ಸುಳ್ಯ: ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಜುಲೈ 27ರಂದು ಅರಂಬೂರಿನ ಮೂಕಾಂಬಿಕ ಭಜನಾ ಮಂದಿರದಲ್ಲಿ ನಡೆಯಲಿರುವ “ಆಟಿಲಿ ಒಂದ್ ದಿನ” ಕಾರ್ಯಕ್ರಮದ ಆಮಂತ್ರಣ ಪತ್ರ ಅನಾವರಣ ಕಾರ್ಯಕ್ರಮ ಅರಂಬೂರಿನ ಮೂಕಾಂಬಿಕ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.
ಗೌಡ ಘಟಕದ ಅಧ್ಯಕ್ಷ ಮನೋಹರ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಡಾ.ಅನುರಾಧಾ ಕುರುಂಜಿ ಆಮಂತ್ರಣ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೃಷ್ಣಪ್ಪ ಕೆದಂಬಾಡಿ, ರಾಜೀವಿ, ಕಾರ್ಯದರ್ಶಿಗಳಾದ ಗಂಗಾಧರ ನೆಡ್ಚಿಲ್, ವೇದಾವತಿ ನೆಡ್ಚಿಲ್, ಜತೆ ಕಾರ್ಯದರ್ಶಿ ಕವಿತಾ ಕುಡೆಕಲ್ಲು ಸಲಹೆಗಾರರಾದ ಪಡ್ಪು ಪದ್ಮಯ ಗೌಡ, ವಸಂತ ಅಮೆಚೂರು, ಹಾರಾವತಿ ಕುಡೆಕಲ್ಲು, ಉಷಾ ಚಂದ್ರಶೇಖರ, ಆಲೆಟ್ಟಿ ಗ್ರಾಮ ಸಮಿತಿ ಕಾರ್ಯದರ್ಶಿ ಅಶೋಕ ಪೀಚೆಮನೆ, ಸದಸ್ಯರಾದ ಚಂದ್ರಾವತಿ ಬದಿಕಾನ, ಸುಮನ ನೆಡ್ಚಿಲ್, ತೇಜಸ್ ಚಿದ್ಗಲ್ ಮೊದಲಾದವರು ಉಪಸ್ಥಿತರಿದ್ದರು.
























