಸ್ಲಾಂ ಧರ್ಮದ ಮುಖಂಡರು ಫತ್ವಾ ಹೊರಡಿಸಿದ್ದಾರೆ. ಉತ್ತರ ಪ್ರದೇಶದ ಆಲಿಗಢದ ಮುಸ್ಲಿಂ ದಾರುಲ್ ಇಫ್ತಾದಿಂದ ಮುಖಂಡರು `ಸರ್ಸೆ ಸೆರಗ ಸರ್ಸೆ’ ನೃತ್ಯ ಮಾಡಿದ್ದಕ್ಕೆ ನೋರಾ ಫತೇಹಿ ವಿರುದ್ಧ ಫತ್ವಾ ಜಾರಿ ಮಾಡಿದ್ದಾರೆ. ಈ ಹಾಡು ಆಕ್ಷೇಪಾರ್ಹವಾಗಿದ್ದು, ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವೆಂದು ಪರಿಗಣಿಸುವ ವಿಷಯಗಳನ್ನು ಹೊಂದಿದೆ. ಹೀಗಾಗಿ ಈ

ಅಸಭ್ಯ ಹಾಡಿಗೆ ಕುಣಿದ ನಟಿ ನೋರಾ ಫತೇಹಿ ವಿರುದ್ಧ ಫತ್ವಾ Read More »

ಯುಗಾದಿಗೆ ‌ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ನಮೋ

ನವದೆಹಲಿ: ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೂ ಶುಭಾಶಯಗಳನ್ನು ತಿಳಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಹೊಸ ವರ್ಷ, ವಸಂತ ಋತುವಿನ ಆಗಮನ ಪ್ರತಿಯೊಬ್ಬರ ಬದುಕಿನಲ್ಲಿಯೂ ಹೊಸ ಉತ್ಸಾಹ ಮತ್ತು ಅವಕಾಶಗಳನ್ನು ತರಲಿ ‌ಎಂದು ಹಾರೈಸಿದ್ದಾರೆ. ಪ್ರಕೃತಿಯಲ್ಲಿನ ಹಸಿರು, ಹೂವುಗಳ ಸುವಾಸನೆ, ಹಣ್ಣುಗಳ ಆಗಮನ ಹೊಸ ಶಕ್ತಿಯ ಸಂಕೇತ. ರೈತಾಪಿ ವರ್ಗ ಈ ಸಂದರ್ಭದಲ್ಲಿ ಹೊಸ ಕೃಷಿ ಚಟುವಟಿಕೆಗಳಿಗೆ ತೊಡಗಲು ಸಿದ್ಧತೆ ನಡೆಸುತ್ತಿರುವ ಬಗೆಗೂ ಆವರು ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಬದುಕಿನ ಸಿಹಿ –

ಯುಗಾದಿಗೆ ‌ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ನಮೋ Read More »

ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಬೆಂಕಿ ಅವಘಡ

ನವದೆಹಲಿ: ಕಟ್ಟಡವೊಂದರಲ್ಲಿ ಬೆಂಕಿ ಹತ್ತಿಕೊಂಡು ಒಂಬತ್ತು ಜನರು ಸಜೀವ ಸುಟ್ಟು ಹೋದ ಘಟನೆ ನೈಋತ್ಯ ದೆಹಲಿಯ ಪಾಲಂ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಅಪಾರ್ಟ್‌ಮೆಂಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ಏಕಾಏಕಿ ಈ ದುರಂತ ಸಂಭವಿಸಿರುವುದಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಸುಮಾರು 30 ಅಗ್ನಿಶಾಮಕ ವಾಹನಗಳು ಧಾವಿಸಿ ರಕ್ಷಣಾ ಕಾರ್ಯ ನಡೆಸಿವೆ. ಕಟ್ಟಡದ ಒಳಗೆ ಜನರು ಸಿಲುಕಿರುವ ಶಂಕೆಯೂ ವ್ಯಕ್ತವಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಬೆಂಕಿ ಅವಘಡ Read More »

ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸುವ ಶಕ್ತಿ ಭಾರತಕ್ಕಿದೆ: ಫಿನ್‌ಲ್ಯಾಂಡ್

ನವದೆಹಲಿ: ಇಸ್ರೇಲ್ – ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ ನಿಲ್ಲಿಸುವ ತಾಕತ್ತು ಭಾರತಕ್ಕೆ ಇದೆ. ಈ ಯುದ್ಧದಿಂದ ಇಡೀ ಜಗತ್ತು ಸಮಸ್ಯೆ ಎದುರಿಸುತ್ತಿದೆ. ಭಾರತ ಮಧ್ಯಸ್ಥಿಕೆ ವಹಿಸಿ‌ ಯುದ್ಧ ನಿಲ್ಲಿಸಲಿ ಎಂದು ಫಿನ್‌ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಂತಿ ಸಭೆ ನಡೆಸುವ ಮೂಲಕ ಯುದ್ಧ ನಿರತ ರಾಷ್ಟ್ರಗಳ ಬಿಕ್ಕಟ್ಟು ಶಮನಕ್ಕೆ ಭಾರತ ಪ್ರಯತ್ನ ಮಾಡಬೇಕು. ವಿಶ್ವಕ್ಕೆ ಈಗ ಯುದ್ಧ ವಿರಾಮದ ಅಗತ್ಯತೆ ಇದೆ. ಭಾರತ ಈ ಕಾರ್ಯಕ್ಕೆ ಭಾಗಿಯಾಗಬಹುದೇ ಎನ್ನುವ ಕುತೂಹಲವೂ ಇದೆ.

ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸುವ ಶಕ್ತಿ ಭಾರತಕ್ಕಿದೆ: ಫಿನ್‌ಲ್ಯಾಂಡ್ Read More »

ಇಂದು ರಾಜ್ಯಸಭೆಗೆ ಚುನಾವಣೆ : 10 ರಾಜ್ಯಗಳಿಂದ 37 ಸ್ಥಾನಗಳು

ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಬಲ ಹೆಚ್ಚಳ ನಿರೀಕ್ಷೆ ನವದೆಹಲಿ : 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಈ ಪೈಕಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ. ಉಳಿದ 11 ಅಭ್ಯರ್ಥಿಗಳ ಆಯ್ಕೆಯು ಮತದಾನದ ಮೂಲಕ ನಿರ್ಧಾರ ಆಗಲಿದೆ. ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಆಗಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. ಮಹಾರಾಷ್ಟ್ರ 7, ತಮಿಳುನಾಡು 6, ಪಶ್ಚಿಮ ಬಂಗಾಳ 5,

ಇಂದು ರಾಜ್ಯಸಭೆಗೆ ಚುನಾವಣೆ : 10 ರಾಜ್ಯಗಳಿಂದ 37 ಸ್ಥಾನಗಳು Read More »

ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ : 10 ರೋಗಿಗಳು ಸಾವು

ಐಸಿಯುನಲ್ಲಿದ್ದ ರೋಗಿಗಳು ಉಸಿರುಕಟ್ಟಿ ಒದ್ದಾಡಿ ಸಾವು ಕಟಕ್ : ಒಡಿಶಾದ ಕಟಕ್ ನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡಕ್ಕೆ 10 ರೋಗಿಗಳು ಬಲಿಯಾಗಿದ್ದಾರೆ. 11ಕ್ಕೂ ಹೆಚ್ಚು ಆಸ್ಪತ್ರೆ ಸಿಬ್ಬಂದಿಗೆ ಗಾಯಗಳಾಗಿವೆ. ಎಸ್​ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಮಧ್ಯರಾತ್ರಿಯ ನಂತರ 2.30ರಿಂದ 3 ಗಂಟೆಯ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ. ಆಸ್ಪತ್ರೆಯ ಟ್ರಾಮಾ ಕೇರ್ ವಿಭಾಗದ ಐಸಿಯುನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಗಂಭೀರವಾಗಿ ಗಾಯಗೊಂಡಿರುವ ರೋಗಿಗಳು ಈ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ

ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ : 10 ರೋಗಿಗಳು ಸಾವು Read More »

ಇಂದು ಪಂಚ ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

ಸಂಜೆ ವೇಳಾಪಟ್ಟಿ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿರುವ ಚುನಾವಣಾ ಆಯೋಗ ನವದೆಹಲಿ : ಭಾರತ ಚುನಾವಣಾ ಆಯೋಗ ಇಂದು ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ. ಚುನಾವಣಾ ಆಯೋಗ ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದೆ. ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಮೇ ತಿಂಗಳ ಆರಂಭದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಏಕೆಂದರೆ ಆ ವೇಳೆಗೆ ಹಲವಾರು ರಾಜ್ಯಗಳ ವಿಧಾನಸಭೆಗಳ ಅವಧಿ ಮುಕ್ತಾಯಗೊಳ್ಳಲಿದೆ. ಚುನಾವಣಾ ಸಿದ್ಧತೆಯನ್ನು

ಇಂದು ಪಂಚ ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ Read More »

ಭಾರತ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದೆ ಕಾಂಗ್ರೆಸ್ : ಪ್ರಧಾನಿ ಮೋದಿ

ಅಸ್ಸಾಂ: ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧಕ್ಕೆ ಸಂಬಂಧಿಸಿದಂತೆ ಒಂದು ಹಳೆಯ ಪಕ್ಷ ಭಾರತೀಯರಲ್ಲಿ ಆತಂಕ ಸೃಷ್ಟಿ ಮಾಡಲು ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ನಮ್ಮ ಸರ್ಕಾರ ಈ ಸಂಘರ್ಷದ ಪರಿಣಾಮ ನಮ್ಮ ನಾಗರಿಕರ ಮೇಲೆ ಕಡಿಮೆಯಾಗುವಂತೆ ಮಾಡಲು ಪ್ರಯತ್ನವನ್ನು ಮಾಡುತ್ತಿದೆ. ಹಲವು ಜಾಗತಿಕ ಶಕ್ತಿಗಳಿಗೆ ಭಾರತದ ತ್ವರಿತ ಅಭಿವೃದ್ಧಿಯನ್ನು ಜೀರ್ಣ ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಅಂತಹ ಶಕ್ತಿಗಳ ಕೈಯಲ್ಲಿ ಕಾಂಗ್ರೆಸ್ ಕೈಗೊಂಬೆಯಂತಾಗಿದೆ. ದೇಶದ ಹಿತಾಸಕ್ತಿಯ ವಿಷಯದಲ್ಲಿ ಕಾಂಗ್ರೆಸ್ ಮತ್ತೆ ವಿಫಲವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಭಾರತ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದೆ ಕಾಂಗ್ರೆಸ್ : ಪ್ರಧಾನಿ ಮೋದಿ Read More »

ಹಾರ್ಮುಜ್‌ ಜಲಸಂಧಿ ದಾಟಿದ ಎಲ್‌ಪಿಜಿ ತುಂಬಿರುವ ಎರಡು ಭಾರತೀಯ ಹಡಗುಗಳು

ದೇಶದಲ್ಲಿ ಗ್ಯಾಸ್‌ ಟ್ರಬಲ್‌ ತುಸು ಕಡಿಮೆಯಾಗುವ ಸಾಧ್ಯತೆ ನವದೆಹಲಿ: ಮದ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರಿದಿರುವಂತೆಯೇ ಭಾರತೀಯ ನೌಕಾ ಪಡೆಯ ಬೆಂಗಾವಲಿನೊಂದಿಗೆ 40,000 ಮೆಟ್ರಿಕ್ ಟನ್‌ಗೂ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (LPG) ಹೊತ್ತ ಭಾರತದ ಶಿವಾಲಿಕ್ ಹಡಗು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಇರಾನ್‌ ಬಂದ್‌ ಮಾಡಿರುವ ಹಾರ್ಮುಜ್ ಜಲಸಂಧಿಯಲ್ಲಿ ನೌಕಾಪಡೆಯ ಬೆಂಗಾವಲಿನಲ್ಲಿ ಶಿವಾಲಿಕ್‌ ಸಂಚರಿಸಿ ನಂತರ ಮುಕ್ತ ಸಮುದ್ರಕ್ಕೆ ಯಶಸ್ವಿಯಾಗಿ ಸಾಗಿದೆ ಎಂದು ವರದಿಯಾಗಿದೆ. ಈ ಹಡಗು ಎರಡು ದಿನಗಳ ಒಳಗಡೆ ಮುಂಬೈ ಅಥವಾ ಕಾಂಡ್ಲಾ

ಹಾರ್ಮುಜ್‌ ಜಲಸಂಧಿ ದಾಟಿದ ಎಲ್‌ಪಿಜಿ ತುಂಬಿರುವ ಎರಡು ಭಾರತೀಯ ಹಡಗುಗಳು Read More »

error: Content is protected !!
Scroll to Top