ಭಾರತ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಬೇಕು: ಶಶಿ ತರೂರ್

ನವದೆಹಲಿ: ಅಮೆರಿಕಾವು ಭಾರತೀಯ ಸರಕುಗಳ ಮೇಲೆ ಸುಂಕ ಹೇರಿರುವ ಕ್ರಮಕ್ಕೆ ಸಂಬಂದಿಸಿದ ಹಾಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾತನಾಡಿದ್ದು, ಭಾರತ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ನಮ್ಮ ನಿಕಟವರ್ತಿ ‌ಮತ್ತು ಕಾರ್ಯತಂತ್ರದ ಪಾಲುದಾರನಾಗಿ ‌ಕಾರ್ಯ ನಿರ್ವಹಿಸುತ್ತಿದ್ದ ಅಮೆರಿಕಾ ಇಂದು ತನ್ನ ನಡವಳಿಕೆ ಬದಲಾಯಿಸಿದೆ ಎಂದರೆ ಭಾರತ ಹಲವಾರು ವಿಷಯಗಳ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಮುಂದಿನ ಎರಡು ಮೂರು ವಾರಗಳಲ್ಲಿ ನಾವು ಮಾತುಕತೆ ಮೂಲಕ ದಾರಿ ಕಂಡುಕೊಳ್ಳಬಹುದು. ಆದರೆ ನಾವು ಹಲವು ವಿಷಯಗಳ ಬಗ್ಗೆ ಆಲೋಚಿಸಬೇಕಾಗುತ್ತದೆ, ಹಿತಾಸಕ್ತಿಗಳನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ತರೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದ ಯಾವುದೇ ಕ್ರಮಗಳಿಗೆ ಭಾರತ ಹೆದರಬಾರದು. ಆ ರಾಷ್ಟ್ರ ಭಾರತದ ಸರಕುಗಳಿಗೆ ‌ಸುಂಕ ಹೆಚ್ಚಿಸಿದಂತೆ, ನಾವೂ ಸಹ ಅಮೆರಿಕಾದ ವಸ್ತುಗಳಿಗೆ ಸುಂಕ ಹೆಚ್ಚಿಸಬೇಕು ಎಂದು ಈ ಹಿಂದೆಯೇ ತರೂರ್ ತಿಳಿಸಿದ್ದರು.





















































 
 
error: Content is protected !!
Scroll to Top