ನವದೆಹಲಿ: ಆಂಧ್ರಪ್ರದೇಶದ ಮಾರೆಡುಮಿಲ್ಲಿಯ ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ಗೆ ಒಟ್ಟು ಏಳು ಮಂದಿ ನಕ್ಸಲರನ್ನು ಯಮಪುರಕ್ಕೆ ಕಳುಹಿಸಲಾಗಿದೆ.
ಈ ಹಿಂದೆ ನಡೆದ ಎನ್ಕೌಂಟರ್ನಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಕಮಾಂಡರ್ ಮದ್ವಿ ಹಿದ್ಮಾ ಸೇರಿ ಆರು ಮಂದಿ ನಕ್ಸಲರನ್ನು ಕೊಲ್ಲಲಾಗಿತ್ತು. ಇಂದು ಎನ್ಕೌಂಟರ್ಗೆ ಗುರಿಯಾದ ನಕ್ಸಲರು ಪೈಕಿ ಮೂವರು ಮಹಿಳೆಯರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿನ್ನೆ ಕಾರ್ಯಾಚರಣೆ ಆರಂಭ ಮಾಡಿದ 7 ಕಿಮೀ ದೂರದ ಪ್ರದೇಶದಿಂದ ಇಂದು ಕಾರ್ಯಾಚರಣೆ ಆರಂಭ ಮಾಡಲಾಗಿತ್ತು. ಇಂದು ಹತ್ಯೆಯಾದ 7 ಜನರಲ್ಲಿ ಓರ್ವನನ್ನು ಟೆಕ್ ಶಂಕರ್ ಎಂದು ಗುರುತಿಸಲಾಗಿದೆ.
























