‘ಕಾಂಗ್ರೆಸ್ ಸರ್ಕಾರದ ಮೇಲೆ ಕಾಂಗ್ರೆಸಿಗರಿಗೆಯೇ ನಂಬಿಕೆ ಇಲ್ಲ’ : ವ್ಯಂಗ್ಯವಾಡಿದ ಜೆಡಿಎಸ್

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೋ ಗೊತ್ತಿಲ್ಲ ಹೊಂದಿರುವ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಮಾತುಗಳನ್ನಿಟ್ಟುಕೊಂಡು ‌ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಶಾಸಕರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಅದಕ್ಕೆ ನಯನಾ ಮೋಟಮ್ಮ ಅವರ ಮಾತುಗಳು ಸಾಕ್ಷಿ. ಕಾಂಗ್ರೆಸಿಗರೇ ಸಮಯ ವ್ಯರ್ಥ ಮಾಡದೆ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿ ಎಂದು ಹೇಳಿದೆ.

2028 ರ ವೇಳೆಗೆ ಕರ್ನಾಟಕ ಕಾಂಗ್ರೆಸ್ ಮುಕ್ತವಾಗಲು ಗ್ಯಾರಂಟಿಯಾಗಿ ಮುನ್ನುಡಿ ಬರೆಯುತ್ತದೆ. ಹಾಗಾಗಿ ಕಾಂಗ್ರೆಸ್ ಶಾಸಕ, ಕಾರ್ಯಕರ್ತರು ಈಗಲೇ ಎಚ್ಚೆತ್ತುಕೊಳ್ಳಿ ಎಂದು JDS ಟ್ವೀಟ್ ಮಾಡಿದೆ.





















































 
 
error: Content is protected !!
Scroll to Top