ಸುದ್ದಿ

ಸಿಸಿ ಕ್ಯಾಮರಾ ಮೂಲಕ ಭಾರತದ ಸೇನೆ ಮೇಲೆ ಪಾಕಿಸ್ತಾನ ಕಣ್ಗಾವಲು

ಬೇಹುಗಾರಿಕೆ ಮಾಡುತ್ತಿದ್ದ 11 ಮಂದಿ ಸೆರೆ ನವದೆಹಲಿ: ಇರಾನ್ ರಾಜಧಾನಿ ಟೆಹ್ರಾನ್‌ನ ಸಿಸಿ ಕ್ಯಾಮರಾ ಹ್ಯಾಕ್ ಮಾಡಿ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಮತ್ತು ಆಪ್ತರ ಮೇಲೆ ದೂರದಲ್ಲೆಲ್ಲೋ ಕುಳಿತು ಇಸ್ರೇಲ್ ಕಣ್ಣಿಟ್ಟಿದ್ದ ರೀತಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೂಡ ಭಾರತದ ಮೇಲೆ ಕಣ್ಣಿಟ್ಟಿದ್ದ ಆಘಾತಕಾರಿ ವಿಚಾರ ಬಯಲಾಗಿದೆ. 4 ರಾಜ್ಯಗಳ ಹಲವು ನಗರಗಳ ಆಯಕಟ್ಟಿನ ಜಾಗದಲ್ಲಿ ಭಾರತದ ಸೇನೆಯ ಚಲನವಲನಗಳನ್ನು ವೀಕ್ಷಿಸಲು ಪಾಕ್ ಸಿಸಿಟಿವಿ ಅಳವಡಿಸಿರುವುದು ಗೊತ್ತಾಗಿದೆ. ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಉಗ್ರ […]

ಸಿಸಿ ಕ್ಯಾಮರಾ ಮೂಲಕ ಭಾರತದ ಸೇನೆ ಮೇಲೆ ಪಾಕಿಸ್ತಾನ ಕಣ್ಗಾವಲು Read More »

ಮಂಗಳೂರು: ಪೋಕ್ಸೊ ಕೇಸ್‌ ಅಪರಾಧಿಗೆ 20 ವರ್ಷ ಜೈಲು

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣ ಮಂಗಳೂರು : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಅಪರಾಧಿ ಗದಗ ತಾಲೂಕಿನ ಹೊಳೆಮುನ್ನೂರು ನಿವಾಸಿ ಮಹೇಶ ಮಾದರ (20) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್ ಸಿ-2 (ಪೊಕ್ಸೊ) ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನಗರ ಹೊರವಲಯದಲ್ಲಿ ಬಾಡಿಗೆ ಮನೆಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಹೋಮ್ ನರ್ಸ್ ಕೆಲಸ

ಮಂಗಳೂರು: ಪೋಕ್ಸೊ ಕೇಸ್‌ ಅಪರಾಧಿಗೆ 20 ವರ್ಷ ಜೈಲು Read More »

ಬುಕ್‌ ಮಾಡಿದ ದಿನವೇ ಸಿಲಿಂಡರ್‌ ಪೂರೈಕೆ : ಸರ್ಕಾರ ಸೂಚನೆ

ಏಜೆನ್ಸಿಗಳ ಮುಂದೆ ಜನ ಕ್ಯೂ ನಿಲ್ಲದಂತೆ ನೋಡಿಕೊಳ್ಳಲು ಆದೇಶ ಬೆಂಗಳೂರು: ಗೃಹ ಬಳಕೆ ಗ್ಯಾಸ್‌ ಸಿಲಿಂಡರ್ 26 ದಿನಗಳ ಬಳಿಕ ಬುಕ್ ಮಾಡಿದರೆ ದಿನವೇ ವಿತರಿಸುವಂತೆ ಗ್ಯಾಸ್ ಏಜೆನ್ಸಿಗಳಿಗೆ ಸರ್ಕಾರ ಸೂಚಿಸಿದೆ. ಯಾವುದೇ ಕಾರಣಕ್ಕೂ ಗ್ಯಾಸ್ ಏಜೆನ್ಸಿಗಳ ಮುಂದೆ ಜನ ಕ್ಯೂ ನಿಲ್ಲದಂತೆ ನೋಡಿಕೊಳ್ಳಬೇಕೆಂದು ಏಜೆನ್ಸಿಗಳಿಗೆ ತಿಳಿಸಿದೆ. ಕಮರ್ಷಿಯಲ್ ಸಿಲಿಂಡರ್ ವಿಚಾರದಲ್ಲಿ ಸುಧಾರಣೆ ಆಗಿದ್ದು, ಆಟೋ ಗ್ಯಾಸ್ ಸಮಸ್ಯೆ ಇದೆ. ಕೇಂದ್ರಕ್ಕೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದೆ. ಸಚಿವರಾದ ಕೃಷ್ಣ ಬೈರೇಗೌಡ ಮತ್ತು ದಿನೇಶ್

ಬುಕ್‌ ಮಾಡಿದ ದಿನವೇ ಸಿಲಿಂಡರ್‌ ಪೂರೈಕೆ : ಸರ್ಕಾರ ಸೂಚನೆ Read More »

ಜಲಪಾತದಲ್ಲಿ ಮುಳುಗಿ ಮೂವರು ಯುವತಿಯರು ಸಾವು

ರೀಲ್ಸ್‌ ಗೀಳಿನಿಂದಾಗಿ ಸಂಭವಿಸಿದ ಭೀಕರ ದುರಂತ ಹೈದರಾಬಾದ್: ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿದ್ದ ಮೂವರು ಯುವತಿಯರು ಕ್ಯಾಮೆರಾ ಮುಂದೆಯೇ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ದುರಂತದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೃತರನ್ನು 17 ವರ್ಷದ ತ್ರಿಶಾ, 16 ವರ್ಷದ ರತ್ನ ಕುಮಾರಿ ಮತ್ತು 16 ವರ್ಷದ ಪವಿತ್ರಾ 16 ಎಂದು ಗುರುತಿಸಲಾಗಿದೆ. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮುಲ್ಲುಂಗುಮ್ಮಿ ಜಲಪಾತದಲ್ಲಿ ವಿಡಿಯೋ ಮಾಡಲು ಹೋದ ಮೂವರು ಯುವತಿಯರು

ಜಲಪಾತದಲ್ಲಿ ಮುಳುಗಿ ಮೂವರು ಯುವತಿಯರು ಸಾವು Read More »

ಸುರಕ್ಷಿತವಾಗಿ ಭೂಮಿಗೆ ಮರಳಿದ ಆರ್ಟಿಮಿಸ್-2 ಮಿಷನ್‌

ಫೆಸಿಫಿಕ್‌ ಮಹಾಸಾಗರದಲ್ಲಿ ಲ್ಯಾಂಡ್‌ ಆದ ನಾಲ್ವರು ಗಗನಯಾತ್ರಿಗಳು ನ್ಯೂಯಾರ್ಕ್‌: ಚಂದ್ರನ ಸುತ್ತಲೂ ಐತಿಹಾಸಿಕ ಪ್ರಯಾಣ ಪೂರ್ಣಗೊಳಿಸಿದ ಬಳಿಕ ನಾಸಾದ ಆರ್ಟಿಮಿಸ್-2 ಮಿಷನ್‌ ಈಗ ಭೂಮಿಗೆ ಮರಳಿದೆ. ನಾಲ್ವರು ಗಗನಯಾತ್ರಿಗಳು ಭಾರತೀಯ ಕಾಲಮಾನದ ಪ್ರಕಾರ ಶನಿವಾರ ನಸುಕಿನ ಹೊತ್ತು ಫೆಸಿಫಿಕ್‌ ಮಹಾಸಾಗರದಲ್ಲಿ ಪ್ಯಾರಾಚೂಟ್‌ ಮೂಲಕ ಸುರಕ್ಷಿತವಾಗಿ ಇಳಿದಿದ್ದು, ಅವರನ್ನು ಕೂಡಲೇ ಭೂಮಿಗೆ ಕರೆತರಲಾಗಿದೆ. ಭೂಮಿಯಿಂದ 4,06,778 ಕಿ.ಮೀ. ದೂರ ಹೋಗಿದ್ದ ಈ ಚಂದ್ರಯಾನ ಮಾನವನ ಇತಿಹಾಸದಲ್ಲಿ ಅತಿ ದೂರದ ಮತ್ತು ಭಾರಿ ದಿಟ್ಟತನದ ಗಗನಯಾನ ಎಂಬ ಹಿರಿಮೆಗೆ ಪಾತ್ರವಾಗಿದೆ.

ಸುರಕ್ಷಿತವಾಗಿ ಭೂಮಿಗೆ ಮರಳಿದ ಆರ್ಟಿಮಿಸ್-2 ಮಿಷನ್‌ Read More »

ಆತ್ಮಹತ್ಯೆ ಮಾಡಿಕೊಂಡಳೆ ಶ್ರೀನಂದಾ?

2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆಯಾದ ಬಾಲಕಿಯ ಸಾವಿನ ಸುತ್ತ ಅನುಮಾನ ಚಿಕ್ಕಮಗಳೂರು : ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ನಿಗೂಢವಾಗಿ ನಾಪತ್ತೆಯಾದ ನಾಲ್ಕು ದಿನಗಳ ಬಳಿಕ ಪ್ರಪಾತದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿರುವ ಘಟನೆಯ ಸುತ್ತ ನಾನಾ ರೀತಿಯ ಅನುಮಾನಗಳು ಮುತ್ತಿಕೊಂಡಿವೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲೂ ತನಿಖೆ ನಡೆಯುತ್ತಿದೆ. ಏಪ್ರಿಲ್ 7ರಂದು ಕುಟುಂಬದವರೊಂದಿಗೆ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾಕ್ಕೆ ತಂದೆ, ತಾಯಿ ಮತ್ತು ಕುಟುಂಬದ

ಆತ್ಮಹತ್ಯೆ ಮಾಡಿಕೊಂಡಳೆ ಶ್ರೀನಂದಾ? Read More »

ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಉಚಿತ ಸಂಸ್ಕೃತ ಕಲಿಕಾ ಶಿಬಿರ

ಪುತ್ತೂರು: ಸಂಸ್ಕೃತವು ಭಾರತದ ಪ್ರಾಚೀನ ಭಾಷೆ. ಸರಳ, ಸುಂದರ ಹಾಗೂ ಮಧುರವಾದ ಈ ಭಾಷೆಯನ್ನು ಕಲಿಯಲು ಒಂದು ಉತ್ತಮ ಅವಕಾಶವಾಗಿ ಇದೀಗ ಪುತ್ತೂರಿನಲ್ಲಿ ಶಿಬಿರವೊಂದನ್ನು ಆಯೋಜಿಸಲಾಗಿದೆ. ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ‘ಉಚಿತ ಸಂಸ್ಕೃತ ಸಂಭಾಷಣಾ ಶಿಬಿರ’ವು ಇದೇ ಎಪ್ರಿಲ್ 13 ರಿಂದ ಏಪ್ರಿಲ್ 22ರ ವರೆಗೆ 10 ದಿನಗಳ ಕಾಲ ನಡೆಯಲಿದೆ. ಪುತ್ತೂರಿನ ಬೊಳುವಾರಿನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ‘ನವನೀತಂ ಸಭಾಂಗಣ’ದಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ

ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಉಚಿತ ಸಂಸ್ಕೃತ ಕಲಿಕಾ ಶಿಬಿರ Read More »

ಪಿಯುಸಿ ಪರೀಕ್ಷೆಯಲ್ಲಿ ಏಕಕಾಲಕ್ಕೆ ತೇರ್ಗಡೆಯಾದ ಅಮ್ಮ – ಮಗಳು

ಬಂಟ್ವಾಳ: ಬಿ.ಸಿ.‌ರೋಡಿನ ಕೈಕಂಬ ‌ನಿವಾಸಿಗಳಾದ ತಾಯಿ ಮತ್ತು ಮಗಳು ಈ ಬಾರಿಯ ದ್ವಿತೀಯ ಪಿಯುಸಿ‌ ಪರೀಕ್ಷೆಯನ್ನು ಪಾಸು ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ತಾಯಿ ನೇತ್ರಾವತಿ ವಿ. ಆರ್. ಅವರು ಈ ಬಾರಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ‌ಪಾಸಾಗುವ ಮೂಲಕ ಸಾಧನೆ ಮಾಡಿದ್ದಾರೆ. ಇವರ ಪುತ್ರಿ ಹೇಮಶ್ರೀ ಆರ್. ಅವರು ಸರ್ಕಾರಿ ಪ.ಪೂ. ಕಾಲೇಜು ಬಿ.ಮೂಡ ಇಲ್ಲಿನ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದು 562 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ‌ನಲ್ಲಿ

ಪಿಯುಸಿ ಪರೀಕ್ಷೆಯಲ್ಲಿ ಏಕಕಾಲಕ್ಕೆ ತೇರ್ಗಡೆಯಾದ ಅಮ್ಮ – ಮಗಳು Read More »

ಚಾರಣಕ್ಕೆ ಬಂದು ಕಾಣೆಯಾಗಿದ್ದ ಕೇರಳದ ಶ್ರೀನಂದಾ ಶವ ಪ್ರಪಾತದಲ್ಲಿ ‌ಪತ್ತೆ

ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. ಶ್ರೀನಂದಾ ಎಪ್ರಿಲ್ 7 ರಂದು ಕಾಣೆಯಾಗಿದ್ದರು. ಎಸ್.ಡಿ.ಆರ್.ಎಫ್. ಮತ್ತು ಪೊಲೀಸ್ ತಂಡಗಳ ತೀವ್ರ ಶೋಧ ಕಾರ್ಯದ ನಂತರ ಇಂದು ಮೃತದೇಹ ಪತ್ತೆಯಾಗಿದೆ.ಸುಮಾರು 40 ಜನ ಪ್ರವಾಸಿಗರ ತಂಡದಲ್ಲಿ ಶ್ರೀನಂದಾ ‌ಸಹ ಇದ್ದರು. ಮಾಣಿಕ್ಯಧಾರಾ ಸಮೀಪ ಹಠತ್ತಾಗಿ ಶ್ರೀನಂದಾ ಕಾಣೆಯಾಗಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇಂದು ಅವರ

ಚಾರಣಕ್ಕೆ ಬಂದು ಕಾಣೆಯಾಗಿದ್ದ ಕೇರಳದ ಶ್ರೀನಂದಾ ಶವ ಪ್ರಪಾತದಲ್ಲಿ ‌ಪತ್ತೆ Read More »

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ

ಶಿಕ್ಷಕ, ಗರ್ಭಪಾತ ಮಾಡಿದ ವೈದ್ಯೆ ವಿರುದ್ಧ ಪೋಕ್ಸೋ ಕೇಸ್‌ ಚಿತ್ರದುರ್ಗ: ಹದಿನಾರು ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಶಿಕ್ಷಕನೊಬ್ಬ ಶಾಲೆಯ ತರಗತಿ ಕೊಠಡಿಯಲ್ಲೇ ಅತ್ಯಾಚಾರ ಎಸಗಿ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದೆ. ಬಾಲಕಿ ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿ ಶಿಕ್ಷಕ ಹಾಗೂ ಗರ್ಭಪಾತ ಮಾಡಿಸಿದ ವೈದ್ಯೆ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಣಿತ ಶಿಕ್ಷಕ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ Read More »

error: Content is protected !!
Scroll to Top