ಕಡಬ: ಶ್ರೀ ಹುಲಿಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನ ಕಾರಣಿಕ ಕ್ಷೇತ್ರ ಬದಿಬಾಗಿಲು, ನೂಜಿಬಾಳ್ತಿಲ, ಕಡಬ ಇಲ್ಲಿಯ ವಾರ್ಷಿಕ ನೇಮೋತ್ಸವ ಫೆ. 14 ರಂದು ನಡೆಯಲಿದೆ.
ಬೆಳಿಗ್ಗೆ ನಾಗ ರಕ್ತೇಶ್ವರಿ ಬನದಲ್ಲಿ ತಂಬಿಲ ಸೇವೆ ನಡೆದು, ಕ್ಷೇತ್ರದಲ್ಲಿ ಗಣಪತಿ ಹವನ, ದೈವಗಳಿಗೆ ಕಳಶಾಭಿಷೇಕ, ತಂಬಿಲ ಸೇವೆ ನಡೆಯಲಿದೆ. ಸಂಜೆ ಗಂಟೆ 6 ಕ್ಕೆ ಭಂಡಾರ ಹಿಡಿಯುವುದು, 7.30ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 8.30ಕ್ಕೆ ಕಾರಣಿಕ ಕ್ಷೇತ್ರದ ಪ್ರಧಾನ ದೈವ ಹುಲಿ ಚಾಮುಂಡಿ ದೈವದ ನೇಮೋತ್ಸವ, ಬಂಡಿ ಉತ್ಸವ, ತದ ನಂತರ ಕಾಡೆತ್ತಿ ಪಂಜುರ್ಲಿ ಹಾಗೂ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ವರ್ಗ ಪ್ರಕಟಣೆಯಲ್ಲಿ ತಿಳಿಸಿದೆ.
























