ತಾತ್ಕಾಲಿಕವಾಗಿ ನಿಂತು ಹೋಗಿದ್ದ ಹಾರಾಡಿ ರೈಲ್ವೇ ಕಾಮಗಾರಿ ಪುನರಾರಂಭ ; ಮಾರ್ಚ್ ತಿಂಗಳೊಳಗೆ ರಸ್ತೆ ಲೋಕಾರ್ಪಣೆ : ಜೀವಂಧರ್ ಜೈನ್‍

ಪುತ್ತೂರು : ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯನ್ನು ಪುನರಾರಂಭಿಸಲಾಗಿದೆ.

ಜಲ್ಲಿ ಹಾಗೂ ಕ್ರಷರ್‍ ಮುಷ್ಕರದ ಹಿನ್ನಲೆಯಲ್ಲಿ ಕಾಮಗಾರಿಗೆ ಬೇಕಾದ ಜಲ್ಲಿ ಕಲ್ಲುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.





























ಸುಮಾರು 1.7 ಕೋಟಿ ವೆಚ್ಚದ 5.5 ಮೀಟರ್‍ ಅಗಲದ ರಸ್ತೆ ಕಾಮಗಾರಿಗೆ  2022ನೇ ನವೆಂಬರ್‍ ತಿಂಗಳಲ್ಲಿ ಶಿಲಾನ್ಯಾಸದ ಮೂಲಕ ಚಾಲನೆ ನೀಡಲಾಗಿತ್ತು. ಬಳಿಕ ಜಲ್ಲಿ ಕ್ರಷರ್‍ ಮಾಲಕರ ಮುಷ್ಕರದಿಂದಾಗಿ ಸಮಸ್ಯೆ ಉಂಟಾಗಿ ಕೇವಲ ಅರ್ಥ್ವರ್ಕ್ ಮಾಡಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮುಷ್ಕರ ಮುಗಿದ ಬಳಿಕ ಜಲ್ಲಿ ಪೂರೈಕೆಯಾಗಿದ್ದು, ಸೋಮವಾರದಿಂದ ಕಾಮಗಾರಿಯನ್ನು ಆರಂಭಿಸಲಾಗಿದೆ.

 
 

ಕಾಮಗಾರಿ ನಡೆಯುವ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಜೀವಂಧರ್‍ ಜೈನ್‍ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಾಮಗಾರಿ ಆರಂಭವಾಗುವುತ್ತಿದ್ದಂತೆ ಜಲ್ಲಿ ಕ್ರಷರ್‍ ಮಾಲಕರ ಮುಷ್ಕರ ಕಾಮಗಾರಿಗೆ ಅಡ್ಡಿಯಾಗಿತ್ತು. ಇದೀಗ ಮುಷ್ಕರ ಮುಗಿದಿದ್ದು, ಕಾಮಗಾರಿಗೆ ವೇಗ ನೀಡಲಾಗಿದೆ. ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಜೀವಂಧರ್‍ ಜೈನ್‍ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್‍.ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್‍.ಮನೋಹರ್‍, ಕಾರ್ಯಪಾಲಕ ಇಂಜಿನಿಯರ್‍ ದುರ್ಗಾಪ್ರಸಾದ್‍, ಭಾರತ್‍ ಅಟೋ ಕಾರ್ಸ್ನ ಮೆನೇಜರ್‍ ಆನಂದ ಕುಲಾಲ್‍, ಗುತ್ತಿಗೆದಾರ ಜುವೈದ್‍ ಪರ್ಲಡ್ಕ ಉಪಸ್ಥಿತರಿದ್ದರು.  

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top