15,000 ಎನ್ಕೌಂಟರ್, 30,000ಕ್ಕೂ ಅಧಿಕ ಅಪರಾಧಿಗಳು ಅಂದರ್
ಲಕ್ನೋ: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಖಡಕ್ ಕ್ರಮಗಳನ್ನು ತೆಗೆದುಕೊಂಡಿರುವ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಈ ವರೆಗೆ 15 ಸಾವಿರ ಎನ್ಕೌಂಟರ್ ನಡೆಸಿದ್ದು, ಇದರಲ್ಲಿ 238 ಮಂದಿ ಹತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.
2017 ರಿಂದೀಚೆಗೆ 30 ಸಾವಿರಕ್ಕೂ ಅಧಿಕ ಅಪರಾಧಿಗಳನ್ನು ಜೈಲಿಗಟ್ಟಲಾಗಿದೆ. 9 ಸಾವಿರಕ್ಕೂ ಅಧಿಕ ಆರೋಪಿಗಳಿಗೆ ಗುಂಡೇಟು ತಗುಲಿದೆ. ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದವರ ಮೇಲೆ ನಡೆಸಲಾದ ಎನ್ಕೌಂಟರ್ನಲ್ಲಿ ಸುಮಾರು 238 ಜನರು ಮೃತಪಟ್ಟಿದ್ದಾಗಿ ವರದಿಗಳು ಹೇಳಿವೆ.
ಸಿಎಂ ಯೋಗಿ ಅವರ ಸರ್ಕಾರ ಅಪರಾಧಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದು, ಅದರನ್ವಯ ಈ ರೀತಿಯ ಖಡಕ್ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಗೀಜಿ ಸರ್ಕಾರ ಅಪರಾಧಿಗಳಿಗೆ ಸಂಬಂಧಿಸಿದ ನಿರ್ಮಾಣಗಳನ್ನು ಬುಲ್ಡೋಸರ್ ಮೂಲಕ ನೆಲಸಮ ಮಾಡಿ, ಅಪರಾಧಿಗಳಿಗೆ ಹೊಡೆತ ನೀಡಿದ್ದು ಸಹ ಕಾನೂನು ಬಾಹಿರ ವಿಷಯಗಳನ್ನು ತಡೆಯಲು ಸರ್ಕಾರ ತೆಗೆದುಕೊಂಡ ಅಗತ್ಯ ಕ್ರಮ ಎಂದೇ ಹೇಳಬಹುದು.
























