ನಾಳೆ (ಏ.22) : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಯಕ್ಷಗಾನ ಕಾರ್ಯಕ್ರಮ

ಪುತ್ತೂರು : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿಏ. 22ಮಂಗಳವಾರದಂದು ಸಂಜೆ 6:30 ರಿಂದ  ಪ್ರಸಿದ್ಧ  ಕಲಾವಿದರ ಕೂಡುವಿಕೆಯಿಂದ  ” ಗಿರಿಜಾ ಕಲ್ಯಾಣ” ಎಂಬ ತೆಂಕುತಿಟ್ಟು  ಯಕ್ಷಗಾನ ಪ್ರದರ್ಶನವನ್ನು  ಆಯೋಜಿಸಲಾಗಿದೆ . ಯಕ್ಷಗಾನ ಪ್ರಿಯರು ಈ ಕಾರ್ಯಕ್ರಮಕ್ಕೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಹಿಮ್ಮೇಳದಲ್ಲಿ – ಭಾಗವತರು : ಅಮೃತಾ ಕೌಶಿಕ್ ರಾವ್ , ಮುರಾರಿ ಭಟ್ ಪಂಜಿಗದ್ದೆ. ಚೆಂಡೆ ಮದ್ದಳೆ ವಾದಕರಾಗಿ : ಗಿರೀಶ್ ಕಿನಿಲಕೋಡಿ, ಜಯಪ್ರಕಾಶ್ ನಾಕೂರು, ಮುರಳೀಧರ ಬಟ್ಯಮೂಲೆ. ಮುಮ್ಮೇಳದಲ್ಲಿ : ಗುಂಡ್ಯಡ್ಕ ಈಶ್ವರ ಭಟ್ ,   ರವಿ ಭಟ್, ಬಾಲಕೃಷ್ಣ ಸೀತಂಗೋಳಿ, ಪ್ರಶಾಂತ್ ಮುಂಡ್ಕೂರ್, ನವೀನಚಂದ್ರ,  ಶ್ರೀಶ ಮಣಿಲ, ರಮೇಶ್ ಕಜೆ (ಹಾಸ್ಯ ಪಾತ್ರದಲ್ಲಿ ),   ಕಿಶನ್ ಅಗ್ಗಿತ್ತಾಯ, ತೃಷಾಲ್  ಗೌಡ, ಜೀವನ್ ಆಚಾರ್ಯ, ಕುಮಾರಿ ಸ್ತುತಿ ಕುಲಾಲ್, ಕುಮಾರಿ ಭೂಮಿಕಾ ಆಚಾರ್ಯ, ಸಂಯೋಜನೆ : ಗಿರೀಶ್ ಕಿನಿಲಕೋಡಿ, ವೇಷಭೂಷಣ :ದೇವಕಾನ ಬಳಗ ಸಹಕರಿಸಲಿದ್ದಾರೆ.





























Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top