ಉಳ್ಳಾಲ: ಕುದ್ರೋಳಿ ದೇವಸ್ಥಾನವನ್ನು ಸ್ಥಾಪಿಸಿದಾಗ ಎಷ್ಟು ಕಷ್ಚವಾಗಿದೆ ಎಂದು ನನಗೆ ಗೊತ್ತು. ಧರ್ಮಸ್ಥಳ ವಿಷಯದಲ್ಲೂ ಅದೇ ಕಷ್ಟ ಇದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ, ನಿಮ್ಮ ಜೊತೆಗೆ ದೇಶ ಮಾತ್ರವಲ್ಲ ಇಡೀ ಜಗತ್ತೇ ಇದೆ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
ಧರ್ಮಕ್ಕೆ ಚ್ಯುತಿ ಬಂದಾಗ ಜನಾರ್ದನ ಪೂಜಾರಿ ಅವರು ಸುಮ್ಮನೆ ಇರುವುದಿಲ್ಲ. ಎಲ್ಲರೂ ಪೂಜಾರಿ ಬಾಯಿ ಮುಚ್ಚಿದ್ದಾನೆ ಎಂದು ಹೇಳುತ್ತಾರೆ. ಆದರೆ ಧರ್ಮಕ್ಕೆ ಅಪಚಾರ ಆದಾಗ ಪೂಜಾರಿ ಮೌನವಾಗಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಧಾರ್ಮಿಕ ಸ್ಥಳಗಳ ಬಳಿ ಶವಗಳನ್ನು ಹೂಳುವುದು ಸಂಸ್ಕೃತಿ. ಪ್ರಧಾನಿ ಮೋದಿ ಅವರೆ ಧರ್ಮಸ್ಥಳಕ್ಕೆ ಬಂದು ಧಾರ್ಮಿಕ ಸ್ಥಳಗಳಲ್ಲಿ ಹೆಣಗಳನ್ನು ಹೂಳುವುದು ನಮ್ಮ ಸಂಸ್ಕೃತಿ ಎಂದು ಭಾಷಣ ಮಾಡುವಂತೆ ಅವರು ನುಡಿದಿದ್ದಾರೆ.
























