ರೈತರ ಹೋರಾಟಕ್ಕೆ ಜಯ: ದೇವನಹಳ್ಳಿ ಭೂ ಸ್ವಾಧೀನ ಫೈನಲ್ ನೋಟಿಫಿಕೇಶನ್ ರದ್ದು ಮಾಡಿದ ಸಿಎಂ ಸಿದ್ದು

ಬೆಂಗಳೂರು: ದೇವನಹಳ್ಳಿಯ ರೈತಾಪಿ ವರ್ಗದ ಹೋರಾಟಕ್ಕೆ ಜಯ ದೊರೆತಿದ್ದು, ದೇವನಹಳ್ಳಿ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನ ಪ್ರಕ್ರಿಯೆ ರದ್ದು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿ ರೈತರ ಜೊತೆಗೆ ಸಭೆ ನಡೆಸಿದ ಬಳಿಕ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್ ಅನ್ನು ರದ್ದು ಮಾಡುವುದಾಗಿ ಸಿಎಂ ಹೇಳಿದ್ದಾರೆ.

ಈ ಜಮೀನಿಗೆ ಸಂಬಂಧಿಸಿದ ಹಾಗೆ ರೈತರು ಇತ್ತೀಚೆಗಷ್ಟೇ ತಾವು ಬೆಳೆದ ಬೆಳೆಯ ಸಮೇತ ವಿಧಾನಸೌಧಕ್ಕೆ ಬಂದು ಸಿಎಂ ‌ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಸದ್ಯ ರೈತರ ಹೋರಾಟಕ್ಕೆ ಸರ್ಕಾರ ತಲೆಬಾಗಿದ್ದು, ದೇವನಹಳ್ಳಿ ಸುತ್ತಮುತ್ತಲಿನ 13 ಹಳ್ಳಿಗಳ 1,777 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಟ್ಟಿದೆ.





















































 
 
error: Content is protected !!
Scroll to Top