ಪುತ್ತೂರು: ನಗರದ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಜ. 22 ರಿಂದ ಜ. 26 ರ ವರೆಗೆ ರಿಪಬ್ಲಿಕ್ ಸೇಲ್ ನಡೆದಿದ್ದು, ಗ್ರಾಹಕರು ಇದಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಪ್ರಸ್ತುತ ದಿನಗಳಲ್ಲಿ ಹಳದಿ ಲೋಹದ ಬೆಲೆ ಗಗನಮುಖಿಯಾಗಿದ್ದು, ರಿಪಬ್ಲಿಕ್ ಸೇಲ್ನಲ್ಲಿ ಮೇಕಿಂಗ್ ಚಾರ್ಜಸ್ ಮೇಲೆ ಸಂಸ್ಥೆ ಭಾರೀ ರಿಯಾಯಿತಿ ನೀಡುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಗಣರಾಜ್ಯೋತ್ಸವದ ಪ್ರಯುಕ್ತ ಸಂಸ್ಥೆ ಈ ಆಫರ್ ನೀಡಿತ್ತು. ಪುತ್ತೂರು, ಸುಳ್ಯ, ಹಾಸನ, ಮೂಡಬಿದ್ರೆ, ಕುಶಾಲನಗರದಲ್ಲಿರುವ ಎಲ್ಲಾ ಶಾಖೆಗಳ ಗ್ರಾಹಕರು ಈ ವಿಶೇಷ ಸೇಲ್ಗೆ ಉತ್ತಮವಾಗಿ ಸ್ಪಂದಿಸಿದ್ದಾರೆ.
























