ಜೋಡಿ ಹತ್ಯೆಯ ಆರೋಪಿ ಪೊಲೀಸರ ವಶಕ್ಕೆ

ಮಡಿಕೇರಿ: ಭಾಗಮಂಡಲದ ಕುಂದಚೇರಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಎಚ್. ಕೆ. ಚಂದು ಎಂದು ಗುರುತಿಸಲಾಗಿದೆ.

ತನ್ನ ತಂಗಿಗಿದ್ದ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂದು ಆತ ಪೊಲೀಸರಿಗೆ ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾನೆ.























































 
 

ಕಳೆದ ಎರಡು ವರ್ಷಗಳಿಂದ ಯಶೋಧಾ ಮತ್ತು ಕುಂಞಿರಾಮ ‌ಎಂಬವರ ನಡುವೆ ಅನೈತಿಕ ಸಂಬಂಧ ಇತ್ತು. ಇದು ಯಶೋಧಾಳ ಅಣ್ಣ ಚಂದುವಿನ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಜಗಳಗಳೂ ನಡೆದಿದ್ದವು. ಬುಧವಾರವೂ ಇವರಿಬ್ಬರ ಜೊತೆ ಚಂದು ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ‌ತಿರುಗಿದೆ. ಈ ವೇಳೆ ತಂದು ಕತ್ತಿಯಿಂದ ಕಡಿದು ಇಬ್ಬರನ್ನೂ ಹತ್ಯೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮಾಹಿತಿ, ಸಾಕ್ಷ್ಯ ಕಲೆ ಹಾಕಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!
Scroll to Top