ಭಾರತದ ಭವಿಷ್ಯವನ್ನು ಆಕರ್ಷಕಗೊಳಿಸುವ 2025ರ ಬಜೆಟ್ : ಕಿಶೋರ್ ಕುಮಾರ್  ಪುತ್ತೂರು

ಪುತ್ತೂರು : ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ದೃಢನಿಶ್ಚಯ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಭಾವಿ ಆರ್ಥಿಕ ನೀತಿಯ ಫಲವಾಗಿ, 2025ರ ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಶಕ್ತಿಯುತ ಒತ್ತುವರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ  ಕಿಶೋರ್ ಕುಮಾರ್  ಪುತ್ತೂರು ತಿಳಿಸಿದರು.

ಈ ಬಾರಿಯ ಜನಪರ ಬಜೆಟ್ ಮಧ್ಯಮವರ್ಗಕ್ಕೆ ದೊಡ್ಡ ಶ್ರಮಿಕ ಸಮ್ಮಾನ ನೀಡಿದ್ದು, ಆದಾಯ ತೆರಿಗೆ ಮನ್ನಾವನ್ನು ₹12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಹಣಕಾಸು ಭದ್ರತೆಯನ್ನು ಒದಗಿಸಿದೆ. ರೈತರಿಗಾಗಿ ಬೇಳೆ ಕಾಳು ಹಾಗೂ ಹತ್ತಿ ಬೆಳೆಯ ಉತ್ಪಾದನೆಗೆ ಹೊಸ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಹೆಚ್ಚಳ, ಇವುಗಳಿಂದ ರೈತರ ಜೀವನ ಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ ಭಾರೀ ಹೂಡಿಕೆ ಮಾಡಲಾಗಿದ್ದು, ರಸ್ತೆ, ರೈಲ್ವೆ, ಮತ್ತು ವಿದ್ಯುತ್ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಘೋಷಿಸಲಾಗಿದೆ. ಇದರ ಜೊತೆಗೆ ಸ್ಟಾರ್ಟ್‌ಅಪ್ ಮತ್ತು ಉದ್ಯಮಿಗಳ ಬೆಂಬಲಕ್ಕಾಗಿ ಹೊಸ ಸಹಾಯಧನವನ್ನು ಜಾರಿಗೆ ತರಲಾಗಿದ್ದು ಇದು ನೂತನ ಉದ್ಯಮಗಳಿಗೆ ಉತ್ತೇಜನ ಕೊಡಲಿದೆ. ಈ ಕಾರಣದಿಂದ ಉದ್ಯೋಗವಕಾಶಗಳು ಹೆಚ್ಚಾಗಿ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಉಂಟಾಗುತ್ತದೆ. 

ಈ ವರ್ಷದ ಬಜೆಟ್ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುವಂತಹದ್ದು. ಇದು ಹೊಸ ಉದ್ಯೋಗ ಅವಕಾಶಗಳು, ವ್ಯಾಪಾರದ ವೃದ್ಧಿ, ಹಾಗೂ ಗ್ರಾಮೀಣಾಭಿವೃದ್ಧಿಯನ್ನು ಗುರಿಯಾಗಿ ಹೊಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ದಿಟ್ಟ ನಿರ್ಧಾರಗಳು ಹಾಗೂ ನಿರ್ಮಲಾ ಸೀತಾರಾಮನ್ ಅವರ ಆರ್ಥಿಕ ಯೋಜನೆಗಳು ಭಾರತವನ್ನು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಸ್ಥಾಪಿಸಲು ಪೂರಕವಾಗಲಿದೆ. ಇದು “ಮೋದಿ ಹೈ ತೋ ಮುಮ್ಕಿನ್ ಹೈ” ಎಂಬ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಿಶೋರ್ ಕುಮಾರ್  ಪುತ್ತೂರು ಹೇಳಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top