ಸುಳ್ಯ : ಜನವಸತಿಯಿಲ್ಲದ ಮನೆಯ ಶೌಚಾಲಯದಲ್ಲಿ ಯುವಕನ ಶವಪತ್ತೆ

ಮದ್ಯದ ಅಮಲಿನಲ್ಲಿ ತನ್ನದೇ ಮನೆಗೆ ಬೆಂಕಿ ಹಚ್ಚಿ ಓಡಿಹೋಗಿದ್ದ ಯುವಕ

ಸುಳ್ಯ: ಮನೆಗೆ ಬೆಂಕಿಹಚ್ಚಿ ಓಡಿಹೋಗಿದ್ದ ಯುವಕನ ಮೃತದೇಹ ಜನವಸತಿಯಿಲ್ಲದ ಮನೆಯ ಶೌಚಾಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುಳ್ಯದ ಗುತ್ತಿಗಾರು ಗ್ರಾಮದ ಅಡ್ಡನಪಾರೆಯಲ್ಲಿ ಗುರುವಾರ ಸಂಭವಿಸಿದೆ. ಅಡ್ಡನಪಾರೆ ಗೋಪಾಲ ನಾಯ್ಕ ಎಂಬವರ ಪುತ್ರ ಮಹಾಬಲ ನಾಯ್ಕ (27) ಮೃತಪಟ್ಟಿರುವ ಯುವಕ.

ಮಹಾಬಲ ಕಳೆದ ಫೆ.4ರಂದು ಮದ್ಯದ ಅಮಲಿನಲ್ಲಿ ಬಂದು ತನ್ನ ಮನೆಗೇ ಬೆಂಕಿಹಚ್ಚಿ ಅಲ್ಲಿಂದ ಓಡಿಹೋಗಿದ್ದ. ಮನೆಗೆ ಬೆಂಕಿಹಚ್ಚಿದ ಕುರಿತು ಗೋಪಾಲ ನಾಯ್ಕ ಮಗನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.





















































 
 

ನಾಪತ್ತೆಯಾಗಿದ್ದ ಮಹಾಬಲ ನಾಯ್ಕನ ಮೃತದೇಹ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಜನ ವಸತಿಯಿಲ್ಲದ ಮನೆಯ ಶೌಚಾಲಯದೊಳಗೆ ಗುರುವಾರ ಸಂಜೆ ಪತ್ತೆಯಾಗಿದೆ. ಮನೆಯವರು ವಾಸನೆ ಬರುವುದನ್ನು ಗಮನಿಸಿ ಶೌಚಾಲಯದೊಳಗೆ ನೋಡಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಹಾಬಲ ನಾಯ್ಕ ಅವಿವಾಹಿತನಾಗಿದ್ದು, ತಂದೆ-ತಾಯಿಯನ್ನು ಅಗಲಿದ್ದಾನೆ.

error: Content is protected !!
Scroll to Top