Dr. RP ಕುರುಂಜಿಯವರಿಂದ ಬೆಳ್ಳಿ ರಥ ಸ್ವೀಕಾರ

ಕುಂಭಾಶಿ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸರ್ಪಿಸಲಿರುವ 18 ಆಡಿ ಎತ್ತರ ಮತ್ತು ಸುಮಾರು ಎರಡು ಸಾವಿರ ಕೆ.ಜಿ. ಭಾರದ ಬೆಳ್ಳಿರಥವನ್ನು ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯ ಅವರಿಂದ ಸ್ವೀಕಾರ ಮಾಡಿದರು.

ಉಡುಪಿ ಜಿಲ್ಲಾ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿನ್ನೆ ದಿನಾಂಕ ನವೆಂಬರ್ 3ರಂದು ರಾತ್ರಿ ಗಂಟೆ 8ಕ್ಕೆ ಶಾಸ್ತ್ರೋಕ್ತ ಪೂಜಾ ವಿಧಿ ವಿಧಾನಗಳ ಬಳಿಕ ರಥಕ್ಕೆ ಕುತ್ತಿಪೂಜೆ ನಡೆದ ಬಳಿಕ ಶಿಲ್ಪಿಗಳು ಬೆಳ್ಳಿರಥವನ್ನು ಡಾಕ್ಟರ್ ರೇಣುಕಾಪ್ರಸಾದ್ ಮತ್ತು ಮನೆಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಮತ್ತು ಸುತ್ತೂರಿನ ನೂರಕ್ಕೂ ಮಿಕ್ಕಿದ ಭಕ್ತಾದಿಗಳು ಹಾಜರಿದ್ದರು.





















































 
 
error: Content is protected !!
Scroll to Top