ಅಪರಾಧ

ಹಡಗಿನಲ್ಲಿ ತಂದ 1,150 ಕೋ. ರೂ. ಮೌಲ್ಯದ ಕೊಕೇನ್‌ ಡ್ರಗ್ಸ್‌ ವಶ : ಮೂವರ ಬಂಧನ

ಸಮುದ್ರ ಮಧ್ಯೆ ಲಂಗರು ಹಾಕಿ ಮಾದಕ ವಸ್ತು ವಿಲೇವಾರಿ ಮಾಡುತ್ತಿದ್ದಾಗ ಕಾರ್ಯಾಚರಣೆ ಅಹಮದಾಬಾದ್: ಗುಜರಾತ್‌ನ ಮುದ್ರಾ ಕರಾವಳಿ ತೀರದಲ್ಲಿ ಭಾರತೀಯ ತಟರಕ್ಷಕ ಪಡೆ (ಐಸಿಜಿ) ಮತ್ತು ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ, ಸರಕು ಸಾಗಣೆ ಹಡಗೊಂದರಿಂದ ಸುಮಾರು 1,150 ಕೋಟಿ ರೂಪಾಯಿ ಮೌಲ್ಯದ 115 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಸಮುದ್ರ ಮಾರ್ಗದ ಮೂಲಕ ಮಾದಕ ದ್ರವ್ಯ ಸಾಗಾಟವಾಗುತ್ತಿರುವ ಬಗ್ಗೆ ಗುಜರಾತ್ ಎಟಿಎಸ್ ನೀಡಿದ ನಿಖರವಾದ ಗುಪ್ತಚರ ಮಾಹಿತಿ ಆಧಾರದ ಮೇಲೆ, ಮೇ […]

ಹಡಗಿನಲ್ಲಿ ತಂದ 1,150 ಕೋ. ರೂ. ಮೌಲ್ಯದ ಕೊಕೇನ್‌ ಡ್ರಗ್ಸ್‌ ವಶ : ಮೂವರ ಬಂಧನ Read More »

ಬೈಕ್ ಕಳ್ಳತನ ಮಾಡಿದ ಮೊಹಮ್ಮದ್ ರಾಜಿಕ್, ಉಬೈದತ್ ಹೈದರ್ ಬಂಧನ

ಮಂಗಳೂರು: ಬೈಕ್ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಿ ಅವರಿಂದ ಬೈಕ್ ಮತ್ತು 2 ಮೊಬೈಲ್ ಫೋನ್‌ಗಳನ್ನು ಮುಲ್ಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಸುರತ್ಕಲ್‌ನ ಮೊಹಮ್ಮದ್ ರಾಜಿಕ್ ಮತ್ತು ಬೈಕಂಪಾಡಿಯ ಉಬೈದತ್ ಹೈದರ್ ಎಂದು ಗುರುತಿಸಲಾಗಿದೆ. ಮೇ 18 ರಂದು ಮಪಲ್ಕಿಯ ಅಪೋಲೋ ಫಾರ್ಮ್ ಬಳಿ ನಿಲ್ಲಿಸಿದ್ದ ಹೋಂಡಾ ಯೂನಿಕಾರ್ನ್ ಬೈಕನ್ನು ಆರೋಪಿಗಳು ಅಪಹರಿಸಿದ್ದರು. ಸದ್ಯ ಆಕೋಪಿಗಳನ್ನು ಬಂಧಿಸಿ, ಅವರಿಂದ ಬೈಕ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೈಕ್ ಕಳ್ಳತನ ಮಾಡಿದ ಮೊಹಮ್ಮದ್ ರಾಜಿಕ್, ಉಬೈದತ್ ಹೈದರ್ ಬಂಧನ Read More »

ಬಕ್ರೀದ್‌ಗಾಗಿ ಶೆಡ್‌ನಲ್ಲಿ ಕೂಡಿ ಹಾಕಿದ್ದ 80 ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿದ ತುಮಕೂರು ಪೊಲೀಸರು

ತುಮಕೂರು: ಬಕ್ರೀದ್ ಹಿನ್ನೆಲೆ ವಧಿಸಲು ಶೆಡ್ ಒಂದರಲ್ಲಿ ಕೂಡಿ ಹಾಕಲಾಗಿದ್ದ ಸುಮಾರು 80 ಕ್ಕೂ ಅಧಿಕ ಹಸುಗಳನ್ನು ತುಮಕೂರು ಜಿಲ್ಲಾ ಪೊಲೀಸರು ರಕ್ಷಣೆ ಮಾಡಿದ ಘಟನೆ ರಾಜೀವ ಗಾಂಧಿ ನಗರದಲ್ಲಿ ನಡೆದಿದೆ. ಹಸುಗಳನ್ನು ಕೂಡಿ ಹಾಕಲಾಗಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ತುಮಕೂರು ವಿಭಾಗದ 60 ಕ್ಕೂ ಅಧಿಕ ಪೊಲೀಸರು ಶೆಡ್‌ಗೆ ದಾಳಿ ನಡೆಸಿದ್ದು, 80 ಕ್ಕೂ ಹೆಚ್ಚು ಹಸುಗಳನ್ನು ರಕಿಷೊಮೆ ಮಾಡಿ ಗುಬ್ಬಿ ತಾಲೂಕಿನ ಗೋ ಶಾಲೆಗೆ ರವಾನೆ ಮಾಡಿದ್ದಾರೆ. ಮಹಮ್ಮದ್ ಇಕ್ಬಾಲ್ ಅನ್ಸಾರಿ ಎಂಬಾತನ

ಬಕ್ರೀದ್‌ಗಾಗಿ ಶೆಡ್‌ನಲ್ಲಿ ಕೂಡಿ ಹಾಕಿದ್ದ 80 ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿದ ತುಮಕೂರು ಪೊಲೀಸರು Read More »

ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಬ್ಬರು ಅಂದರ್

ಮಂಗಳೂರು: ನೈಟ್ ಬೀಟ್ ಡ್ಯೂಟಿಯಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಕೇರಳದ ಕಾಞಂಗಾಡ್‌ನಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ‌ಸಚಿನ್ ಕೆ. ಆರ್. ಮತ್ತು ಚಂದನ್ ಎಂದು ಗುರುತಿಸಲಾಗಿದೆ. ಆರೋಪಿ ಸಚಿನ್ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ನಿವಾಸಿಯಾಗಿದ್ದು, ಮಂಗಳೂರಿನ ಕುಂಟಿಕಾನದಲ್ಲಿರುವ PON PON Sweets ಫ್ಯಾಕ್ಟರಿಯಲ್ಲಿ ಚಾಲಕನಾಗಿದ್ದ. ಆರೋಪಿ ಚಂದನ್ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿಯಾಗಿದ್ದು, ಕೂಳೂರಿನ ಅದ್ವತ್ ಕಿಯಾ ಶೋರೂಮ್‌ನಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದ

ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಬ್ಬರು ಅಂದರ್ Read More »

ಸ್ನಾಪ್ಚಾಟ್ ಪರಿಚಯದಲ್ಲಿ ಮದುವೆ: ಎರಡೇ ತಿಂಗಳಿಗೆ ಗಂಡನಿಗೆ ಬೇಡವಾದಳು ಹೆಂಡತಿ

ಬೆಂಗಳೂರು: ಸ್ನಾಪ್ಚಾಟ್‌ನಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿ ಒಂದು ವರ್ಷದ ಬಳಿಕ ಮದುವೆಯಾಗಿದ್ದ ಜೋಡಿಯ ಸಂಸಾರ ಸೂತ್ರ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮದುವೆಯಾದ ಎರಡೇ ತಿಂಗಳಿಗೆ ಪತಿ ಚೇತನ್ ಪತ್ನಿ ಬೇಡ ಎಂದು ತಿರಸ್ಕರಿಸಿದ್ದಾನೆ. ಸಂತ್ರಸ್ತ ಪತ್ನಿ ತನಗೆ ಗಂಡ ಬೇಕು ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ. ಚೇತನ್ ಮತ್ತು ನರ್ಸಿಂಗ್ ಕೆಲಸ ಮಾಡುತ್ತಿದ್ದ ಮಹಿಳೆ ನಡುವೆ ಸ್ನಾಪ್ಚಾಟ್‌ನಲ್ಲಿ ಪರಿಚಯವಾಗಿ, ಪ್ರೇಮವಾಗಿ ಬಳಿಕ ಮದುವೆಯೂ ಆಗಿದ್ದರು. ಮಹಿಳೆಗೆ ತಂದೆ -ತಾಯಿ ಇಬ್ಬರೂ ಇಲ್ಲ. ಆಕೆ ತನ್ನ

ಸ್ನಾಪ್ಚಾಟ್ ಪರಿಚಯದಲ್ಲಿ ಮದುವೆ: ಎರಡೇ ತಿಂಗಳಿಗೆ ಗಂಡನಿಗೆ ಬೇಡವಾದಳು ಹೆಂಡತಿ Read More »

ನಿಂದನೆ ಪ್ರಕರಣ : ಮಹೇಶ್‌ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು

ವಾರಕ್ಕೊಮ್ಮೆ ಪುತ್ತೂರು ಪೋಲೀಸ್ ಠಾಣೆಯಲ್ಲಿ ಸಹಿ ಹಾಕುವ ಷರತ್ತು ಬೆಳ್ತಂಗಡಿ: ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರ ತಾಯಿಯನ್ನು ನಿಂದಿಸಿದ ಪ್ರಕರಣದಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ದಿನೇಶ್ ಕೋಡಪದವು ಅವರ ತಾಯಿ ಲೀಲಾವತಿಯವರು ಸಲ್ಲಿಸಿದ್ದ ದೂರಿನ ಮೇಲಿನ ಬಂಧನದ ಭೀತಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ತಿಮರೋಡಿಯವರ ಮಾತಿನ ಬಗ್ಗೆ ಕಟುವಾದ ಟೀಕೆ ಮಾಡಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಡಾ.ವೀರೇಂದ್ರ ಹೆಗ್ಗಡೆಯವರ

ನಿಂದನೆ ಪ್ರಕರಣ : ಮಹೇಶ್‌ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು Read More »

ಬೈಜುಸ್ ಕಂಪನಿಯ ಸ್ಥಾಪಕ ಬೈಜು ರವೀಂದ್ರನ್‌ಗೆ ಜೈಲು ಶಿಕ್ಷೆ

ಹೂಡಿಕೆದಾರರ ಹಣ ದುರುಪಯೋಗಪಡಿಸಿಕೊಂಡ ಪ್ರಕರಣ ಸಿಂಗಾಪುರ: ಬೈಜುಸ್ ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ (QIA) ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್‌ (Qatar Holding LLC) ಒಪ್ಪಂದ ಉಲ್ಲಂಘನೆ ಮತ್ತು ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದೆ. ಆಸ್ತಿ ವಿವರಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 2024 ರಿಂದ ನ್ಯಾಯಾಲಯ ನೀಡಿದ್ದ ಹಲವು ಆದೇಶಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇವರಿಗೆ ಶಿಕ್ಷೆ ವಿಧಿಸಲಾಗಿದೆ. ರವೀಂದ್ರನ್ ಅವರು ಯಾವುದೇ

ಬೈಜುಸ್ ಕಂಪನಿಯ ಸ್ಥಾಪಕ ಬೈಜು ರವೀಂದ್ರನ್‌ಗೆ ಜೈಲು ಶಿಕ್ಷೆ Read More »

ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮೇಲೆ ಇ.ಡಿ.ದಾಳಿ

ಮಾಜಿ ಸಿಎಂ ಮಗಳು, ಅಳಿಯನಿಗೂ ಇ.ಡಿ. ದಾಳಿಯ ಶಾಕ್‌ ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಅಧಿಕಾರದಿಂದ ನಿರ್ಗಮಿಸಿದ ಬೆನ್ನಿಗೆ ಇ.ಡಿ. ದಾಳಿಯ ಬಿಸಿ ತಟ್ಟಿದೆ. ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ (CMRL) ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ ಕೇರಳದಾದ್ಯಂತ 10 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸ ಹಾಗೂ

ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮೇಲೆ ಇ.ಡಿ.ದಾಳಿ Read More »

ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಎಸಗಿ ಆಭರಣ ದೋಚಿದ ಯುವಕರು

ಸೋಷಿಯಲ್‌ ಮೀಡಿಯಾ ಮೂಲಕ ಪರಿಚಯವಾದ ಯುವಕರಿಂದ ಯುವತಿಗೆ ಮೋಸ ಉಡುಪಿ: ಪ್ರೀತಿಸುವ ನಾಟಕವಾಡಿ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಮನೆಯಿಂದ ಲಕ್ಷಗಟ್ಟಲೆ ಬೆಲೆಬಾಳುವ ಆಭರಣಗಳನ್ನು ತರಿಸಿಕೊಂಡು ವಂಚಿಸಿದ ಇಬ್ಬರು ಪಾತಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ಸಮೀಪದ ತೆಕ್ಕಟ್ಟೆ ಕುಂಭಾಶಿಯ ಜಿತೇಂದ್ರ ಶೆಟ್ಟಿ (25) ಹಾಗೂ ಕುರ್ವಾಡಿಯ ಸುಶಾನ್‌ ಪೂಜಾರಿ ಬಂಧಿತ ಪಾತಕಿಗಳು. ಅವರ ವಿರುದ್ಧ ಪೋಕ್ಸೋ, ಜೇವ ಬೆದರಿಕೆ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಲ್ಪೆಯ ಕೊಡವೂರಿನ 17ರ ಹರೆಯದ

ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಎಸಗಿ ಆಭರಣ ದೋಚಿದ ಯುವಕರು Read More »

ಮರದ ಗೆಲ್ಲು ಕಡಿಯುವ ‌ವಿಷಯಕ್ಕೆ ಗಲಾಟೆ: ದೂರು ದಾಖಲು

ಬಂಟ್ವಾಳ: ಮರದ ಗೆಲ್ಲು ಕಡಿಯುವ ‌ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ದೂರು ದಾಖಲಾಗಿರುವ ಘಟನೆ ಸಮೀಪ ನಡು ಗ್ರಾಮದಲ್ಲಿ ನಡೆದಿದೆ. ಸುರೇಶ್ ರೈ ಎಂಬವರ ತಾಯಿಯ ಮನೆಗೆ ಸೋಮನಾಥ ಭಂಡಾರಿ ಎಂಬವರು ನೋಡಿಕೊಳ್ಳುತ್ತಿದ್ದ ಮರದ ಕೊಂಬೆ ತಾಗುತ್ತಿತ್ತು. ಇದನ್ನು ಕಡಿಯುವಂತೆ ಹಲವು ಬಾರಿ ಸೂಚಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಸುರೇಶ್ ಅವರೇ ಕಡಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸೋಮನಾಥ್ ಅವರು ಸ್ಥಳಕ್ಕೆ ಬಂದು ಸುರೇಶ್ ಅವರಿಗೆ ಕಲ್ಲು, ತೆಂಗಿನಕಾಯಿ‌ಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆ.ಹಾಗೆಯೇ ಮದ್ಯೆ

ಮರದ ಗೆಲ್ಲು ಕಡಿಯುವ ‌ವಿಷಯಕ್ಕೆ ಗಲಾಟೆ: ದೂರು ದಾಖಲು Read More »

error: Content is protected !!
Scroll to Top