ವೇಣೂರು: ಬಂಗಾರದ ಒಡವೆಗಳಿಗೆ ಪಾಲಿಶ್ ಮಾಡುವ ಮತ್ತು ತೊಳೆದು ಕೊಡುವುದಾಗಿ ನಂಬಿಸಿ ರಾಸಾಯನಿಕ ಬಳಸಿ ಕದಿಯುತ್ತಿದ್ದ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಫೆ. 10 ರಂದು ಕಾಶಿಪಟ್ಣದ ಪಾಣಿಲಾಜೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನ ತೊಳೆದು, ಪಾಲಿಶ್ ಮಾಡುವುದಾಗಿ ಹೇಳಿ ರಾಸಾಯನಿಕದ ಮೂಲಕ ಚಿನ್ನವನ್ನು ಕರಗಿಸಿ ಮನೆಮಂದಿಗೆ ವಂಚಿಸಿದ ಘಟನೆ ನಡೆದಿತ್ತು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಬಿಹಾರ ಮೂಲದ ಚಂದನ್ (30) ಎಂಬಾತ ಸೆರೆಯಾಗಿದ್ದಾನೆ. ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಯಿಂದ ಸುಮಾರು 75,000 ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
























