ಸುದ್ದಿ

ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲೇ ಕಾಂಗ್ರೆಸ್‌ ಮುಖಂಡರಿಗೆ ಬಹಿಷ್ಕಾರ

ಸಿಎಂ ಕ್ಷೇತ್ರವಾದರೂ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಬ್ಯಾನರ್‌ ಹಾಕಿದ ಗ್ರಾಮಸ್ಥರು ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಧಾನಸಭೆ ಕ್ಷೇತ್ರವಾದ ವರುಣಾದಲ್ಲೇ ಜನರು ಕಾಂಗ್ರೆಸ್‌ ನಾಯಕರಿಗೆ ಬಹಿಷ್ಕಾರ ಹಾಕಿದ ಬೆಳವಣಿಗೆಯೊಂದು ನಿನ್ನೆ ನಡೆದಿದೆ. ವರುಣಾದ ನಗರ್ಲೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಗೆ ನಿಷೇಧ ಹೇರಲಾಗಿದೆ ಎಂಬ ಫ್ಲೆಕ್ಸ್‌ಗಳು ಅಲ್ಲಲ್ಲಿ ಕಾಣಿಸಿಕೊಂಡಿದ್ದವು. ಕ್ಷೇತ್ರಕ್ಕೆ ಯಾವುದೇ ಅನುದಾನ ಸಿಗದೆ, ಅಭಿವೃದ್ಧಿಯಾಗದಿರುವುದರಿಂದ ಬೇಸತ್ತ ಜನರು ಕಾಂಗ್ರೆಸ್‌ ಮೇಲೆ ಆಕ್ರೋಶಗೊಂಡು ಬ್ಯಾನರ್‌ಗಳನ್ನು ಹಾಕಿದ್ದರು. ಕಾಂಗ್ರೆಸ್ ಮುಖಂಡರಿಗೆ ನಮ್ಮ ಗ್ರಾಮದ ಒಳಗೆ ಪ್ರವೇಶವಿಲ್ಲ ಎಂದು ಬ್ಯಾನರ್‌ಗಳಲ್ಲಿ ಬರೆಯಲಾಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ […]

ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲೇ ಕಾಂಗ್ರೆಸ್‌ ಮುಖಂಡರಿಗೆ ಬಹಿಷ್ಕಾರ Read More »

ಮಂಗಳೂರು ದರೋಡೆ ಕೃತ್ಯ ಆರೋಪಿಗಳ ಬಂಧನಕ್ಕೆ ನೆರವಾದದ್ದು ಹಳೆ ಫಿಯೆಟ್‌ ಕಾರು

ನಾಲ್ಕೇ ದಿನದಲ್ಲಿ ಪ್ರಕರಣ ಭೇದಿಸಲು ನಡೆಸಿದ ತನಿಖೆ ಥ್ರಿಲ್ಲರ್‌ ಸಿನೆಮಾಗಿಂತಲೂ ರೋಚಕ ಮಂಗಳೂರು: ಉಳ್ಳಾಲ ಸಮೀಪದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖದೀಮರನ್ನು ಮಂಗಳೂರು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತಮಿಳುನಾಡಿನ ತಿರುವನ್ನೇಲಿಯಲ್ಲಿ ಮುರುಗಂಡಿ ಥೇವರ್‌, ಮನಿವೆಣ್ಣನ್ ಹಾಗೂ ಪ್ರಕಾಶ್​ ಅಲಿಯಾಸ್ ಜೋಶ್ವಾ ಎಂಬವರನ್ನು ಬಂಧಿಸಲಾಗಿದೆ. ಮುರುಗಂಡಿ ಥೇವರ್ ಈ ಪ್ರಕರಣದ ಮುಖ್ಯ ಕಿಂಗ್‌ಪಿನ್ ಎನ್ನಲಾಗಿದೆ.ಆದರೆ ಈ ದರೋಡೆ ಕೃತ್ಯದಲ್ಲಿ ಇನ್ನೂ ಏಳು ಮಂದಿ ಇದ್ದಾರೆ. ಈ ಪೈಕಿ ಮೂವರು ನೇರವಾಗಿ ದರೋಡೆ ಕೃತ್ಯದಲ್ಲಿ

ಮಂಗಳೂರು ದರೋಡೆ ಕೃತ್ಯ ಆರೋಪಿಗಳ ಬಂಧನಕ್ಕೆ ನೆರವಾದದ್ದು ಹಳೆ ಫಿಯೆಟ್‌ ಕಾರು Read More »

ಮಹಾಭಾರತ ಸರಣಿಯಲ್ಲಿ ಮಧ್ಯಮ ವ್ಯಾಯೋಗ  ತಾಳಮದ್ದಳೆ

ಉಪ್ಪಿನಂಗಡಿ  : ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ  50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ  ಶ್ರೀ ಮಹಾಭಾರತ ಸರಣಿಯಲ್ಲಿ 61ನೇ ಕಾರ್ಯಕ್ರಮವಾಗಿ ಶ್ರೇಣಿ ಡಾ.ಗೋಪಾಲಕೃಷ್ಣ ಭಟ್ ವಿರಚಿತ ಮಧ್ಯಮ ವ್ಯಾಯೋಗ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ ರಾವ್. ಬಿ, ಹರೀಶ ಆಚಾರ್ಯ ಬಾರ್ಯ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಅರ್ಥಧಾರಿಗಳಾಗಿ ಜಯರಾಮ ಬಲ್ಯ(ಭೀಮ), ಹರೀಶ ಆಚಾರ್ಯ ಬಾರ್ಯ (ಧರ್ಮರಾಯ ),  ಪೂರ್ಣಿಮ ರಾವ್

ಮಹಾಭಾರತ ಸರಣಿಯಲ್ಲಿ ಮಧ್ಯಮ ವ್ಯಾಯೋಗ  ತಾಳಮದ್ದಳೆ Read More »

ಗೋ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ | ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು : ನಾ. ಸೀತಾರಾಮ್

ಪುತ್ತೂರು : ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎನ್ನುವ ಒತ್ತಾಯ ಈಗಾಗಲೇ ಇದೆ. ಆದರೆ ಗೋವನ್ನು ` ರಾಷ್ಟ್ರೀಯ ಸಂಪತ್ತು’ ಎಂದು ಘೋಷಿಸುವಂತೆ ಆಗ್ರಹಿಸಬೇಕಾಗಿದೆ. ತಾಯಿ ಸಮಾನಾದ ಗೋವಿನ ಮೇಲೆ ಕ್ರೌರ್ಯ ,  ಮಾನಸಿಕತೆ ಪ್ರದರ್ಶಿಸುವವರು ಮನುಷ್ಯರೇ ಅಲ್ಲ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನಾ. ಸೀತಾರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗೋಮಾತೆಯ ಕೆಚ್ಚಲು ಕತ್ತರಿಸಿದ ವಿಕೃತ ಮನಸ್ಸುಗಳನ್ನು ಖಂಡಿಸಿ ಪುತ್ತೂರು ಜಿಲ್ಲಾ

ಗೋ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ | ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು : ನಾ. ಸೀತಾರಾಮ್ Read More »

ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಎಲ್ಲಾ 12 ಅಭ್ಯರ್ಥಿಗಳಿಗೆ ಗೆಲುವು

ಪುತ್ತೂರು : ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಎಲ್ಲಾ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತ ಚುಕ್ಕಾಣಿ ಸಹಕಾರ ಭಾರತಿ ಪಾಲಾಗಿದೆ. ಭಾನುವಾರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 4 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 8 ಸ್ಥಾನಗಳಿಗೆ ಚುನಾವಣೆ ನಡೆಯಿತು. ಗೆದ್ದ ಪ್ರಮುಖರು : ಸುಧಾಕರ ಶೆಟ್ಟಿ, ರಾಮ್‍ ಭಟ್‍ ನೀರಪಳಿಕೆ, ಚಂದ್ರಹಾಸ, ಹೃಷಿಕೇಶ್‍, ನವೀನ್‍ ಕೆ.ಪಿ., ಪದ್ಮಾವತಿ, ವಿದ್ಯಾ ವಿ., ಜಯಂತ

ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಎಲ್ಲಾ 12 ಅಭ್ಯರ್ಥಿಗಳಿಗೆ ಗೆಲುವು Read More »

ಜಿ.ಎಲ್..ಸಮೂಹ ಸಂಸ್ಥೆಗಳ ವತಿಯಿಂದ ವಿವಿಧ ಶಾಖಾ ಸಿಬ್ಬಂದಿಗಳಿಗೆ “ಜಿ.ಎಲ್‍. ಟ್ರೋಫಿ” ಓವರ್ ಆರ್ಮ್‍ ಕ್ರಿಕೆಟ್ ಪಂದ್ಯಾಟ

ಪುತ್ತೂರು :  ಜಿ.ಎಲ್‍.ಸಮೂಹ ಸಂಸ್ಥೆಗಳ ವತಿಯಿಂದ ಸಂಸ್ಥೆಯ ವಿವಿಧ ಶಾಖೆಯ ಸಿಬ್ಬಂದಿಗಳಿಗೆ ನಾಲ್ಕು ಓವರಿನ ಓವರ್ ಆರ್ಮ್ ಕ್ರಿಕೇಟ್‍ ಪಂದ್ಯಾಟ “ಜಿ.ಎಲ್‍.ಟ್ರೋಫಿ””ಪುತ್ತೂರಿನಲ್ಲಿ ನಡೆಯಿತು. ಪಂದ್ಯಾಟವನ್ನು ಜಿ.ಎಲ್‍. ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ್‍ ಆಚಾರ್ಯ ಹಾಗೂ ರಾಜೀ ಮಲರಾಮ್‍ ಆಚಾರ್ಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ಪ್ರದರ್ಶನ ಪಂದ್ಯಾಟ ನಡೆಯಿತು. ಈ ಸಂದರ್ಭದಲ್ಲಿ ಜಿ.ಎಲ್. ಸಮೂಹ ಸಂಸ್ಥೆಯ ಸುಧನ್ವ ಆಚಾರ್ಯ, ಅರುಂಧತಿ ಆಚಾರ್ಯ, ಶ್ರೀರಾಮ್‍ ಆಚಾರ್ಯ ಹಾಗೂ ಸಿಬ್ಬಂದಿಗಳು

ಜಿ.ಎಲ್..ಸಮೂಹ ಸಂಸ್ಥೆಗಳ ವತಿಯಿಂದ ವಿವಿಧ ಶಾಖಾ ಸಿಬ್ಬಂದಿಗಳಿಗೆ “ಜಿ.ಎಲ್‍. ಟ್ರೋಫಿ” ಓವರ್ ಆರ್ಮ್‍ ಕ್ರಿಕೆಟ್ ಪಂದ್ಯಾಟ Read More »

ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ಅರ್ಪಿಸುವ “ದಿವ್ಯದರ್ಶನ” ಪುಸ್ತಕ ಬಿಡುಗಡೆ | ಸಂವಿಧಾನದ ನಾಲ್ಕನೇ ಒಂದು ಭಾಗ ನ್ಯೂಸ್ ಪುತ್ತೂರು : ಸಂಜೀವ ಮಠಂದೂರು | ನ್ಯೂಸ್ ಪುತ್ತೂರು ಸಂಸ್ಥೆ ತತ್ವವನ್ನು ಆಧಾರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿದೆ : ಬಲರಾಮ್ ಆಚಾರ್ಯ | “ದಿವ್ಯದರ್ಶನ” ಶೀರ್ಷಿಕೆಯಡಿ ಪುತ್ತೂರು ತಾಲೂಕಿನ ದೇವಸ್ಥಾನ, ದೈವಸ್ಥಾನಗಳ ಚರಿತ್ರೆಯನ್ನು ಒಳಗೊಂಡ ಪುಸ್ತಕ ಬಿಡುಗಡೆಗೊಂಡಿದ್ದು ಅಭಿನಂದನೀಯ : ಸತ್ಯಶಂಕರ ಭಟ್ | ದಿವ್ಯ ದರ್ಶನ ಪುಸ್ತಕ ಪ್ರಪಂಚಾದಾದ್ಯಂತ ತಲುಪಬೇಕು : ಪ್ರದೀಪ್‍ ಆರ್. ಗೌಡ | ಸಮಾಜದಲ್ಲಿ   ಟೀಕೆಗಳು ಸಾಯ್ತವೆ, ಕೆಲಸ ಮಾತಾಡ್ತವೆ ಎಂಬಂತಾಗಬೇಕು : ರಾಜೇಂದ್ರ ಪ್ರಸಾದ್ ಶೆಟ್ಟಿ

ಪುತ್ತೂರು: ತಾಲೂಕಿನ ದೇವಸ್ಥಾನ ಹಾಗೂ ದೈವಸ್ಥಾನಗಳ ಚರಿತ್ರೆಯನ್ನೊಳಗೊಂಡ ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ಅರ್ಪಿಸುವ “ದಿವ್ಯದರ್ಶನ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ ಸಂಜೆ ಮರೀಲ್ ನಲ್ಲಿರುವ ದಿ ಪುತ್ತೂರು ಕ್ಲಬ್‍ ನಲ್ಲಿ ನಡೆಯಿತು. ಸಂವಿಧಾನದ ನಾಲ್ಕನೇ ಒಂದು ಭಾಗ ನ್ಯೂಸ್ ಪುತ್ತೂರು : ಸಂಜೀವ ಮಠಂದೂರುಮುಖ್ಯ ಅತಿಥಿಯಾಗಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಾವೆಲ್ಲಾ ಇದ್ದು, ಪ್ರಜೆಗಳೇ ಪ್ರಭುಗಳೆಂದು ಸಂವಿಧಾನ ಪೀಠಿಕೆಯಲ್ಲಿ ಉಲ್ಲೇಖವಾಗಿದೆ. ಸಂವಿಧಾನ ಇತ್ತೀಚಿನ ದಿನಗಳಲ್ಲಿ ಅಡಕವಾಗಿದೆ. ಜಗತ್ತಿನ

ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ಅರ್ಪಿಸುವ “ದಿವ್ಯದರ್ಶನ” ಪುಸ್ತಕ ಬಿಡುಗಡೆ | ಸಂವಿಧಾನದ ನಾಲ್ಕನೇ ಒಂದು ಭಾಗ ನ್ಯೂಸ್ ಪುತ್ತೂರು : ಸಂಜೀವ ಮಠಂದೂರು | ನ್ಯೂಸ್ ಪುತ್ತೂರು ಸಂಸ್ಥೆ ತತ್ವವನ್ನು ಆಧಾರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿದೆ : ಬಲರಾಮ್ ಆಚಾರ್ಯ | “ದಿವ್ಯದರ್ಶನ” ಶೀರ್ಷಿಕೆಯಡಿ ಪುತ್ತೂರು ತಾಲೂಕಿನ ದೇವಸ್ಥಾನ, ದೈವಸ್ಥಾನಗಳ ಚರಿತ್ರೆಯನ್ನು ಒಳಗೊಂಡ ಪುಸ್ತಕ ಬಿಡುಗಡೆಗೊಂಡಿದ್ದು ಅಭಿನಂದನೀಯ : ಸತ್ಯಶಂಕರ ಭಟ್ | ದಿವ್ಯ ದರ್ಶನ ಪುಸ್ತಕ ಪ್ರಪಂಚಾದಾದ್ಯಂತ ತಲುಪಬೇಕು : ಪ್ರದೀಪ್‍ ಆರ್. ಗೌಡ | ಸಮಾಜದಲ್ಲಿ   ಟೀಕೆಗಳು ಸಾಯ್ತವೆ, ಕೆಲಸ ಮಾತಾಡ್ತವೆ ಎಂಬಂತಾಗಬೇಕು : ರಾಜೇಂದ್ರ ಪ್ರಸಾದ್ ಶೆಟ್ಟಿ Read More »

ರಾಜ್ಯದಲ್ಲಿ ಇನ್ನೊಂದು ದರೋಡೆ : ಉದ್ಯಮಿಯ ಕಾರು, ಹಣ ಕಸಿದುಕೊಂಡು ಪರಾರಿ

ಇನ್ನೊವಾ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಮುಸುಕುಧಾರಿಗಳು ಮೈಸೂರು : ಉಳ್ಳಾಲ ತಾಲೂಕಿನ ಕೋಟೆಕಾರಿನ ಬ್ಯಾಂಕ್‌ ದರೋಡೆ ಮತ್ತು ಬೀದರ್‌ನಲ್ಲಿ ಇಬ್ಬರನ್ನು ಸಾಯಿಸಿ ಎಟಿಎಂಗೆ ತುಂಬಿಸುವ ಹಣ ದರೋಡೆ ಮಾಡಿದ ಕೃತ್ಯಗಳು ಮರೆಯುವ ಮುನ್ನವೇ ರಾಜ್ಯದಲ್ಲಿ ಇದೇ ಮಾದರಿಯ ಇನ್ನೊಂದ ದರೋಡೆ ನಡೆದಿದೆ. ಮೈಸೂರಿನಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರು ಸಮೇತ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಕೇರಳ ಮೂಲದ ಉದ್ಯಮಿ ಸೂಫಿ ಎಂಬವರಿಗೆ ಸೇರಿದ ಇನ್ನೊವಾ

ರಾಜ್ಯದಲ್ಲಿ ಇನ್ನೊಂದು ದರೋಡೆ : ಉದ್ಯಮಿಯ ಕಾರು, ಹಣ ಕಸಿದುಕೊಂಡು ಪರಾರಿ Read More »

ಉಸ್ತುವಾರಿ ಸುರ್ಜೆವಾಲಾ ವಿರುದ್ಧವೇ ಕಾಂಗ್ರೆಸ್‌ ನಾಯಕರ ಬಂಡಾಯ

ಪಕ್ಷಪಾತಿ ಧೋರಣೆ ಅನುಸರಿಸುತ್ತಿರುವ ಸುರ್ಜೆವಾಲಾ ಬೇಡ ಎಂದು ಹೈಕಮಾಂಡ್‌ಗೆ ಮನವಿ ಬೆಂಗಳೂರು: ಹೈಕಮಾಂಡ್‌ ಎಷ್ಟೇ ಮದ್ದರೆದರೂ ಕಾಂಗ್ರೆಸ್‌ನ ಬಂಡಾಯ ಶಮನವಾಗುತ್ತಿಲ್ಲ. ಈಗ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ನ ಕರ್ನಾಟಕ ಉಸ್ತುವಾರಿಯಾಗಿರುವ ರಣದೀಪ್‌ ಸುರ್ಜೆವಾಲಾ ವಿರುದ್ಧವೇ ಬಂಡಾಯ ಸಾರಿದ್ದಾರೆ. ಕೆಲವು ಸಚಿವರು ಸುರ್ಜೆವಾಲಾ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಹಕ್ತಪಡಿಸಿದ್ದು, ಅವರನ್ನು ವಾಪಸು ಕರೆಸಿಕೊಳ್ಳಲು ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.ನಮ್ಮ ಹಿನ್ನಡೆಗೆ ಸುರ್ಜೆವಾಲಾ ಕಾರಣರಾಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ವೇಳೆ ಕೆಲವು ಮಂದಿ ಸಚಿವರು

ಉಸ್ತುವಾರಿ ಸುರ್ಜೆವಾಲಾ ವಿರುದ್ಧವೇ ಕಾಂಗ್ರೆಸ್‌ ನಾಯಕರ ಬಂಡಾಯ Read More »

ಭಾರಿ ಪ್ರಚಾರವೇ ಮೊನಾಲಿಸಾಗೆ ಮುಳುವಾಯಿತು

ಜನರ ಕಾಟ ತಡೆಯಲಾಗದೆ ಕುಂಭಮೇಳದಿಂದಲೇ ದೂರ ಹೋದ ಅದ್ಭುತ ಸುಂದರಿ ಪ್ರಯಾಗರಾಜ್: ರಾತ್ರಿ ಬೆಳಗಾಗುವುದರೊಳಗೆ ಸಿಗುವ ಜನಪ್ರಿಯತೆ ಹೇಗೆ ಕೆಲವೊಮ್ಮೆ ಮಾರಕವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಮಹಾಕುಂಭಮೇಳದ ಈ ಮೊನಾಲಿಸಾ ಸಾಕ್ಷಿ. ಕಳೆದ 2-3 ದಿನಗಳಿಂದ ಈ ಹದಿಹರೆಯದ ಯುವತಿ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದಾಳೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಟ್ವಿಟ್ಟರ್‌ ಸೇರಿದಂತೆ ಯಾವ ಸೋಷಿಯಲ್‌ ಮೀಡಿಯಾ ತೆರೆದರೂ ಈ ಯುವತಿಯ ವೀಡಿಯೊಗಳು, ಮತ್ತು ಫೋಟೊಗಳು ಕಾಣಿಸಿಕೊಳ್ಳುತ್ತವೆ. ಯಾವ ದೊಟ್ಟ ನಟಿಗೂ ಸಿಗದ ಪ್ರಚಾರ ಎರಡು ದಿನದಲ್ಲಿ

ಭಾರಿ ಪ್ರಚಾರವೇ ಮೊನಾಲಿಸಾಗೆ ಮುಳುವಾಯಿತು Read More »

error: Content is protected !!
Scroll to Top